Bigg Boss Fight : ಬಿಗ್‌ ಬಾಸ್‌ ನಲ್ಲಿ ಜಗಳಗಳು ಸಾಮಾನ್ಯ. ಆದರೆ ಅದು ಕೈ ಮಿಲಾಯಿಸುವ ಹಂತ ತಲುಪ ಬಾರದು. ತಲುಪಿದರೂ ಯಾರನ್ನೂ ಹೊಡೆಯಬಾರದು. ಆದರೆ ಬಿಗ್‌ ಬಾಸ್‌ ಶೋ ನಲ್ಲಿ ಸ್ಪರ್ಧಿಯೊಬ್ಬರು ಮತ್ತೊಬ್ಬ ಸ್ಪರ್ಧಿಗೆ ಹೊಡೆದ ಕಾರಣಕ್ಕೆ ಅವರನ್ನು ಮನೆಯಿಂದ ಹೊರಹಾಕಲಾಗಿದೆ. 


COMMERCIAL BREAK
SCROLL TO CONTINUE READING

ಬಿಗ್ ಬಾಸ್ 17 ರಲ್ಲಿ ಫಿನಾಲೆಗೆ ಮೂರು ವಾರ ಇರುವ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾರ್ಯಕ್ರಮದ ಆಂಗ್ರಿ ಯಂಗ್ ಮ್ಯಾನ್ ಅಭಿಷೇಕ್ ಕುಮಾರ್ ಗೆ ಮನೆಯಿಂದ ಹೊರಹಾಕಲಾಗಿದೆ. ಅಭಿಷೇಕ್ ತಮ್ಮ ಕೋಪದಿಂದ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಅವರು ಬಿಗ್‌ ಬಾಸ್‌ ಮನೆಯಿಂದ ಹೊರನಡೆಯಬೇಕಾಯಿತು. 


ಬಿಗ್ ಬಾಸ್ 17 ರಿಂದ ಅಭಿಷೇಕ್ ಕುಮಾರ್ ಅವರನ್ನು ಹೊರಹಾಕುವ ನಿರ್ಧಾರವನ್ನು ಕ್ಯಾಪ್ಟನ್ ಅಂಕಿತಾ ಲೋಖಂಡೆ ತೆಗೆದುಕೊಂಡಿದ್ದಾರೆ. ಅಭಿಷೇಕ್ ಹೊರಹಾಕಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಕಿತಾ ಮತ್ತು ಬಿಗ್‌ ಬಾಸ್‌ ಟೀಮ್‌ನ್ನು ಟ್ರೋಲ್ ಮಾಡಲಾಗುತ್ತಿದೆ.


ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಕಂಟೆಸ್ಟಂಟ್‌ಗಳ ಈ ಮಾತೇ ಪ್ರತಾಪ್‌ ಮನಸ್ಥಿತಿಯನ್ನ ಕುಗ್ಗಿಸಿತ್ತೇ..!


ಇತ್ತೀಚೆಗೆ ಅಭಿಷೇಕ್, ಇಶಾ ಮಾಳವಿಯಾ ಮತ್ತು ಸಮರ್ಥ್ ಜುರೆಲ್ ನಡುವೆ ಸಾಕಷ್ಟು ಜಗಳವಾಗಿತ್ತು. ಒಬ್ಬರಿಗೊಬ್ಬರು ವೈಯಕ್ತಿಕವಾಗಿ ಟೀಕಿಸಿಕೊಂಡಿದ್ದರು. ಇದೇ ವೇಳೆ ಅಭಿಷೇಕ್‌ ಕೋಪದಲ್ಲಿ ಸಮರ್ಥನಿಗೆ ಕಪಾಳಮೋಕ್ಷ ಮಾಡಿದರು.


[[{"fid":"366318","view_mode":"default","fields":{"format":"default","field_file_image_alt_text[und][0][value]":"Bigg Boss Fight","field_file_image_title_text[und][0][value]":"ಬಿಗ್‌ ಬಾಸ್‌ ಕಂಟೆಸ್ಟಂಟ್‌ ಗಳ ಮಧ್ಯೆ ಜಗಳ"},"type":"media","field_deltas":{"1":{"format":"default","field_file_image_alt_text[und][0][value]":"Bigg Boss Fight","field_file_image_title_text[und][0][value]":"ಬಿಗ್‌ ಬಾಸ್‌ ಕಂಟೆಸ್ಟಂಟ್‌ ಗಳ ಮಧ್ಯೆ ಜಗಳ"}},"link_text":false,"attributes":{"alt":"Bigg Boss Fight","title":"ಬಿಗ್‌ ಬಾಸ್‌ ಕಂಟೆಸ್ಟಂಟ್‌ ಗಳ ಮಧ್ಯೆ ಜಗಳ","class":"media-element file-default","data-delta":"1"}}]]


ಅಭಿಷೇಕ್‌ ಕಪಾಳಕ್ಕೆ ಹೊಡೆದಿದ್ದಾರೆ ಇದಕ್ಕೆ ಏನು ಮಾಡಬೇಕು ಎಂದು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಅಂಕಿತಾ ಅವರನ್ನು ಕೇಳಿದರು. ಅಂಕಿತಾ ಹಿಂದಿನ ಸಮಯದಲ್ಲಿ ಏನಾಯಿತು ಎಂಬುದನ್ನ ನೆನದರು. ಅದೇ ನಿಯಮ ಅನುಸರಿಸಿ, ಈ ಮನೆಯಲ್ಲಿ ಹೊಡೆದಾಟವನ್ನು ನಿಷೇಧಿಸಲಾಗಿದೆ. ಹೀಗಾಗಿ ಮನೆಯಿಂದ ಹೊರಹೋಗಬೇಕು ಎಂದರು. ಆ ಪ್ರಕಾರ ಸಮರ್ಥ ಮೇಲೆ ಕೈ ಮಾಡಿದ ಅಭಿಷೇಕ್‌ ಮನೆಯಿಂದ ಹೊರನಡೆದರು.


ವೀಕೆಂಡ್ ಕಾ ವಾರ್ ನಲ್ಲಿ ಅಭಿಷೇಕ್ ಅವರನ್ನು ಮನೆಗೆ ವಾಪಸ್ ಕಳುಹಿಸಬಹುದೆಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.  


ಇದನ್ನೂ ಓದಿ: ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಕ್ಕೆ ಇದೇ ಅಸಲಿ ಕಾರಣ, ಸುದೀಪ ಎದುರು ಸತ್ಯ ಬಯಲು! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.