Tanisha Vs Namratha: ಬಿಗ್‌ಬಾಸ್‌ ಮನೆಯಲ್ಲಿ 11ನೇ ವಾರ ಸ್ಪರ್ಧಿಗಳಿಗೆ ‘ಕೊಳೆ ಒಳ್ಳೇದಲ್ಲ’ ಎಂಬ ಟಾಸ್ಕ್ ಅನ್ನು ನೀಡಲಾಗಿದ್ದು, ಈ ಚಟುವಟಿಕೆಯ ಅನುಸಾರ, ಪ್ರತಿ ತಂಡದ ಆಟಗಾರರು ಎದುರಾಳಿ ತಂಡದ ಆಟಗಾರರಿಂದ ತಮಗೆ ಮೀಸಲಾಗಿರುವ ಬಟ್ಟೆಗಳನ್ನು ರಕ್ಷಿಸಿ, ಶುಭ್ರಗೊಳಿಸಬೇಕಿತ್ತು. ಪ್ರತಿ ತಂಡದಲ್ಲಿ ಇಬ್ಬರು ಬಟ್ಟೆ ಒಗೆದರೆ, ಇಬ್ಬರು ತಮ್ಮ ತಂಡದ ಬಟ್ಟೆಗಳನ್ನು ರಕ್ಷಿಸಿ, ಎದುರಾಳಿ ತಂಡದ ಬಟ್ಟೆಗಳಿಗೆ ಬಣ್ಣ ಎರಚಬೇಕಿತ್ತು. ಮೂರು ಸುತ್ತಿನಲ್ಲಿ ಈ ಟಾಸ್ಕ್‌ ನಡೆಯಲಿದ್ದು, ಪ್ರತಿ ಸುತ್ತಿನಲ್ಲಿ ಅತೀ ಹೆಚ್ಚು ಬಟ್ಟೆಗಳನ್ನು ಶುಭ್ರಗೊಳಿಸುವ ತಂಡ ಈ ಟಾಸ್ಕ್ ಗೆದ್ದಂತೆ ಎಂದು ಬಿಗ್‌ಬಾಸ್‌ ಘೋಷಿಸಿದ್ದರು.


COMMERCIAL BREAK
SCROLL TO CONTINUE READING

ಮೊದಲ ಸುತ್ತಿನಲ್ಲಿ ಸಂಗೀತಾ ತಂಡದಲ್ಲಿ ಡ್ರೋನ್ ಪ್ರತಾಪ್, ನಮ್ರತಾ ಬಟ್ಟೆ ಒಗೆಯುತ್ತಿದ್ದು, ಆ ತಂಡದಿಂದ ಬಟ್ಟೆ ರಕ್ಷಿಸಲು  ಮೈಕಲ್ ಮತ್ತು ಅವಿನಾಶ್‌ ಶೆಟ್ಟಿ ನಿಂತಿದ್ದರು. ಇತ್ತ ತನಿಷಾ ತಂಡದಲ್ಲಿ ತುಕಾಲಿ ಸಂತು, ವರ್ತೂರು ಸಂತೋಷ್ ಬಟ್ಟೆ ಒಗೆದರೆ, ಅವರ ತಂಡದಲ್ಲಿ ಬಟ್ಟೆ ರಕ್ಷಿಸಲು ವಿನಯ್ ಮತ್ತು ಕಾರ್ತಿಕ್ ಮುಂದಾದರು. ಮೊದಲ ಸುತ್ತಿನಲ್ಲಿ ಸಂಗೀತಾ ತಂಡ ಗೆಲುವು ಸಾಧಿಸಿದ್ದು, ತನಿಷಾ ತಂಡಕ್ಕೆ ಹೋಲಿಸಿದರೆ ಸಂಗೀತಾ ತಂಡದ ಬಟ್ಟೆ ಹೆಚ್ಚು ಶುಭ್ರವಾಗಿತ್ತು ಅಂತ ಸಿರಿ ತೀರ್ಪು ನೀಡಿದರು. ಈ ವೇಳೆ ಸಂಗೀತಾ ತಂಡದ ಬಗ್ಗೆ ಮಾತನಾಡಿದ ತನಿಷಾ, "ಅವರು ಒಂದನ್ನೇ ಒಗೆದು ಒಗೆದು ಒಗೆದು ಅಲ್ಲೇ ಇಟ್ಟುಕೊಂಡಿದ್ದಾರೆ" ಎಂದರು.


ಇದನ್ನೂ ಓದಿ:  BBK10: ಬಂದೇಬಿಡ್ತು ನಾಮಿನೇಷನ್ ಗುಮ್ಮ! ಸದಸ್ಯರಿಗೆ ಮಸಿ ನೀರಿನ ಸ್ನಾನ


ಆಗ ರೊಚ್ಚಿಗೆದ್ದ ನಮ್ರತಾ, "ತನಿಷಾ ಹೇಳೋದೆಲ್ಲಾ ಕರೆಕ್ಟ್. ನಮ್ಮ ಹಾರ್ಡ್‌ ವರ್ಕ್ ಏನೂ ಇಲ್ಲ. ಐ ಆಮ್ ಗೋಯಿಂಗ್ ಟು ಸ್ಲಾಪ್ ಹರ್‌. ಟೈಟ್ ಸ್ಲಾಪ್ ಆನ್ ಹರ್ ಫೇಸ್. ಹಾರ್ಡ್‌ ವರ್ಕ್‌ನ ಕೌಂಟ್‌ ಮಾಡೋದೇ ಇಲ್ವಲ್ಲ" ಎಂದು ಕಿಡಿಕಾರಿದ್ದು, ಎರಡನೇ ಸುತ್ತಿನಲ್ಲಿ ತನಿಷಾ ತಂಡ ಗೆದ್ದರೆ, ಮೂರನೇ ಸುತ್ತಿನಲ್ಲಿ ಸಂಗೀತಾ ತಂಡ ಗೆಲುವು ಸಾಧಿಸಿತು. ಮೂರನೇ ಸುತ್ತು ಮುಗಿದ್ಮೇಲೆ, "ಎಲ್ಲಾ ಒಗೆದಿದ್ದಾರೆ ಒಣಗಿ ಹಾಕಿಲ್ಲ" ಎಂದು ಸಂಗೀತಾ ಹೇಳಿದರು. ಆಗ, "ಎಲ್ಲಾ ಸುಮ್ಮನೆ ಹಾಗೆ ಹಾಕಿದ್ದಾರೆ ಅಷ್ಟೇ" ಎಂದು ತನಿಷಾ ಹೇಳಿದಾಗ, "ಏಯ್.. ಸುಮ್ ಸುಮ್ನೆ ಹಾಗೆ ಮಾತನಾಡಬಾರದು. ಒಗೆದಿದ್ದೇನೆ ಎಲ್ಲಾ" ಎಂದು ನಮತ್ರಾ ಗರಂ ಆಗಿ ಹೇಳಿದರು.


ಬಿಗ್‌ಬಾಸ್‌ "ಕೊಳೆ ಒಳ್ಳೇದಲ್ಲ" ಟಾಸ್ಕ್‌ನಲ್ಲಿ ನಿಮ್ಮಿಬ್ಬರ ತಂಡಗಳ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿದವರು ಯಾರು ಎಂದು ಚರ್ಚಿಸಿ, ಒಮ್ಮತದ ನಿರ್ಧಾರ ತಿಳಿಸಿ ಎಂದು ಬಿಗ್‌ಬಾಸ್‌ ಘೋಷಿಸಿದಾಗ, ಈ ವೇಳೆ ನಡೆದ ಚರ್ಚೆಯಲ್ಲಿ "ಜಾಸ್ತಿ ಬಟ್ಟೆಗಳನ್ನ ಒಗೆದವರು ವರ್ತೂರು ಸಂತೋಷ್. ಪ್ರತಾಪ್ ಇದ್ದಾಗ ತುಂಬಾ ಚೆನ್ನಾಗಿ ಬಟ್ಟೆಗಳನ್ನ ಒಗೆಯುತ್ತಿದ್ದು, ನಮ್ರತಾಗೆ ಹೋಲಿಸಿದರೆ ವರ್ತೂರು ಸಂತೋಷ್‌ ತುಂಬಾ ಚೆನ್ನಾಗಿ ಬಟ್ಟೆಗಳನ್ನ ಒಗೆಯುತ್ತಿದ್ದರು" ಎಂದು ತನಿಷಾ ಹೇಳಿದರು.


ಇದನ್ನೂ ಓದಿ: BBK 10: "ಗುರು ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ": ಪ್ರತಾಪ್‌ಗೆ ವಿನಯ್‌ ಅವಾಜ್‌!


ಆಗ ಸಿಡಿದೆದ್ದ ನಮ್ರತಾ, "ಈ ಚರ್ಚೆಯಲ್ಲಿ ನನ್ನ ಹೆಸರು ತೆಗೆದುಕೊಳ್ಳುವ ಹಾಗಿಲ್ಲ. ಕಂಪೇರ್ ಮಾಡಬೇಡಿ. ನನ್ನ ಹೆಸರು ತಗೊಳ್ಬೇಡಿ. ನಿಮ್ಮ ವ್ಯಾಲಿಡೇಷನ್ ನನಗೆ ಬೇಕಾಗಿಲ್ಲ. ಮೂರು ವಾರಗಳಿಂದ ನೀವು ಆಡೇ ಇಲ್ಲ. ನೀವ್ಯಾರು ನನಗೆ ವ್ಯಾಲಿಡೇಷನ್ ಕೊಡೋಕೆ? ಮೂರು ವಾರಗಳಿಂದ ಬಾಯಲ್ಲಿ ಆಟ ಆಡೋದಲ್ಲ. ಅಲ್ಲಿ ಇಳಿದು ಆಟವಾಡಬೇಕು. ಮಾತಾಡಿ ಆಡೋ ಗೇಮ್‌ ಇದ್ದರೆ ಅದರಲ್ಲಿ ನೀನೇ ವಿನ್ ಆಗೋದು" ಎಂದರು. ಅದಕ್ಕೆ, "ಹಂಡ್ರೆಡ್‌ ಪರ್ಸೆಂಟ್‌ ನಾನೇ. ನಾನು ಬಿಟ್ಟುಕೊಡುವ ಮಾತೇ ಇಲ್ಲ" ಅಂತ ತನಿಷಾ ಹೇಳಿದಾಗ, "ಮೂರು ವಾರಗಳಿಂದ ಆಡಿ ಪ್ರೂವ್ ಮಾಡೋಕೆ ಆಗಲಿಲ್ಲ. ಮಾತಾಡಿ ಪ್ರೂವ್ ಮಾಡೋದು ಅಂದ್ರೆ ಇದೇ.!" ಎಂದು ತಿವಿದರು ನಮ್ರತಾ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.