Shivarajkumar on actor Siddharth : ರಾಜ್ಯದಾದ್ಯಂತ ಕಾವೇರಿ ಕಾವು ಹೆಚ್ಚಾಗುತ್ತಿದೆ. ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕರ್ನಾಟಕ ಬಂದ್‌ ಬೆಂಬಲಿಸಿ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಒಗ್ಗಟ್ಟಿನ ಮಂತ್ರ ಜಪಿಸಿದರು. ಈ ವೇಳೆ ನಟ ಶಿವರಾಜ್‌ಕುಮಾರ್‌ ಅವರು ತಮಿಳು ನಟ ಸಿದ್ಧಾರ್ಥ ಕ್ಷಮೆ ಕೇಳಿದರು.


COMMERCIAL BREAK
SCROLL TO CONTINUE READING

ಹೌದು.. ಪ್ರತಿಭಟನೆ ವೇಳೆ ಮಾತನಾಡಿದ ಶಿವಣ್ಣ, ಕಾವೇರಿ ತಾಯಿಗೆ ನೋವಾಗಿದೆ, ನಾವು ಅಲ್ಲೂ ಹೋಗಬೇಕು ಇಲ್ಲೂ ಇರ್ಬೇಕು. ಕಲಾವಿದರು ಪ್ರತಿಭಟನೆಗೆ ಬಂದು ಏನ್ ಮಾಡಬೇಕು ಹೇಳಿ, ರೈತ ಅನ್ನೋದು ಕಾಮನ್ ಪದ ಎಲ್ಲಾ ರೈತರು ಒಂದೇ ಅಲ್ವಾ..? ಎಂದು ಪ್ರಶ್ನೆ ಮಾಡಿದರು.


ಇದನ್ನೂ ಓದಿ: ಸಲಾರ್‌ʼ ರಿಲೀಸ್‌ ಡೇಟ್‌ ಫಿಕ್ಸ್‌ : ಶಾರುಖ್‌-ಪ್ರಭಾಸ್‌ ಸಿನಿಮಾ ಮುಖಾಮುಖಿ, ಗೆಲುವು ಯಾರಿಗೆ..?


ಅಲ್ಲದೆ, ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಬೇಕು ಗಲಾಟೆ ಮಾಡಿದ್ರೆ ಏನೂ ಆಗಲ್ಲ. ನಿನ್ನೆ ಒಬ್ಬ ತಮಿಳು ನಟನಿಗೆ ಅವಮಾನವಾಗಿದೆ, ಮನಸ್ಸಿಂದ ಯೋಚನೆ ಮಾಡಿ ನೊಡಿ ಈ ರೀತಿ ಆದ್ರೆ ಹೋರಾಟಕ್ಕೆ ಮರ್ಯಾದೆ ಇರಲ್ಲ. ಇನ್ನೊಬ್ಬರಿಗೆ ನೋವು ಮಾಡಬಾರದು, ಕನ್ನಡ ಜನ ತುಂಬಾ ಒಳ್ಳೆಯವರು ಎಂದ ಶಿವಣ್ಣ ನಟ ಸಿದ್ಧಾರ್ಥ್ ಅವರ ಕ್ಷಮೆ ಕೇಳಿದರು.


ಮಾತು ಮುಂದುವರೆಸಿ, ಯಾರು ಬೇಜಾರು ಮಾಡ್ಕೋಬೇಡಿ, ನಾನು ಹೃದಯದಿಂದ ಮಾತಾಡ್ತೀನಿ, ಇವತ್ತು ಇರ್ತೀವಿ, ನಾಳೆ ಇರಲ್ಲ ಎಲ್ಲರೂ ಒಂದೇ ಇಲ್ಲಿ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದರು. ಪ್ರತಿಭಟನೆ ವೇಳೆ ದರ್ಶನ್‌, ಉಮಾಶ್ರೀ, ಹಂಸಲೇಖ, ವಸಿಷ್ಠ, ದುನಿಯಾ ವಿಜಯ್‌, ಧ್ರವ ಸರ್ಜಾ ಸೇರಿದಂತೆ ಸ್ಯಾಂಡಲ್‌ವುಡ್‌ ಸ್ಟಾರ್‌ ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.