Bigg Boss season 8 : ಜಗಿತ್ತಾಲ ಅರಣ್ಯ ಇಲಾಖೆಗೆ ಬಂದಿರುವ ದೂರಿನ ಆಧಾರದ ಮೇಲೆ ಗಂಗವ್ವ ಸಮೇತ ಯೂಟ್ಯೂಬರ್ ರಾಜು ವಿರುದ್ಧ ಪ್ರಕರಣ ದಾಖಲಾಗಿದೆಯಂತೆ. ಮೇ 20, 2022 ರಂದು, ಮೈ ವಿಲೇಜ್ ಶೋ ಯೂಟ್ಯೂಬ್ ಚಾನೆಲ್‌ನಲ್ಲಿ ಗಂಗವ್ವ ಗಿಳಿ ಪಂಚಾಂಗ ಹೆಸರಿನ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿತ್ತು.


COMMERCIAL BREAK
SCROLL TO CONTINUE READING

ಆ ವೀಡಿಯೊದಲ್ಲಿ, ಜ್ಯೋತಿಷ್ಯ ಹೇಳಲು ಗಿಳಿಯನ್ನು ಸೆರೆಹಿಡಿಯಲಾಗಿದೆ. ಗಿಳಿ ಮತ್ತಿತರ ಪಕ್ಷಿಗಳನ್ನು ಮನರಂಜನೆಗೆ ಬಳಸುತ್ತಿರುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪ್ರಾಣಿ ದಯಾ ಸಂಘದ ಸದಸ್ಯ ಗೌತಮ್ ಅಧಿಕಾರಿಗಳಿಗೆ ದೂರಿದ್ದಾರೆ.


ಇದನ್ನೂ ಓದಿ:ದೀಪಾವಳಿ ದಿನ ನಿಮ್ಮ ಮನೆಯಲ್ಲಿ ಈ ಒಂದು ಗಿಡ ನೆಡಿ ಹಣದ ಕೊರತೆ ಎಂದಿಗೂ ಕಾಡುವುದಿಲ್ಲ..!


ಆದರೆ ಗಂಗವ್ವ ಅವರಿಗೆ ನಿಯಮಗಳ ಬಗ್ಗೆ ತಿಳಿವಳಿಕೆ ನೀಡಿ ಇನ್ನು ಮುಂದೆ ಈ ರೀತಿ ಮಾಡದಂತೆ ಬುದ್ದಿವಾದ ಹೇಳಿ ಈ ಪ್ರಕರಣದಿಂದ ಅವರ ಹೆಸರನ್ನು ತೆಗೆದುಹಾಕಬೇಕು ಎಂಬುದು ಅಭಿಮಾನಿಗಳ ಆಗ್ರಹವಾಗಿದೆ. ಅಲ್ಲದೇ ಕೆಲವರು ಗೊತ್ತಿದ್ದೋ, ಗೊತ್ತಿಲ್ಲದೋ ತಪ್ಪು ತಪ್ಪೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ವಿಡಿಯೋ ಬಗ್ಗೆ ದೂರು ನೀಡಿದ್ದು ಈಗ ವಿವಾದಕ್ಕೀಡಾಗಿದೆ.


ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಗಂಗವ್ವ ಮೇಲೆ ಈ ಪ್ರಕರಣ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಗಂಗವ್ವ ವಿರುದ್ಧದ ಪ್ರಕರಣದ ಹಿಂದೆ ಷಡ್ಯಂತ್ರ ಇರಬಹುದೆಂಬ ಶಂಕೆಯನ್ನೂ ಅವರ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.. ಮುಂದೆನಾಗುತ್ತೆ..? ಕಾಯ್ದು ನೋಡೋಣ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ