ನವದೆಹಲಿ:ಕಳೆದ ಕೆಲ ದಿನಗಳಿಂದ ಯಸ್ ಬ್ಯಾಂಕ್ ಗೆ ಸಂಬಂಧಿಸಿದಂತೆ ಭಾರಿ ಬಿಕ್ಕಟ್ಟು ಎದುರಾಗಿದೆ. ಇನ್ನೊಂದೆಡೆ ಖ್ಯಾತ ಬಾಲಿವುಡ್ ನಟ ಅರ್ಜುನ್ ಕಪೂರ್ ಅಭಿನಯದ ಚಿತ್ರ 'ಸಂದೀಪ್ ಔರ್ ಪಿಂಕಿ ಫರಾರ್' ಬಿಡುಗಡೆಗೆ ಸಿದ್ಧಗೊಂಡಿದೆ. ಈ ಎರಡು ಸಂಗತಿಗಳ ಮಧ್ಯೆ ಕನೆಕ್ಷನ್ ಏನಪ್ಪಾ ಅಂತ ನೀವು ಯೋಚಿಸುತ್ತಿರಬಹುದು. ಹಾಗಾದ್ರೆ, ಕೇಳಿ ಈ ಎರಡು ಸಂಗತಿಗಳ ಮಧ್ಯೆ ಕನೆಕ್ಷನ್ ಜೋಡಿಸಿದ್ದು ನಾವಲ್ಲ. ಈ ಎರಡೂ ಸಂಗತಿಗಳ ಮಧ್ಯೆ ಕನೆಕ್ಷನ್ ಜೋಡಿಸಿದ್ದು, ಬಾಲಿವುಡ್ ಚಿತ್ರ ಸಮೀಕ್ಷಕ ಕಮಾಲ್ ಆರ್.ಖಾನ್.


COMMERCIAL BREAK
SCROLL TO CONTINUE READING

ಹೌದು, ಕಮಾಲ್ ಆರ್. ಖಾನ್ ಮಾಡಿರುವ ಒಂದು ಟ್ವೀಟ್ ಸದ್ಯ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರಿ ವೈರಲ್ ಆಗುತ್ತಿದೆ. ಈ ಟ್ವೀಟ್ ನಲ್ಲಿ KRK ಯಸ್ ಬ್ಯಾಂಕ್ ಮುಳುಗಡೆಯಾಗಿರುವುದರ ಸಮೀಕ್ಷೆ ನಡೆಸಿದ್ದಾರೆ. ಅವರ ಹೇಳಿಕೆಯ ಪ್ರಕಾರ ಯಸ್ ಬ್ಯಾಂಕ್ ಮುಳುಗಡೆಗೆ ಅರ್ಜುನ್ ಕಪೂರ್ ಕಾರಣ ಎನ್ನಲಾಗಿದೆ. ಅರ್ಜುನ್ ಕಪೂರ್ ಕಾರಣವೆ ಬ್ಯಾಂಕ್ ಗೆ ಈ ಸ್ಥಿತಿ ಬಂದೊದಗಿದೆ ಎಂದು ಹೇಳಿದ್ದಾರೆ.



ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ KRK, "ಅರ್ಜುನ್ ಕಪೂರ್ ಇದುವರೆಗೆ ಅಭಿನಯಿಸಿರುವ ಬಹುತೇಕ ಚಿತ್ರಗಳು ಮುಳುಗಿ ಹೋಗಿವೆ. ಅವರು ಅಬಿನಯಿಸಿರುವ ಕೇವಲ ಒಂದು ಚಿತ್ರ '2 STATES' ಸೂಪರ್ ಹಿಟ್ ಆಗಿದ್ದು, ಚಿತ್ರದಲ್ಲಿ ಅರ್ಜುನ್ ಕಪೂರ್ ಯಸ್ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬುದನ್ನು ತೋರಿಸಲಾಗಿದೆ. ಆದರೆ, ಇದೀಗ ಯಸ್ ಬ್ಯಾಂಕ್ ಕೂಡ ಮುಳುಗಿ ಹೋಗಿದೆ!" ಎಂದಿದ್ದಾರೆ. ಅವರು ಮಾಡಿರುವ ಈ ಟ್ವೀಟ್ ಗೆ ಜನ ಭಾರಿ ರಿಯಾಕ್ಷನ್ ನೀಡುತ್ತಿದ್ದಾರೆ.


ಈ ಟ್ವೀಟ್ ಬಳಿಕ KRK ಅವರ ಒಂದು ಹಳೆ ಟ್ವೀಟ್ ಕೂಡ ವೈರಲ್ ಆಗಲಾರಂಭಿಸಿದೆ. ತಮ್ಮ ಹಳೆ ಟ್ವೀಟ್ ನಲ್ಲಿ KRK ಅರ್ಜುನ್ ಕಪೂರ್ ಅವರ ಕುರಿತು ಭವಿಷ್ಯವಾಣಿ ಹೇಳಿದ್ದರು. ತಮ್ಮ ಹಳೆ ಟ್ವೀಟ್ ನಲ್ಲಿ ಬರೆದುಕೊಂಡಿದ್ದ KRK, "ನಾನು ಅರ್ಜುನ್ ಕಪೂರ್ ಅವರನ್ನು ಅವರ ಮೊದಲ ಚಿತ್ರದಲ್ಲಿ ನೋಡಿದಾಗ, ಅರ್ಜುನ್ ಓರ್ವ ಉತ್ತಮ ವಿಲೆನ್ ಆಗಲು ಸಾಧ್ಯ ಎಂದಿದ್ದೆ, ಆದರೆ, ಅವರು ಓರ್ವ ಉತ್ತಮ ನಟ ಆಗಲು ಕೂಡ ಯೋಗ್ಯನಲ್ಲ ಮತ್ತು ಅದು ಇದೀಗ ಸಾಬೀತಾಗಿದೆ. ಅವರ ಕರಿಯರ್ ಬಹುತೇಕ ಅಂತ್ಯಕಂಡಿದೆ. ಮುಂದಿನ ಮೂರು ಚಿತ್ರಗಳ ಬಳಿಕ ನಿರ್ಮಾಪಕನೊಬ್ಬನ ಮಗ ನಿರ್ಮಾಪಕನಾಗಿಯೆ ಉಳಿಯಲಿದ್ದಾನೆ" ಎಂದು ಹೇಳಿದ್ದರು.



ಆದರೆ, ಇದುವರೆಗೆ ಅರ್ಜುನ್ ಕಪೂರ್ KRK ಅವರ ಈ ಟ್ವೀಟ್ ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, KRK ಮಾಡಿರುವ ಈ ಟ್ವೀಟ್ ಗೆ ಜನರು ಈಗಲೂ ಕೂಡ ನಗುತ್ತಿರುವುದು ವಾಸ್ತವ.