ಬಿಬಿಎಂಪಿ ಮಾಡಲು ಆಗದ ಕೆಲಸ ಮಾಡಿ ಸೈ ಅನಿಸಿಕೊಂಡಿದ್ದಾರೆ ನಟಿ ಕಾರುಣ್ಯರಾಮ್.ಯೆಸ್ ರಾತ್ರೋ ರಾತ್ರಿ ರಸ್ತೆ ಗುಂಡಿಗಳ ಮುಚ್ಚಿದ ಕಾರುಣ್ಯ ರಾಮ್ ಗೆ ಎಲ್ಲಾರು ಬಿಗ್ ಸಲ್ಯೂಟ್ ಹೊಡೆಯುತ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ  ಕಂಪ್ಲೀಟ್ ಆಗಿ ಮುಕ್ತಿ ಕೊಟ್ಟ ನಟಿ ಕಾರುಣ್ಯ ರಾಮ್ ರನ್ನ ಜನ ಈಗ ಹಾಡಿಹೊಗಳುತ್ತಿದ್ದಾರೆ.ಸ್ನೇಹಿತರು ,ಸಹೋದರಿ ಜೊತೆ ಸೇರಿ ಒಂದೊಳ್ಳೆ ಕೆಲಸ ಮಾಡೊ ಮೂಲಕ ಕಾರುಣ್ಯ ಎಲ್ಲರಿಗೂ ಮಾದರಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಬುಧವಾರ ರಾತ್ರಿ 11ಗಂಟೆಗೆ ಅರ್ ಅರ್ ನಗರದ ಕೆಲ ರಸ್ತೆಗಳ ಗುಂಡಿ ಮುಚ್ಚಿದ ಕಾರುಣ್ಯ ರಾಮ್ ಬಿಬಿಎಂಪಿ ಮಾಡಿದ ಎಡವಟ್ಟು ಕೆಲಸಕ್ಕೆ ಟಕ್ಕರ್ ಕೊಟ್ಟಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೇ ಬೆಂಗಳೂರಿನ ರಸ್ತೆ ಗುಂಡಿಗಳಿಂದ ಬರೀ ತಿಂಗಳಿಗೆ ನೂರಾರು ಸಾವುನೋವಿನ ಪ್ರಕರಣಗಳು ಆಗುತ್ತಲೇ ಇರುತ್ತವೆ.ಇನ್ನೂ ವರ್ಷದ ಕೌಂಟ್ ಮಾಡಿದ್ರೆ ಸಾವಿರ ಸಾವಿರ ಪ್ರಕರಣ ಗಳು ಸಿಗುತ್ತವೆ.


ಇದನ್ನೂ ಓದಿ-ಕಳೆದ ವರ್ಷ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ನಟ-ನಟಿಯರು ಯಾರು ಅಂತ ಗೊತ್ತಾ..!


ಯಾಕೆ BBMP ಜವಾಬ್ದಾರಿ ಇಲ್ಲದ ಕೆಲಸ ಮಾಡುತ್ತೋ ಅಂತ ಜನ ಕೂಡ ಛೀಮಾರಿ ಹಾಕುತ್ತಾರೆ. ತೆಗೆದ ಗುಂಡಿಯನ್ನ ಮುಚ್ಚದೇ ಜನರ ಪ್ರಾಣದ ಜೊತೆ ಆಡೋ ಚೆಲ್ಲಾಟವನ್ನ ಇನ್ನೂ ಮುಂದಾದ್ರು ನಿಲ್ಲಿಸಬೇಕು ಅನ್ನೋದು ಜೀ ಕನ್ನಡ ನ್ಯೂಸ್ ಕಳಕಳಿ ಕೂಡ ಹೌದು.
ಇನ್ನೂ ಕಾರುಣ್ಯ ರಾಮ್ ಕರೋನ ಸಂದರ್ಭದಲ್ಲಿ ಕೂಡ ಜನರಿಗೆ ಅಗತ್ಯವಿರೋ ಸಾಮಗ್ರಿಗಳನ್ನ ಪೂರೈಸೋ ಮೂಲಕ ಬಡವರಿಗೆ ಸಹಕಾರಿ ಆಗಿದ್ದರು.ಇದೀಗ ಫ್ಯಾಮಿಲಿ ಮತ್ತು ಸ್ನೇಹಿತರನ್ನ ಒಟ್ಟುಗೂಡಿಸಿ ರಸ್ತೆಯಲ್ಲಿರೋ ಗುಂಡಿ ಮುಚ್ಚೋ ಮೂಲಕ ಎಲ್ಲಾರ ಪ್ರಶಂಸೆಗೆ ಕಾರಣರಾಗಿದ್ದಾರೆ.ಎನಿ ವೇ ನಿಮ್ಮ ಕೆಲಸಕ್ಕೆ ನಮ್ಮ ಕಡೆಯಿಂದಲೂ ಸಲಾಂ ಕಾರುಣ್ಯ ರಾಮ್.


ಇದನ್ನೂ ಓದಿ-ಒಳ್ಳೆಯವನು ಅನಿಸಿಕೊಳ್ಳೋಕೆ ತುಂಬಾ ಆಕ್ಟ್ ಮಾಡ್ಬೇಕು, ನಾನು ಕೆಟ್ಟವನು ಸ್ವಾಮಿ : ಡಿ ಬಾಸ್ ಈ ರೀತಿ ಹೇಳಿದ್ಯಾಕೆ ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.