ಬೆಂಗಳೂರು: ಕೆಲವೇ ದಿನಗಳಲ್ಲಿ ದೀಪಾವಳಿಯ ಮಹಾ ಪರ್ವ ಆರಂಭಗೊಳ್ಳುತ್ತಿದೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವನ್ನು ಕೊಡಲಾಗಿದೆ. ಈ ದಿನ ತಾಯಿ ಲಕ್ಷ್ಮಿಯ ಜೊತೆಗೆ ಶ್ರೀ ಗಣೇಶನಿಗೆ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ತಾಯಿ ಲಕ್ಷ್ಮಿಯನ್ನು ಬರಮಾಡಿಕೊಳ್ಳಲು ದೇಶಾದ್ಯಂತದ ಮನೆ ಮನೆಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಹೀಗಿರುವಾಗ ವಾಸ್ತು ಶಾಸ್ತ್ರದಲ್ಲಿಯೂ ಕೂಡ ಕೆಲ ನಿಯಮಗಳ ಕುರಿತು ಉಲ್ಲೇಖಿಸಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ನೀವು ತಾಯಿ ಲಕ್ಷ್ಮಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬಹುದು. ಇದಕ್ಕಾಗಿ ನೀವು ದೀಪಾವಳಿಗೂ ಮುನ್ನ ಅಥವಾ ದೀಪಾವಳಿಯ ದಿನ ಕೆಲ ವಿಶೇಷ ಲಕ್ಕಿ ಪ್ಲಾಂಟ್ ಗಳನ್ನು ನೆಡಬಹುದು. ಇವುಗಳನ್ನು ಮನೆಯಲ್ಲಿ ನೆಡುವುದರಿಂದ ತಾಯಿ ಲಕ್ಷ್ಮಿಯ ಅಪಾರ ಕೃಪೆ ಪ್ರಾಪ್ತಿಯಾಗುತ್ತದೆ. ಜೊತೆಗೆ ಮನೆಯಲ್ಲಿ ಧನ-ಧಾನ್ಯ, ಸಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ. ಬನ್ನಿ ಆ ಲಕ್ಕಿ ಪ್ಲಾಂಟ್ ಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)


COMMERCIAL BREAK
SCROLL TO CONTINUE READING

ಫಾರ್ಚ್ಯೂನ್ ಪ್ಲಾಂಟ್ 
ದೀಪಾವಳಿಯ ಶುಭ ಸಂಧಾರ್ಭದಲ್ಲಿ ನೀವು ನಿಮ್ಮ ಮನೆಯಲ್ಲಿ ಫಾರ್ಚ್ಯೂನ್ ಪ್ಲಾಂಟ್ ಅನ್ನು ತಂದು ನೆಡಬಹುದು. ಇದನ್ನು ಕಾರ್ನ್ ಪ್ಲಾಂಟ್ ಎಂದೂ ಕೂಡ ಕರೆಯುತ್ತಾರೆ. ಇದನ್ನು ಮನೆಗೆ ತಂದು ನೆಡುವುದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಇದು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ನೀಡುತ್ತದೆ. ನಿಂತುಹೋದ ನಿಮ್ಮ ಕೆಲಸಗಳಿಗೆ ಮತ್ತೆ ವೇಗ ನೀಡುತ್ತದೆ. ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಇದನ್ನು ಇಡುವುದು ಶುಭ. 

ತುಳಸಿ ಗಿಡ
ಕಾರ್ತಿಕ ಮಾಸದಲ್ಲಿ ತುಳಸಿ ಗಿಡ ನೆಡುವುದು ಶುಭ ಎಂದು ಭಾವಿಸಲಾಗುತ್ತದೆ. ಇದನ್ನು ದೀಪಾವಳಿ ದಿನ ನೆಡುವುದರಿಂದಲೂ ಕೂಡ ಹಲವು ಪಟ್ಟು ಅಧಿಕ ಫಲಗಳು ಪ್ರಾಪ್ತಿಯಾಗುತ್ತವೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ. ಇದಲ್ಲದೆ ತಾಯಿ ಲಕ್ಷ್ಮಿಯ ಕೃಪೆಯಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸಿ ಸಿಗುವುದರ ಜೊತೆಗೆ ಧನ-ಧಾನ್ಯ ವೃದ್ಧಿಯಾಗುತ್ತದೆ. 


ಶಂಖ ಪುಷ್ಪಿ
ದೀಪಾವಳಿ ದಿನ ಮನೆಗೆ ಶಂಖ ಪುಷ್ಪಿ ಗಿಡವನ್ನು ತಂದು ನೆಡುವುದು ಕೂಡ ಸಾಕಷ್ಟು ಶ್ರೇಯಸ್ಸನ್ನು ತರುತ್ತದೆ. ಇದನ್ನು ವಿಷ್ಣು ಪ್ರಿಯ ಎಂದೂ ಕೂಡ ಕರೆಯಲಾಗುತ್ತದೆ. ಹೀಗಾಗಿ ಇದು ವಿಷ್ಣು ಪ್ರಿಯೆಗೂ ಕೂಡ ಇಷ್ಟ. ಇದರಿಂದ ತಾಯಿ ಲಕ್ಷ್ಮಿ ಅತಿ ಪ್ರಸನ್ನಳಾಗಿ ಸುಖ-ಸಮೃದ್ಧಿ ದಯಪಾಲಿಸುತ್ತಾಳೆ ಎನ್ನಲಾಗುತ್ತದೆ. ವಾಸ್ತು ಪ್ರಕಾರ ಇದನ್ನು ಪೂರ್ವ, ಉತ್ತರ, ಉತ್ತರ ಪೂರ್ವ ದಿಕ್ಕಿನಲ್ಲಿ ನೆಡುವುದು ಹೆಚ್ಚಿನ ಫಲಗಳನ್ನು ನೀಡುತ್ತದೆ. ಇದಲ್ಲದೆ ಇದನ್ನು ನೀವು ಮನೆಯ ಮುಖ್ಯದ್ವಾರದ ಬಲಭಾಗದಲ್ಲಿಯೂ ಕೂಡ ನೆಡಬಹುದು. 

ಜೇಡ್ ಪ್ಲಾಂಟ್
ವಾಸ್ತು ಪ್ರಕಾರ ಧನ-ಐಶ್ವರ್ಯ, ಸುಖ-ಸಮೃದ್ಧಿ ನೀಡುವ ಈ ಸಸ್ಯವನ್ನು ದೀಪಾವಳಿ ದಿನ ಮನೆಯಲ್ಲಿ ನೆಡುವುದು ಅತ್ಯಂತ ಶುಭ ಎಂದು ಭಾವಿಸಲಾಗಿದೆ. ಇದನ್ನು ಮನೆಯ ಜೊತೆಗೆ ನಿಮ್ಮ ಕಚೇರಿಯಲ್ಲಿಯೂ ಕೂಡ ನೆಡಬಹುದು. ಇದರಿಂದ ಬಿಸ್ನೆಸ್ ಹೆಚ್ಚಾಗುತ್ತದೆ ಮತ್ತು ಅದರಿಂದ ನಿಮಗೆ ಸಾಕಷ್ಟು ಧನಲಾಭ ಕೂಡ ಸಿಗುತ್ತದೆ. ನೀವು ಇದನ್ನು ಮನೆಯ ಪೂರ್ವ ದಿಕ್ಕಿನಲ್ಲಿ ನೆಡಬಹುದು. 


ಇದನ್ನೂ ಓದಿ-ಮೂವತ್ತು ವರ್ಷಗಳ ಬಳಿಕ ಸ್ವರಾಶಿಯಲ್ಲಿ ಶನಿಯ ನೇರನಡೆ, ಧನ ಕುಬೇರ ಕೃಪೆಯಿಂದ ಈ ಜನರಿಗೆ ಐಶ್ವರ್ಯ ನಿಧಿ ಪ್ರಾಪ್ತಿ!

ರಬ್ಬರ್ ಪ್ಲಾಂಟ್
ವಾಸ್ತು ಶಾಸ್ತ್ರದ ಪ್ರಕಾರ ರಬ್ಬರ್ ಪ್ಲಾಂಟ್ ಅನ್ನು ಕೂಡ ಅತ್ಯಂತ ಶುಭ ಎಂದು ಭಾವಿಸಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಮನೆ ಖುಷಿಯಿಂದ ತುಂಬಿರುತ್ತದೆ ಮತ್ತು ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಇದನ್ನು ಆರ್ಥಿಕ ವೃದ್ಧಿ ಹಾಗೂ ಧನದ ಪ್ರತೀಕ ಎಂದು ಭಾವಿಸಲಾಗುತ್ತದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಕರಿಯರ್, ಬಿಸ್ನೆಸ್ ನಲ್ಲಿ ವೃದ್ಧಿಯಾಗುತ್ತದೆ. ಇದನ್ನು ಮನೆಯ ದಕ್ಷ್ಣ ಪೂರ್ವ ದಿಕ್ಕಿನಲ್ಲಿ ನೆಡಬಹುದು, ಆದರೆ, ಮನೆಯ ಹೊರಗೆ ಇಡಬೇಡಿ. 


ಇದನ್ನೂ ಓದಿ-ಶೀಘ್ರದಲ್ಲಿಯೇ ಸ್ವರಾಶಿಗೆ ಧನದಾತನ ಆಗಮನ, ಲಕ್ಷ್ಮಿ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಶುಕ್ರದೆಸೆ ಆರಂಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ