ಬೆಂಗಳೂರು: ನಟ ಧ್ರುವ ಸರ್ಜಾ ಭಾನುವಾರದಂದು ಪ್ರೇರಣಾ ಶಂಕರ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ.ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಸಂಸ್ಕೃತ ಬೃಂದಾವನದ ಕನ್ವೆಶನ್ ಹಾಲ್ ನಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.



COMMERCIAL BREAK
SCROLL TO CONTINUE READING

ಭಾನುವಾರ ಬೆಳಗ್ಗೆ 7.15 ರಿಂದ 7.45 ರ ವೃಶ್ಚಿಕ ಶುಭ ಲಗ್ನದ ವೇಳೆ ಸಪ್ತಪದಿ ತುಳಿದರು. ತಿರುಪತಿ ವೆಂಕಟೇಶ್ವರ ದೇವಸ್ತಾನದ ಮಾದರಿಯಲ್ಲಿ ಮದುವೆ ಮಂಟಪವನ್ನು ಸಿದ್ದಪಡಿಸಲಾಗಿತ್ತು. ಸುಮಾರು 18 ಪುರೋಹಿತರು ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಮದುವೆ ಕಾರ್ಯದಲ್ಲಿ ಧ್ರುವ ಅವರ ಅಭಿಮಾನಿಗಳು ಕುಟುಂಬ ಸದಸ್ಯರು ಹಾಗೂ ಸ್ನೇಹಿತ ಬಳಗದವರು ಹಾಜರಿದ್ದರು.



ಕನ್ನಡದಲ್ಲಿ 2012 ರಲ್ಲಿ ತೆರೆಕಂಡ ಅದ್ಧೂರಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಧ್ರುವ ಸರ್ಜಾ ಪಾದಾರ್ಪಣೆ ಮಾಡಿದ್ದರು. ಇದುವರೆಗೆ ಅವರು ನಟಿಸಿದ ಎಲ್ಲ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿವೆ.