ಬೆಂಗಳೂರು : ಕನ್ನಡಿಗರ ಹೃದಯ ಸಾರ್ವಭೌಮ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಕನಸಿನ ಕೂಸು ಗಂಧದಗುಡಿ ಪ್ರೀ ಇವೆಂಟ್‌ ರಿಲೀಸ್‌ ಕಾರ್ಯಕ್ರಮ ʼಪುನೀತ್‌ ಪರ್ವʼ ಅನೇಕ ತಾರಾಬಳಗಕ್ಕೆ ಸಾಕ್ಷಿಯಾಗಿತ್ತು. ಅದೆ ರೀತಿ ಎಲ್ಲಾ ಸ್ಟಾರ್‌ಗಳು ರಾಜರತ್ನನನ್ನು ನೆನೆದು ಬಾವುಕರಾದರು. ಅಲ್ಲದೆ, ನಟಿ ಅನು ಪ್ರಭಾಕರ್‌ ಅವರು, ಕರ್ನಾಟಕ ರತ್ನನನ್ನು ಸ್ಮರಿಸಿದರು. ಹಾಗೂ ಅನ್ನಪೂರ್ಣಳಾಗಿದ್ದ ತಮ್ಮನ್ನು ಅನುಪ್ರಭಾಕರ್‌ ಆಗಿ ಬದಲಾಯಿಸಿದ್ದು ಪಾರ್ವತಮ್ಮ ರಾಜ್‌ಕುಮಾರ್‌ ಎಂದು ದೊಡ್ಮನೆಯ ಹೃದಯವೈಶಾಲ್ಯ ನೆನಪಿಸಿದರು.


COMMERCIAL BREAK
SCROLL TO CONTINUE READING

ನಗರದ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ನಡೆದ ಗಂಧದಗುಡಿ ಪ್ರೀ ಇವೆಂಟ್‌ ರಿಲೀಸ್‌ ಕಾರ್ಯಕ್ರಮ ʼಪುನೀತ್‌ ಪರ್ವʼ ದಲ್ಲಿ ಭಾಗವಹಿಸಿ ಮಾತನಾಡಿ ಅನು ಪ್ರಭಾಕರ್‌, ಅನ್ನಪೂರ್ಣಳಾಗಿ ನನಗೆ ಜನ್ಮ ಕೊಟ್ಟಿದ್ದು, ನನ್ನ ತಂದೆ- ತಾಯಿ ಆದ್ರೆ, ಅನು ಪ್ರಭಾಕರ್‌ ಆಗಿ ಜನ್ಮ ಕೊಟ್ಟಿದ್ದು, ಅಮ್ಮ ಪಾರ್ವತಮ್ಮ ಮತ್ತು ಅಪ್ಪಾಜಿ ರಾಜಕುಮಾರ್‌ ಅವರು, ಜೀವನ ಪೂರ್ತಿ ಆ ಕುಟುಂಬಕ್ಕೆ ನಾನು ಚಿರರುಣಿ. ಜೇಮ್ಸ್‌ನಲ್ಲಿ ನಾನು ಅಪ್ಪು ಹಾಗೂ ಪ್ರೀಯಾ ಜೊತೆ ಅಭಿನಯಿಸಿದೆ. ಆದ್ರೆ ಅದೇ ಕೊನೆಯ ಸಿನಿಮಾ ಆಯ್ತು. ಬೇಜಾರಾಯ್ತು.. ಆದ್ರೆ ಹೆಮ್ಮೆಯ ವಿಷಯ ಏನಂದ್ರೆ, ನಾನು ನನ್ನ ಮಗುವಿಗೆ ನೋಡು.. ಇವರೆ ಪುನೀತ್‌ ರಾಜ್‌ಕುಮಾರ್‌.. ಇವರ ಜೊತೆ ನಾನು ನಟಿಸಿದ್ದೆ ಅಂತ ಹೇಳುವ ಭಾಗ್ಯ ಸಿಕ್ಕಿತು ಎಂದರು.


ಇದನ್ನೂ ಓದಿ: ʼಗಂಧದಗುಡಿʼ ರಿಸ್ಕ್‌, ಇದೇಲ್ಲ ಬೇಕಾ ಅಪ್ಪು ಎಂದಿದ್ದೆ.. ಅವರ ಉತ್ತರ ಅದ್ಭುತ..!


ಅಲ್ಲದೆ, ಅಶ್ವಿನಿ ಅವರು ಕರೆ ಮಾಡಿ ಹೇಳಿದ್ರು, ಗಂಧದಗುಡಿ ಒಂದು ಸೆಲೆಬ್ರೇಷನ್‌ ಆಗಿರುತ್ತೆ. ವೈಟ್‌ ಕಲರ್‌ ಬಟ್ಟೆ ಧರಿಸ್ಬೇಕು ಅಂದಿದ್ರು. ಈ ಸದ್ಯ ನಾನು ಉಟ್ಟ ಸೀರೆ ಜೇಮ್ಸ್‌ನಲ್ಲಿ ಅವರ ಜೊತೆ ಅಭಿನಯಿಸುವಾಗ ತೊಟ್ಟಿದ್ದ ಸೀರೆ. ಡೈರೆಕ್ಟರ್‌ ಹತ್ರ ಕೇಳಿ ಎರಡು ಸೀರೆ ತಗೊಂಡೆ ಒಂದು ಬಿಳಿ ಒಂದು ಕಪ್ಪು. ಇವೆರಡು ಅಪ್ಪು ನೆನಪಿಗೆ ನನ್ನ ಜೊತೆ ಇರ್ತವೆ. ಇವತ್ತು ನಾನು ಯಾವುದೇ ಕಾರಣಕ್ಕೂ ಬೇಜಾರಾಗಲ್ಲ. ಯಾಕಂದ್ರೆ ಇವತ್ತು ಅಪ್ಪು ಸಂಭ್ರಮ, ಅವರು ಕನ್ನಡ ಇರೋವರೆಗೂ ನಮ್ಮ ಜೊತೆ ಇರ್ತಾರೆ ಎಂದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ