Anu Kannadati : ಅಕ್ಕ ಅನು, ಅನು ಕನ್ನಡತಿ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ಹೆಸರುವಾಸಿಯಾಗಿದ್ದಾರೆ. ಬಣ್ಣ ಕಾಣದೆ, ಸ್ವಚ್ಚತೆ ಎಂಬ ಅಂಶದಿಂದ ದೂರ ಉಳಿದಿರುವ ಶಾಲೆಗೆ ಸ್ವತಃ ತಾವೇ ನಿಂತು ಕೈಯಲ್ಲಿ ಬ್ರೇಷ್‌ ಹಿಡಿದು ಬಣ್ಣ ಬಳಿದು ಶಾಲೆಯ ಅಂದ ಹೆಚ್ಚಿಸುತ್ತಾರೆ. ಸಧ್ಯ ಅನು ತಮ್ಮ ಈ ಕೆಲಸದ ಹಿಂದಿನ ಉದ್ದೇಶವನ್ನು ಬಿಚ್ಚಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಇತ್ತೀಚಿಗೆ ಜನಪ್ರೀಯ ವಾಹಿನಿ ಜೀ ಕನ್ನಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ʼಜೀ ಕನ್ನಡ ಸ್ತ್ರೀ ಅವಾರ್ಡ್‌ʼ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಮಹಿಳಾ ಸಾಧಕಿಯರನ್ನು ಗುರುತಿಸಿ ಅವರನ್ನು ಗೌರವಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಈ ಪೈಕಿ ಅನು ಕನ್ನಡತಿ ಅವರಿಗೂ ಸಹ ನೀಡಿ ಗೌರವಿಸಲಾಯಿತು.


ಇದನ್ನೂ ಓದಿ: ನಟಿ ಸಂಗೀತಾ ಬೀಡಿ ಸೇದುವ ಫೋಟೋಸ್‌ ವೈರಲ್‌..! ಎನಮ್ಮಾ ಇದು ಎಂದ ಫ್ಯಾನ್ಸ್‌


ಇನ್ನು ಇದೇ ವೇಳೆ ಅನು ತಮ್ಮ ಕೆಲಸದ ಹಿಂದಿನ ನಿಜವಾದ ಉದ್ದೇಶದ ಕುರಿತು ಮಾತನಾಡುತ್ತ.. ಎಲ್ಲರಿಗೂ ನಮಸ್ಕಾರ ನಾನು ಅನು ಕನ್ನಡತಿ, ನಾನು ಕಳೆದ ಐದು ವರ್ಷಗಳಿಂದ ಸರ್ಕಾರಿ ಶಾಲೆ ಉಳಿಸಿ ಅಭಿಮಾಯನ ಮಾಡಿದೆ. ಕಾರಣ ಇಷ್ಟೆ, ಭಾರತ ಹಳ್ಳಿಗಳ ರಾಷ್ಟ್ರ. ಹಿಂದುಳಿದ ರಾಷ್ಟ್ರ ಅಂತಾನು ಕರೆಸಿಕೊಳ್ಳುತ್ತದೆ. ಪ್ರಗತಿ ಪಥದತ್ತ ಹೋಗುತ್ತಾ ಇದೆ ಎಂದು ನಾವುಗಳು ಓದುತ್ತಾ ಇದ್ದೀವಿ. ಆದರೆ ಪ್ರಗತಿ ಪಥದತ್ತ ಹೋಗಲು ಏನು ಮಾಡಬೇಕು ಅದನ್ನ ನಾವು ಮಾಡುತ್ತಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.