ಶಿವಮೊಗ್ಗ: ಡಾ. ಶಿವರಾಜಕುಮಾರ್‌ ನಟನೆಯ ಕಬ್ಜ ಸಿನಿಮಾ ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿತ್ತು. ಸದ್ಯ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕೆಲ ನಾಯಕರ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದರ ನಡುವೆ ಮುಂಬರುವ ಸಿನಿಮಾಗಳ ಸುಳಿವು ನೀಡಿದ್ದಾರೆ. ಇದರ ಬೆನ್ನಲೇ ಕರುನಾಡ ಮುತ್ತಣ ಕೆಲ ಸಿನಿಮಾಗಳ ತಯಾರಿಯಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಶಿವಮೊಗ್ಗದಲ್ಲಿ ನಟ ಶಿವರಾಜ್​ಕುಮಾರ್, ಅವರ ಪತ್ನಿ ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಹಾಗೂ ಪ್ರಚಾರ ಕುರಿತು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ:  Choreographer Chaitanya: ಖ್ಯಾತ ಡ್ಯಾನ್ಸ್  ಕೋರಿಯೊಗ್ರಾಫರ್ ಚೈತನ್ಯ ಆತ್ಮಹತ್ಯೆ!


‘ಕಬ್ಜ’ ಸಿನಿಮಾ ಕ್ಲೈಮ್ಯಾಕ್ಸ್​ನಲ್ಲಿ ಶಿವಣ್ಣನ ಎಂಟ್ರಿ ವೀಕ್ಷಕರಿಗೆ ಸಖತ್‌ ಥ್ರಿಲ್‌ ನೀಡಿತ್ತು. ಇದರ ನಡುವೆ  ‘ಕಬ್ಜ 2’ ಸಿನಿಮಾ ಎಲ್ಲೆಡೆ ಕೇಳಿ ಬರುತ್ತಿದೆ. ಈ ಬಗ್ಗೆ ಮಾತಾನಾಡಿರುವ ಶಿವಣ್ಣ, ಕಬ್ಜ 2 ಕಥೆ ಕೇಳಿಲ್ಲಎಂದಿದ್ದಾರೆ. 


ಇದನ್ನೂ ಓದಿ: Choreographer Chaitanya: ಖ್ಯಾತ ಡ್ಯಾನ್ಸ್  ಕೋರಿಯೊಗ್ರಾಫರ್ ಚೈತನ್ಯ ಆತ್ಮಹತ್ಯೆ!


ಇನ್ನುಳಿದಂತೆ ಅವರ ಮುಂಬರುವ ಚಿತ್ರ ಭೈರತಿ ರಣಗಲ್​ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ದೇಶಕ ನರ್ತನ್ ಹಾಗೂ ಶಿವರಾಜ್​ಕುಮಾರ್ ಅವರ ಕಾಂಬಿನೇಷನ್​ನಲ್ಲಿ ಮೂಡಿ ಬಂದ ‘ಮಫ್ತಿ’ ಸಿನಿಮಾ ಯಶಸ್ಸು ಕಂಡಿತ್ತು. ಈಗ ಚಿತ್ರಕ್ಕೆ ಪ್ರೀಕ್ವೆಲ್ ಸಿದ್ಧಗೊಳ್ಳುತ್ತಿದೆ. ‘ಭೈರತಿ ರಣಗಲ್’ ಎಂದು ಹೆಸರು ಇಡಲಾಗಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.


‘ರಣಗಲ್ ಮೇಲೆ ಕಾನ್ಸಂಟ್ರೇಷನ್ ಜಾಸ್ತಿ’ ಎಂದಿದ್ದಾರೆ. ಅವರ ಇನ್ನೊಂದು ಸಿನಿಮಾವಾದ ‘ಘೋಸ್ಟ್’ ಬಗ್ಗೆ ಮಾತಾನಾಡಿದ  ಶಿವಣ್ಣ, ಈ ಸಿನಿಮಾ ಕರ್ನಾಟಕ ಮಾತ್ರವಲ್ಲ ಈಡೀ ಭಾರತಕ್ಕೆ ಒಳ್ಳೆಯ ಸಿನಿಮಾ ಆಗತ್ತೆ. ಈ ವಿಚಾರದಲ್ಲಿ ಅತಿಆಸೆ ಪಡ್ತಾ ಇದಿನೋ ಗೊತ್ತಿಲ್ಲ’ ಎಂದರು. ಸದ್ಯ ಕರುನಾಡ ಮುತ್ತಣ ಮುಂಬರುವ ವಿಧಾನ ಸಭೆ ಚುನಾವಣೆಯ ಪ್ರಚಾರದ ಬ್ಯೂಸಿಯಾಗಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.