ಮುಂಬೈ : ಕೆಜಿಎಫ್ 2 ಹಾಗೂ ಆರ್, ಆರ್, ಆರ್ ನಂತಹ ದಕ್ಷಿಣ ಭಾರತದ ಸಿನಿಮಾಗಳು ಈಗ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.ಅಷ್ಟೇ ಅಲ್ಲದೆ ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚಿನ ಕಲೆಕ್ಷನ್ ನ್ನು ಮಾಡುತ್ತಿವೆ, ಇಂತಹ ಸಂದರ್ಭದಲ್ಲಿ ಒಟ್ಟಾರೆಯಾಗಿ ಭಾರತೀಯ ಸಿನಿಮಾ ಬೆಳೆಯುತ್ತಿರುವ ರೀತಿಯ ಕುರಿತಾಗಿ ರಜನಿಕಾಂತ್ ಪುತ್ರಿ ಐಶ್ವರ್ಯ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಐಶ್ವರ್ಯ ಅವರು ನಿರ್ದೇಶಕಿಯಾಗಿ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಪ್ಯಾನ್ ಇಂಡಿಯಾ, ಸಿನಿಮಾ ಹಾಗೂ ತಮ್ಮ ವೃತ್ತಿ ಜೀವನದ ಕುರಿತಾದ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ. "ಒಟ್ಟಾರೆಯಾಗಿ ಭಾರತೀಯ ಚಿತ್ರರಂಗ ಸಾವಯವವಾಗಿ ವಿಕಸನಗೊಂಡಿದೆ.ಇದಕ್ಕೆ ಪ್ರಮುಖವಾಗಿ ಪ್ರೇಕ್ಷಕರೇ ಕಾರಣವಾಗಿದ್ದಾರೆ.ಅವರು ಚಿತ್ರ ನಿರ್ಮಾಪಕರಿಗೆ ಬಾಕ್ಸ್ ನ ಹೊರಗೆ ಯೋಚಿಸುವ ಸ್ವಾತಂತ್ರವನ್ನು ನೀಡಿದ್ದಾರೆ.ಹೊಸ ಮತ್ತು ವಿಭಿನ್ನ ರೀತಿಯ ವಿಷಯವನ್ನು ಪ್ರೋತ್ಸಾಹಿಸಿದ್ದಾರೆ, ಹಾಗಾಗಿ ನಾನು ಮುಂಬರುವ ದಿನಗಳಲ್ಲಿ ಇದೇ ಮಾದರಿ ಮುಂದುವರೆಯಲಿದೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.


ಇದನ್ನೂ ಓದಿ: KGF Chapter 2 Records: ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ ಕೆಜಿಎಫ್ ಚಾಪ್ಟರ್​ 2


ಐಶ್ವರ್ಯಾ ಅವರು ಬಾಲಿವುಡ್ ನ  ಓಹ್ ಸಾಥಿ ಚಲ್ ಚಿತ್ರದ ಮೂಲಕ ನಿರ್ದೇಶಕಿಯಾಗಿ ಮರಳಲು ಸಜ್ಜಾಗಿದ್ದಾರೆ. ಈ ಚಿತ್ರದ ಮೂಲಕ, ಐಶ್ವರ್ಯಾ 7 ವರ್ಷಗಳ ವಿರಾಮದ ನಂತರ ಮತ್ತೆ ಚಲನಚಿತ್ರಗಳಿಗೆ ಮರಳಲಿದ್ದಾರೆ.ತಮ್ಮ ಸುದೀರ್ಘ ವಿರಾಮದ ಕುರಿತಾಗಿ ಮಾತನಾಡುತ್ತಾ ಅವರು ಮಕ್ಕಳ ಪೋಷಣೆಗಾಗಿ ತಾವು ಸುದೀರ್ಘ ವಿರಾಮವನ್ನು ತೆಗೆದುಕೊಳ್ಳಬೇಕಾಗಿ ಬಂತು ಎಂದು ಅವರು ಹೇಳುತ್ತಾರೆ."ನಾನು ತುಂಬಾ ವೇಗವಾಗಿ ಬೆಳೆಯುತ್ತಿರುವ ನನ್ನ ಪುತ್ರರೊಂದಿಗೆ (ಯಾತ್ರಾ ರಾಜ ಮತ್ತು ಲಿಂಗ ರಾಜ) ಹೆಚ್ಚು ಸಮಯ ಕಳೆಯಲು ಬಯಸಿದ್ದರಿಂದ ನಾನು ವಿರಾಮ ತೆಗೆದುಕೊಂಡೆ. ಈಗ ಒಂದು ರೀತಿ ನನಗೆ ಸಂತಸವೆನಿಸುತ್ತದೆ. ಈಗ ನನ್ನ ಮಕ್ಕಳು ಕೂಡ ದೊಡ್ಡವರಾಗಿರುವುದರಿಂದ ನನಗೆ ಇನ್ನು ಮುಂದೆ ಹೆಚ್ಚಿನ ಸಮಯ ಸಿಗಲಿದೆ ಎಂದು ಅವರು ಹೇಳಿದರು. ಧನುಶ್ ಅವರು ತಮ್ಮ 18 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದರು. ಈ ಸಂದರ್ಭದಲ್ಲಿ ಅವರು ಪರಸ್ಪರ ಸುದೀರ್ಘ ಟಿಪ್ಪಣಿ ಮೂಲಕ ತಮ್ಮ ದಾಂಪತ್ಯಕ್ಕೆ ಕೊನೆ ಹಾಡಿದ್ದರು. "18 ವರ್ಷಗಳ ಕಾಲ ಒಟ್ಟಿಗೆ ಸ್ನೇಹಿತರಂತೆ ಇರುವುದರ ಜೊತೆಗೆ ದಂಪತಿಗಳಾಗಿ ಪೋಷಕರಾಗಿ ಮತ್ತು ಹಿತೈಸಿಗಳಾಗಿ ಪರಸ್ಪರರ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮೂಲಕ ಸಾಗಿತ್ತು.ಆದರೆ ಇಂದು ನಾವು ನಮ್ಮ ಹಾದಿಗಳನ್ನು ಪ್ರತ್ಯೇಕಿಸುವ ಸ್ಥಳದಲ್ಲಿ ನಿಂತಿದ್ದೇವೆ....ಐಶ್ವರ್ಯಾ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ' ಎಂದು ಬರೆದುಕೊಂಡಿದ್ದರು.


ಇದನ್ನೂ ಓದಿ: ವಿಶ್ವದ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಗೆ ಎರಡನೇ ಸ್ಥಾನ..! ಫ್ರೀ ಟಿಕೆಟ್ ಘೋಷಿಸಿದ ಈ ಕಂಪನಿ..!


ಖ್ಯಾತ ನಿರ್ಮಾಪಕಿ ಕಸ್ತೂರಿ ರಾಜಾ ಅವರ ಪುತ್ರರಾಗಿರುವ ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು 2004 ರಲ್ಲಿ ವಿವಾಹವಾದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.