Nani on Jai Bhim Movie : ಕೇಂದ್ರ ಸರ್ಕಾರ 2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಆಗಸ್ಟ್ 24 ರಂದು ಗುರುವಾರ 69ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟವಾಯಿತು. ಈ ಬಾರಿ ತೆಲುಗು ಚಿತ್ರಗಳು ಒಟ್ಟಿಗೆ 10 ಪ್ರಶಸ್ತಿಗಳನ್ನು ಗೆದ್ದಿವೆ. ನಟ ಅಲ್ಲು ಅರ್ಜುನ್ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆದರೆ, ದೇಶಾದ್ಯಂತ ಪ್ರಶಂಸೆ ಗಳಿಸಿದ ಜೈ ಭೀಮ್‌ ಚಿತ್ರಕ್ಕೆ ಒಂದೇ ಒಂದು ರಾಷ್ಟ್ರಪ್ರಶಸ್ತಿ ಸಿಗದಿರುವುದು ಟೀಕೆಗೆ ಗುರಿಯಾಗಿದೆ.


COMMERCIAL BREAK
SCROLL TO CONTINUE READING

'ಜೈ ಭೀಮ್' ಚಿತ್ರ ಪ್ರಶಸ್ತಿ ಪಡೆಯಲು ಅರ್ಹವಾಗಿದೆ, ಆದರೆ ಒಂದೇ ಒಂದು ಪ್ರಶಸ್ತಿಯನ್ನು ಈ ಸಿನಿಮಾಗೆ ನೀಡಿಲ್ಲ. ತಮಿಳಿನಲ್ಲಿ ಟಿ.ಜೆ.ಜ್ಞಾನವೇಲ್ ನಿರ್ದೇಶಿಸಿರುವ ಈ ಚಿತ್ರಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ತೀರ್ಪುಗಾರರಿಗೆ ಕಣ್ಣಿಗೆ ಬಿದ್ದಿಲ್ಲವೇ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಟೋಬಿʼ ಚನ್ನಾಗಿಲ್ಲ ಎಂದ ಮಹಿಳೆಗೆ ಧಮಕಿ, ಅಶ್ಲೀಲ ಪದ ಬಳಕೆ..! ಶೆಟ್ರು ಏನಂದ್ರು ಗೊತ್ತಾ..?


ಇದೀಗ 'ಜೈ ಭೀಮ್' ಚಿತ್ರಕ್ಕೆ ಪ್ರಶಸ್ತಿ ಸಿಗದಿರುವ ಬಗ್ಗೆ ಟಾಲಿವುಡ್ ಸ್ಟಾರ್ ಹೀರೋ ನಾನಿ ಕೂಡ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ಜೈ ಭೀಮ್' ಎಂದು ಬರೆದುಕೊಂಡು ಒಡೆದ ಹೃದಯದ ಚಿಹ್ನೆಯನ್ನು ಸ್ಟೋರಿಯಲ್ಲಿ ಹಾಕಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


‘ಜೈ ಭೀಮ್’ ಸಿನಿಮಾ ಖ್ಯಾತ ವಕೀಲ ಚಂದ್ರು ಅವರ ಜೀವನಾಧಾರಿತವಾಗಿತ್ತು. ತಮಿಳು ಸ್ಟಾರ್ ಹೀರೋ ಸೂರ್ಯ ವಕೀಲ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರವನ್ನು ತಮಿಳಿನಲ್ಲಿ ನಿರ್ಮಿಸಲಾಯಿತು ಮತ್ತು ನಂತರ ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಯಿತು. ಚಿತ್ರಕ್ಕೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.