Bigg Boss season 9 : ಸದಾ ಜಟಾಪಟಿ, ಗಲಾಟೆ, ಮೋಜು ಮಸ್ತಿಯಿಂದ ಕೂಡಿರುತ್ತಿದ್ದ ಬಿಗ್‌ಬಾಸ್‌ ಮನೆಯಲ್ಲಿ ಇಂದು ಕಣ್ಣಿರ ಧಾರೆ ಉಕ್ಕಿ ಹರಿಯಿತು. ದೊಡ್ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಅಮ್ಮಂದಿರನ್ನು ನೆನೆದು ಕಣ್ಣೀರಿಟ್ಟ ಪ್ರಸಂಗ ನಡೆಯಿತು. 


COMMERCIAL BREAK
SCROLL TO CONTINUE READING

ಬಿಗ್‌ಬಾಸ್‌ ಮನೆಯಲ್ಲಿ ಈ ದಿನ ಅಮ್ಮಂದಿರ ದಿನವಾಗಿತ್ತು. ಎಲ್ಲಾ ಸ್ಪರ್ಧಿಗಳು ಅಮ್ಮನ ಸವಿನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ತಾಯಿಯ ಜೊತೆ ಕಳೆದ ಸಮಯ, ಸಂಗತಿಗಳನ್ನು ಎಲ್ಲರೂ ಹಂಚಿಕೊಂಡರು. ಸ್ವಲ್ಪ ಎಮೋಷನಲ್ ಆದ ವಿನೋದ್‌ ಗೊಬ್ಬರಗಾಲ, ನಾನು ಬೆಂಗಳೂರಿಗೆ ಬಂದ್ಬಿಟ್ಟೆ.. ಅವ್ವ ನಂಗೆ ಇಲ್ಲಿ ಇರೋಕೆ ಆಗಲ್ಲ ಅಂದು ಅತ್ತೆ, ನನ್ನವ್ವ ತಡೆಯಲಾರದೆ.. ಮನೆಗೆ ಬಾ ಮಗನೆ ಇರೋವರೆಗೂ ನಾನು ಸಾಕ್ತೀನಿ ಅಂತ ಧೈರ್ಯ ತುಂಬಿದ್ರು ಎಂದು ಅವರ ತಾಯಿಯನ್ನು ನೆನೆದು ಅತ್ತರು.


ಇದನ್ನೂ ಓದಿ : ʼಭಾರತ್ ಜೋಡೋ ಮಾಡಿದ್ಯಾರು, ತೋಡೋ ಮಾಡಿದ್ಯಾರು ಎಂದು ತಿಳಿದಿದೆʼ


ʼಜಗತ್ತು ಕೈ ಬಿಟ್ಟರು ನೀನ್ನ ಕೈ ಬಿಡಳು, ತಾಯಿ ಈ ಹೃದಯದ ಉಸಿರುʼ ಎಂಬ ಮಾತು ಬಿಗ್‌ಬಾಸ್‌ ಮನೆಯಲ್ಲಿ ಪ್ರತಿಧ್ವನಿಸಿತು. ವಿನೋದ್‌ನನ್ನು ಅರುಣ್‌ ಸಾಗರ್‌ ಅವರು ಸಂತೈಸಿದರು. ಎಲ್ಲರೂ ತಮ್ಮ ತಾಯಿಯ ಜೊತೆ ಕಳೆದ ಸಮಯವನ್ನು ನೆನೆದು ತಾಯಿಯ ನಿಸ್ವಾರ್ಥ ಬದುಕನ್ನು ಸ್ಮರಿಸಿದರು.


ಬಿಗ್‌ ಬಾಸ್‌ ಮನೆಯಲ್ಲಿ ಆಟದ ಜೊತೆ ಪಾಠವೂ ಇರುತ್ತದೆ. ಟಾಸ್ಕ್‌ ಜೊತೆ ಜೊತೆಗೆ ಭಾವನೆಗಳ ಬುತ್ತಿ ಕೂಡ ಇರುತ್ತದೆ. ಒಟ್ಟಿನಲ್ಲಿ ಇಂದು ಇನ್ನೊಬ್ಬರ ಕಣ್ಣೀರು ಒರೆಸಿದ ಕೈಗಳು ನಾಳೆ ಕಣ್ಣೀರಿಗೆ ಕಾರಣವಾಗಬಹುದು. ಏಕೆಂದ್ರೆ ದೊಡ್ಮನೆಯಲ್ಲಿ ನಡೆಯುವುದು ಬಿಗ್‌ಬಾಸ್‌ ಆಟ ಮಾತ್ರ, ಅಳು, ನಗು, ಜಗಳ ಕಟ್ಟಿಟ್ಟ ಬುತ್ತಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.