Sangeetha And Karthik In Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್‌ ಮಧ್ಯೆ ಮನಸ್ತಾಪ ಬಂದಾಗ ಸಂಗೀತಾ "ನಾನು ಕಾರ್ತಿಕ್ ಜೊತೆ ಈಗಲೂ ಮಾತಾಡಲ್ಲ, ಬಿಗ್‌ಬಾಸ್ ಮನೆಯಿಂದ ಹೊರಗಡೆ ಹೋದ್ಮೇಲೂ ಮಾತಾಡಲ್ಲ" ಎಂದು ಹೇಳಿದ್ದರು. ಆದರೆ ಇದೀಗ ಸಂಗೀತಾ, ಕಾರ್ತಿಕ್ ಇಬ್ಬರೂ ಮಾತನಾಡಲು ಆರಂಭಿಸಿದ್ದರೂ, ಮೊದಲಿನಷ್ಟು ಆತ್ಮೀಯತೆ ಈಗ ಇಲ್ಲದಿದ್ದರೂ ಕೂಡ ಇಬ್ಬರು ಸಹಜ ಎನ್ನುವಂತೆ ಮಾತನಾಡಲು ಶುರುಮಾಡಿದ್ದಾರೆ. ನಿನ್ನೆ ಪ್ರಸಾರವಾದ ಎಪಿಸೋಡ್ ನೋಡಿದರೆ ಮನಸ್ಸು ಮಾಡಿ ಮೊದಲು ಮಾತಾಡಿದ್ದೇ ಸಂಗೀತಾ. ಆರಂಭದಲ್ಲಿ ಕಾರ್ತಿಕ್ ಕೈಗೆ ಆಗಿದ್ದ ಗಾಯಕ್ಕೆ ಸಂಗೀತಾ  ಔಷಧಿ ಹಚ್ಚಿ, ಆಮೇಲೆ ನಿಧಾನವಾಗಿ ಇವರಿಬ್ಬರ ಮಧ್ಯೆ ಮಾತುಕತೆ ಶುರು ಆಯ್ತು.


COMMERCIAL BREAK
SCROLL TO CONTINUE READING

ಆರಂಭದಲ್ಲಿ ತನಿಷಾ ಕಾರ್ತಿಕ್ ಬಳಿ ಹೋಗಿ ಸಂಗೀತಾ ಜೊತೆ ಮಾತನಾಡು ಅಂತ ಅಂದಿದ್ದಕ್ಕೆ,  ಕಾರ್ತಿಕ್ ಮಾತ್ರ ಅವಳು ಆ ಟೀಂನಲ್ಲಿ ಚೆನ್ನಾಗಿದ್ದಾಳೆ, ಆರಾಮಾಗಿರಲಿ ಅಂತ ಹೇಳಿ ಸುಮ್ಮನಾದರು.
ಬಳಿಕ ಕಾರ್ತಿಕ್‌ಗೆ ಕಿಚ್ಚ ಸುದೀಪ್ ಕೊಟ್ಟಿದ್ದ ಜಂಪ್‌ ಸೂಟ್‌ನ್ನು ಸಂಗೀತಾ ಬಚ್ಚಿಟ್ಟು ಅದನ್ನು ಹಾಕಿಕೊಂಡಿದಕ್ಕೆ, ಕಾರ್ತಿಕ್ ಆ ಬಟ್ಟೆ ಹಾಕಿಕೊಂಡು ಹಾಳು ಮಾಡಬೇಡ ಅಂತ ಮೃದುವಾಗಿ ಹೇಳಿದರೂ ಕೂಡ ಸಂಗೀತಾ ಕೇಳಲೇ ಇಲ್ಲ. ಅಷ್ಟೇ ಅಲ್ಲದೆ ಬೆಂಕಿ, ಸಂಗೀತಾ ರಾಜಿ ಕುಡ ಆಗಿದ್ದು, ವೇಕಪ್ ಸಾಂಗ್ ಪ್ಲೇ ಅದಾಗ ತನಿಷಾ ಸಂಗೀತಾರ ಕೈ ಹಿಡಿದುಕೊಂಡು ಬಂದು ಡ್ಯಾನ್ಸ್ ಮಾಡಿಸಿದ್ದರು.


ಇದನ್ನೂ ಓದಿ: 


ನಂತರ ಸಂಗೀತಾ ಹಾಗೂ ಕಾರ್ತಿಕ್ ಕಿಚನ್ ಏರಿಯಾದಲ್ಲಿ ಮಾತನಾಡುವಾಗ,"ಹೆಣ್ಣು ಮಕ್ಕಳಿಗೆ ಕೂದಲು ಇದ್ರೆ ಚೆಂದ" ಅಂತ ಕಾರ್ತಿಕ್ ಹೇಳಿದ್ರೆ, ಸಂಗೀತಾ ಅವರು "ನೀವು ಬೇಡ ಅಂದ್ರೂ ಮಾಡಿಸಿಕೊಂಡ್ರಿ. ನಾನು ಕೂದಲು ಕಟ್ ಮಾಡ್ತೀನಿ ಅಂತ ಹೇಳಿದ್ದೆ, ಆದರೆ ವೀಕೆಂಡ್ ಬಟ್ಟೆಗಳು ಬಂದಾಗ ಖರಾಬ್ ಆಗಿ ಕಾಣಿಸ್ತಿದ್ದೆ" ಎಂದಿದ್ದಾರೆ. ಆಗ ಕಾರ್ತಿಕ್ "ಕೂದಲು ಇಲ್ಲ ಅಂದರೂ ನಮಗೆ ಸಮಸ್ಯೆ ಇಲ್ಲ" ಎಂದಿದಕ್ಕೆ ಸಂಗೀತಾ
"ನಿಮಗೆ ಸೇವ್ ಮಾಡಿಲ್ಲ ಅಂತ ಲುಡೋ ಟಾಸ್ಕ್‌ನಲ್ಲಿ ಹೇಳಿದೆ, ಸಾರಿ" ಅಂತ  ಹೇಳಿದ್ದಾರೆ. ಆವಾಗ ಕಾರ್ತಿಕ್ "ಟೈಮ್ ಬರತ್ತೆ ಎಲ್ಲದಕ್ಕೂ, ನಿನ್ನ ಆಟ ನೀನು ಆಡು, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ನಿನಗೆ ಕೆಲವೊಂದು ಸರಿ ಅಂತ ಅನಿಸತ್ತೆ" ಎಂದು ಮಾತನಾಡಿದಕ್ಕೆ "ನಾನು ಇದ್ದಾಗ ಒಂದು ತರ ಇರುತ್ತಿತ್ತು, ಈಗ ಒಂದು ದಿನದಿಂದ ಬೇರೆ ತರ ಇದೆ. ವಿನಯ್ ಕೋಪ ಬಂದಾಗ ಹೊಡೆದಾಡ್ತಾರೆ, ಆದರೆ ಯಾವುದನ್ನೂ ಮಾಡಿಸ್ತಿಲ್ಲ" ಎಂದು ಸಂಗೀತಾ ಹೇಳಿದ್ದಾರೆ. ಮತ್ತೆ ಕಾರ್ತಿಕ್‌ "ನಿನಗೆ ಕೆಲವೊಂದು ಕಾಣಿಸಲ್ಲ. ಕಳಪೆಯಲ್ಲಿ ನಾಲ್ಕು ಜನರ ಅಭಿಪ್ರಾಯ ಹೇಗೆ ಒಂದೇ ಬರತ್ತೆ?" ಅಂತ ಕಾರ್ತಿಕ್ ಹೇಳಿದಾಗ ಸಂಗೀತಾ "ಚಾನ್ಸ್ ಇಲ್ಲ, ಒಮ್ಮೆ ಕೂಡ ಆ ಗ್ರೂಪ್‌ನಲ್ಲಿ ಚರ್ಚೆ ನಡೆದಿಲ್ಲ. ಒಮ್ಮೆ ನಿಮ್ಮ ಹೆಸರು ಬಂದಿತ್ತು.." ಅಂತ ಹೇಳಿದ್ದಾರೆ.


ಒಟ್ಟಿನಲ್ಲಿ ಇವರಿಬ್ಬರೂ ಒಂದಷ್ಟು ವಿಷಯವನ್ನು ಪರೋಕ್ಷವಾಗಿ ಚರ್ಚೆ ಮಾಡಿದ್ದು, ಇವರಿಬ್ಬರು ಏನು ಹೇಳುತ್ತಿದ್ದಾರೆ ಎಂದು ಸ್ಪಷ್ಟತೆ ಇಲ್ಲ. ಆದರೆ ವಿನಯ್ ತಂಡ ಟಾಸ್ಕ್ ಆಡಲು ಮಾತ್ರ ಓಕೆ, ಬೇರೆಯದಕ್ಕಲ್ಲ ಎಂದು ಸಂಗೀತಾ ಹೇಳಿದಂತಿದೆ. ವಿನಯ್ ತಂಡದಲ್ಲಿ, ವಿನಯ್ ಅವರಲ್ಲಿ ಸಮಸ್ಯೆ ಇದೆ ಅಂತ ಕಾರ್ತಿಕ್ ಸಂಗೀತಾಗೆ ಬುದ್ಧಿ ಹೇಳಿದ್ರೂ ಕೇಳಲು ರೆಡಿ ಇರದೆ, ಇವರಿಬ್ಬರು ಒಂದಾಗಿರೋದು ನೋಡಿ ಇಡೀ ಮನೆ ಶಾಕ್ ಆಗಿದೆ. ಕೆಲವು ದಿನಗಳ ಹಿಂದೆ ವಿನಯ್‌ "ಇವರಿಬ್ಬರದ್ದು ಡವ್‌, ಅತಿ ಶೀಘ್ರದಲ್ಲಿ ಇವರಿಬ್ಬರ ಮಧ್ಯೆ ಇರುವ ಗ್ಯಾಪ್ ಫಿಲ್ ಆಗತ್ತೆ" ಅಂತ  ಕಿಚ್ಚ ಸುದೀಪ್ ಮುಂದೆ ಹೇಳಿದಾಗ ಸಂಗೀತಾ 'ಸಾಧ್ಯವೇ ಇಲ್ಲ' ಅನ್ನೋ ತರ ಲುಕ್ ಕೊಟ್ಟಿದ್ದರು. ಆದರೆ ವಿನಯ್ ಗೌಡ ಭವಿಷ್ಯ ನಿಜವಾಗಿದಕ್ಕೆ, ಈತ ಮಾತ್ರ ನಾನು ಹೇಳಿದ್ದು ನಿಜ ಅಲ್ವಾ ಅಂತ ಹೇಳಿದರು. ಸಿರಿ ಕೂಡ ಇವರಿಬ್ಬರು ಆರಾಮಾಗಿ ಕೂತು ಮಾತಾಡೋದು ನೋಡಿ ಆಶ್ಚರ್ಯಪಟ್ಟಿರೇ,  ತುಕಾಲಿ ಸ್ಟಾರ್ ಸಂತು ಸಂಗೀತಾ-ಕಾರ್ತಿಕ್ ನಮ್ಮನ್ನು ಬಕ್ರಾ ಮಾಡಿದರು ಅಂತ ಹೇಳಿದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.