ನವದೆಹಲಿ: ಬಾಲಿವುಡ್ ನಟ ಅಕ್ಷಯ ಕುಮಾರ್ ಹಾಗೂ ಕರೀನಾ ಕಪೂರ್ ತಮ್ಮ ಮುಂಬರುವ ಚಿತ್ರ 'ಗುಡ್ ನ್ಯೂಸ್' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ಕಿಯಾರಾ ಅಡ್ವಾಣಿ ಹಾಗೂ ದಿಲಜೀತ್ ದೊಸಾಂಝಾ ಜೊತೆ ಸೇರಿ ಕಪಿಲ್ ಶರ್ಮಾ ಷೋಗೆ ಭೇಟಿ ನೀಡಿದ್ದಾರೆ.  ಈ ವೇಳೆ ಅಕ್ಷಯ ಕುಮಾರ್ ಕಪಿಲ್ ಶರ್ಮಾ, ಅಮಿತಾಭ್ ಅಭಿನಯದ 'ಸೂರ್ಯವಂಶಂ' ಚಿತ್ರ ಹಾಗೂ ಅರ್ಚನಾ ಪೂರಣ್ ಸಿಂಗ್ ಅವರ ಕುರಿತು ತಮಾಷೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಕಪಿಲ್ ಶರ್ಮಾ ಶೋನ ಮುಂಬರುವ ಎಪಿಸೋಡ್ ನ ಕೆಲ ದೃಶ್ಯಗಳು ಇದೀಗ ವೈರಲ್ ಆಗಿವೆ. ಈ ಶೋನಲ್ಲಿ ಮಾತನಾಡಿರುವ ಅಕ್ಷಯ ಕುಮಾರ್ ನೀವು ಶೋನಲ್ಲಿ ಯುವಕರನ್ನು ಯುವತಿಯರನ್ನಾಗಿಸಿ ಏಕೆ ಕರೆತರುವಿರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅರ್ಚನಾ ಪೂರಣ್ ಸಿಂಗ್ ಕೂಡ ನೀವು ಕಾರ್ಯಕ್ರಮದ ನಿರೂಪಣೆ ಯಾಕೆ ಮಾಡುತ್ತಿರುವಿರಿ ಎಂದು ಮರುಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅಕ್ಷಯ ಕುಮಾರ್ ನಾನು ಬೇರೆಯವರಿಂದ ಕೆಲಸ ಕಸಿದುಕೊಳ್ಳುವುದು ನಿಮ್ಮಿಂದಲೇ ಕಲಿತುಕೊಂಡಿದ್ದೇನೆ ಎಂದು ಉತ್ತರಿಸುತ್ತಾರೆ. ಈ ಶೋನ ಎಲ್ಲ ಕಲಾವಿದರ ಕುರಿತು ತಮಾಷೆ ಮಾಡಿರುವ ಅಕ್ಷಯ್, ಈ ಎಲ್ಲ ಕಲಾವಿದರು ಚಾನಲನ್ನು ಕೊಳ್ಳೆಹೊಡೆದಿದ್ದು, ಇದೀಗ ಚಾನಲ್ ಬಳಿ ಅಮಿತಾಭ್ ಬಚ್ಚನ್ ಅಭಿನಯದ 'ಸೂರ್ಯವಂಶಂ' ಚಿತ್ರ ತೋರಿಸುವುದನ್ನು ಬಿಟ್ಟು ಬೇರೆ ಮಾರ್ಗವೇ ಉಳಿದಿಲ್ಲ ಎಂದು ತಮಾಷೆ ಮಾಡಿದ್ದಾರೆ.



ಅಕ್ಷಯ ಅಭಿನಯದ ಚಿತ್ರ 'ಗುಡ್ ನ್ಯೂಸ್' ಇದೇ ತಿಂಗಳ 27ನೇ ತಾರೀಖಿಗೆ ತೆರೆಕಾಣಲಿದೆ. ರಾಜ್ ಮೆಹ್ತಾ ನಿರ್ದೇಶನದಲ್ಲಿ ತಯಾರಾದ ಈ ಚಿತ್ರ ಟೆಸ್ಟ್ ಟ್ಯೂಬ್ ಬೇಬಿ ಅಥವಾ IVF ವಿಷಯದ ಮೇಲೆ ಆಧರಿಸಿದೆ. ಈ ಚಿತ್ರದ ಬಳಿಕ ಅಕ್ಷಯ ಅಭಿನಯದ 'ಸೂರ್ಯವಂಶಿ', 'ಪೃಥ್ವಿರಾಜ್' 'ಲಕ್ಷ್ಮಿ ಬಾಂಬ್', 'ರೌಡಿ ರಾಥೌಡ್-2', 'ಬಚ್ಚನ್ ಪಾಂಡೆ' ಹಾಗೂ 'ಬೆಲ್ ಬಾಟಮ್' ಚಿತ್ರಗಳು ಪ್ರಮುಖವಾಗಿವೆ.