Annapoorni movie Controversy : ಅನ್ನಪೂರ್ಣಿ ಸಿನಿಮಾ ಶ್ರೀರಾಮನ ಕುರಿತಾದ ಹೇಳಿಕೆಯಿಂದಾಗಿ ವಿವಾದಕ್ಕೆ ಗುರಿಯಾಗಿತ್ತು. ಅಲ್ಲದೆ, ಚಿತ್ರವನ್ನು ಒಟಿಟಿ ಪ್ಲಾಟ್‌ ಫಾರ್ಮ್‌ನಿಂದ ತೆಗೆದುಹಾಕಲಾಗಿತ್ತು. ಇದೀಗ ಈ ಕುರಿತು ಕ್ಷಮೆಯಾಚಿಸಿರುವ ಲೇಡಿ ಸೂಪರ್‌ ಸ್ಟಾರ್‌ ನಟಿ ನಯನತಾರ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

'ಜೈ ಶ್ರೀ ರಾಮ್' ಎಂಬ ಬರಹದ ಮೂಲಕ ಪೋಸ್ಟ್ ಅನ್ನು ಪ್ರಾರಂಭಿಸಿರುವ ನಯನತಾರಾ, ಒಂದು ಒಳ್ಳೆಯ ಸಂದೇಶವನ್ನು ಹಂಚಿಕೊಳ್ಳಲು ಪ್ರಯತ್ನಿಸುವಾಗ, ನಾವು ತಿಳಿಯದೆ ಯಾರನ್ನಾದರೂ ನೋಯಿಸಿರಬಹುದು, ಸೆನ್ಸಾರ್ ಮಾಡಿದ ಚಿತ್ರವನ್ನು OTT ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವ ಬಗ್ಗೆ ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಯಾರ ಭಾವನೆಗಳಿಗೂ ಧಕ್ಕೆ ತರುವ ಪ್ರಯತ್ನ ಮಾಡಿಲ್ಲ ಎಂದು ನಯನತಾರಾ ಸ್ಪಷ್ಟಪಡಿಸಿದ್ದಾರೆ. 


ಇದನ್ನೂ ಓದಿ: ಕಿಚ್ಚನ ‘ಮ್ಯಾಕ್ಸ್’ ಹೆಸರಲ್ಲಿ ಆಂಬುಲೆನ್ಸ್ ಸೇವೆ…ಇದು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನ ಕೊಡುಗೆ


ನಯನತಾರಾ ಅವರು ಸಮಸ್ಯೆಯ ಗಂಭೀರತೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದು, ನಾನು ದೇವರನ್ನು ನಂಬುತ್ತೇನೆ ಮತ್ತು ದೇಶಾದ್ಯಂತ ದೇವಾಲಯಗಳಿಗೆ ನಿಯಮಿತವಾಗಿ ಭೇಟಿ ನೀಡುವ ವ್ಯಕ್ತಿ ಎಂದು ಹೇಳಿದ್ದಾರೆ.. ಇನ್ನು ಮುಂದೆ ನನ್ನ ಕಡೆಯಿಂದ ಇಂತಹ ಸಮಸ್ಯೆಗಳು ಆಗುವುದಿಲ್ಲ ಎಂದು ಹೇಳಿರುವ ನಟಿ, ಯಾರಿಗಾದರೂ ನೋವಾಗಿದ್ದರೆ ಹೃದಯದಾಳದಿಂದ ಕ್ಷಮೆಯಾಚಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ. 


'ಆ' ನಟಿ ಜೊತೆ ಮಾತ್ರ ರೊಮ್ಯಾನ್ಸ್ ಮಾಡೋಕೆ ರಜಿನಿ ಹೆದರುತ್ತಿದ್ದರು !


ಚಿತ್ರದ ಒಂದು ದೃಶ್ಯದಲ್ಲಿ ಅನ್ನಪೂರ್ಣಿ(ನಯನತಾರ)ಗೆ ಮಾಂಸ ತಿನ್ನುವಂತೆ ಒತ್ತಾಯಿಸಲಾಗುತ್ತದೆ. ಅಲ್ಲದೆ, ಶ್ರೀರಾಮನು ಮಾಂಸಾಹಾರವನ್ನೂ ಸೇವಿಸಿದ್ದನು ಮತ್ತು ಮಾಂಸಾಹಾರವನ್ನು ಸೇವಿಸುವುದು ಪಾಪವಲ್ಲ ಎಂದು ಉಲ್ಲೇಖಿಸಲಾಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.