Manoj Muntashir In Controversy: ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ಆದಿಪುರುಷ' ಚಿತ್ರ ಬಿಡುಗಡೆಯಾದಾಗಿನಿಂದ ವಿವಾದದ ಸುಳಿಗೆ ಸಿಲುಕಿದೆ. ಈಗಾಗಲೇ ಚಿತ್ರದ ಸಂಭಾಷಣೆಗಾಗಿ ಮನೋಜ್ ಮುಂತಾಶಿರ್ ಟೀಕೆಗೆ ಗುರಿಯಾಗಿದ್ದು, ಈಗ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂಥ ಮಾತುಗಳನ್ನಾಡಿದ್ದಾರೆ. ಹನುಮಾನ್ ದೇವರಲ್ಲ ಎಂದು ಮನೋಜ್ ಹೇಳಿದ್ದಾರೆ. ಮನೋಜ್‌ನ ಈ ಹೇಳಿಕೆಗೆ ಇದೀಗ ಜನರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ, ಖಾಸಗಿ ಸುದ್ದಿವಾಹಿಯಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನೋಜ್ ಭಜರಂಗ್ ಬಲಿ ದೇವರಲ್ಲ, ಅವನೊಬ್ಬ ಭಕ್ತ, ನಾವು ನಂತರದ ಕಾಲದಲ್ಲಿ ಅವನನ್ನು ದೇವರನ್ನಾಗಿಸಿದ್ದೇವೆ ಎಂದಿದ್ದಾರೆ. ಮನೋಜ್ ಅವರ ಈ ಸಂದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಜನರು ಮೊನೋಜ್ ಗೆ ಮೌನವಾಗಿರಲು ಸಲಹೆ ನೀಡುತ್ತಿದ್ದಾರೆ.


ಕೆಲವು ಬಳಕೆದಾರರ ಪ್ರತಿಕ್ರಿಗಳು ಇಲ್ಲಿವೆ..


'Adipurush' ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದ ಅನುರಾಗ್ ಠಾಕೂರ್


ಸೋಮವಾರ ಚಿತ್ರದ ಗಳಿಕೆಯಲ್ಲಿ ಭಾರಿ ಕುಸಿತ
ಸೋಮವಾರ ಚಿತ್ರದ ಕಲೆಕ್ಷನ್ ನಲ್ಲಿ ಭಾರೀ ಇಳಿಕೆಯಾಗಿದೆ. ಸೋಮವಾರದಂದು ಚಿತ್ರದ ಗಳಿಕೆ ಶೇ.70ರಷ್ಟು ಕಡಿಮೆಯಾಗಿದೆ. ವರದಿಗಳ ಪ್ರಕಾರ, ಚಿತ್ರದ ಹಿಂದಿ ಆವೃತ್ತಿ ಸೋಮವಾರ ಕೇವಲ 9 ಕೋಟಿ ಗಳಿಸಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದೆ, ಆದರೆ ಚಿತ್ರದ ಬಗ್ಗೆ ವಿವಾದಗಳು ಹೆಚ್ಚಾಗುತ್ತಿದ್ದಂತೆ, ಜನರು ಚಿತ್ರವನ್ನು ನೋಡುವ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ.


Adipurush Controversy: 'ಕೇವಲ ಸಂಭಾಷಣೆ ಬದಲಾಯಿಸುವುದು ಸಾಕಾಗುವುದಿಲ್ಲ, ಕ್ಷಮೆ ಕೋರಿ'


ವರದಿಗಳ ಪ್ರಕಾರ ಈ ಚಿತ್ರವನ್ನು 600 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ಪ್ರಭಾಸ್, ಕೃತಿ ಮತ್ತು ಸೈಫ್ ಅವರಲ್ಲದೆ, ಸನ್ನಿ ಸಿಂಗ್, ಸೋನಲ್ ಚೌಹಾಣ್, ಸಿದ್ಧಾರ್ಥ್ ನಿಗಮ್ ಸಹ ನಟಿಸಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ