ಬೆಂಗಳೂರು :  ಕಾಂತಾರ ಸಿನಿಮಾ ನೋಡುವಾಗ ಸೀಟ್‌ ವಿಚಾರವಾಗಿ ಕನ್ನಡದ ಖ್ಯಾತ ಗಾಯಕ ವಾಸುಕಿ ವೈಭವ್‌ ಹಾಗೂ ಸ್ನೇಹಿತರ ಜೊತೆ ಗುಂಪೊಂದು ಕಿರಿಕ್ ಮಾಡಿರುವ ಘಟನೆ ನಗರದ ಊರ್ವಶಿ ಥಿಯೇಟರ್‌ನಲ್ಲಿ ನಡೆದಿದೆ. ಈ ಘಟನೆ ಸೋಮವಾರದಂದು ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಗುರುವಾರ ಮಧ್ಯಾಹ್ನ ಬಿಗ್ ಬಾಸ್ ಸ್ಪರ್ಧಿ, ಗಾಯಕ ವಾಸುಕಿ ವೈಭವ್, ದರ್ಶನ್‌ ಗೌಡ ಹಾಗೂ ಒರ್ವ ಯುವತಿ ಸೇರಿ ಊರ್ವಶಿ ಚಿತ್ರಮಂದಿರದಲ್ಲಿ ಕಾಂತಾರ ಸಿನಿಮಾ ನೋಡಲು ಹೋಗಿದ್ದರು. ಈ ವೇಳೆ ನಾಲ್ಕೈದು ಮಂದಿ ಸೀಟಿನ ವಿಚಾರವಾಗಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಟಿಕೆಟ್ ತೆಗೆದುಕೊಂಡು ಮೊದಲೇ ಸೀಟ್‌ನಲ್ಲಿ ವಾಸುಕಿ ವೈಭವ್ ಹಾಗೂ ಸ್ನೇಹಿತರು ಕುಳಿತಿದ್ದರು. ಈ ವೇಳೆ ವಾಸುಕಿ ಕುಳಿತಿದ್ದ ಸೀಟ್‌ನಿಂದ ಮುಂದೆ ಹೋಗಲು ಬಂದ ನಾಲ್ಕೈದು ಮಂದಿಯ ಗುಂಪಿಗೆ ಬೇಗ ಹೋಗುವಂತೆ ವಾಸುಕಿ ವೈಭವ್ ಹಾಗೂ ಸ್ನೇಹಿತರು ಹೇಳಿದ್ದರಂತೆ.


ಇದನ್ನೂ ಓದಿ: ಲವ್ ಜಿಹಾದ್ʼ ಆರೋಪ : ಗಂಡನ ಹಿಂಸೆ ನೆನೆದು ಕಣ್ಣೀರಿಟ್ಟ ಕನ್ನಡದ ಸೀರಿಯಲ್ ನಟಿ..!


ಇದರಿಂದ ಕುಪಿತರಾದ ಮುರುಳಿ, ಬಸವರಾಜ್ ಹಾಗೂ ಅವರ ಸ್ನೇಹಿತರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ವಾಸುಕಿ ವೈಭವ್ ಹಾಗೂ ಸ್ನೇಹಿತರು ಕೂಡಾ ತಿರುಗಿ ಬೈದಿದ್ದರು ಎನ್ನಲಾಗಿದೆ. ಇಷ್ಟಕ್ಕೆ ಸುಮನ್ನಾಗದೆ ಇಂಟರವಲ್‌ ಸಮಯದಲ್ಲಿ ಮತ್ತೆ ಎರಡು ಗುಂಪುಗಳ ನಡುವೆ ಕಿರಿಕ್ ಉಂಟಾಗಿ, ಏನ್ ಗುರಾಯಿಸುತ್ತಿಯಾ ಅಂತ ಮಾತಿನ ಚಕಮಕಿ ನಡೆದಿದೆ.


ಈ ವೇಳೆ ವಾಸುಕಿ ಸ್ನೇಹಿತರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾರೆ. ತಕ್ಷಣವೇ ಊರ್ವಶಿ ಚಿತ್ರಮಂದಿರಕ್ಕೆ ಬಂದ ಕಲಾಸಿಪಾಳ್ಯ ಪೊಲೀಸರು ಬಸವರಾಜ್‌, ಮುರುಳಿ ಹಾಗೂ ಅವರ ಸ್ನೇಹಿತರನ್ನು ಸ್ಟೇಷನ್ ಕರೆದೊಯ್ದಿದ್ದಾರೆ. ನಂತ್ರ ಇಬ್ಬರು ಕಡೆಯವರನ್ನು ಕುರಿಸಿ ಮಾತನಾಡಿದ್ದಾರೆ. ಈ ವೇಳೆ ಕೇಸ್ ಏನು ಬೇಡ, ಸಾರಿ ಕೇಳಿದ್ರೆ ಸಾಕು ಎಂದು ಗಾಯಕ ವಾಸುಕಿ ವೈಭವ್ ಹಾಗೂ ಫ್ರೆಂಡ್ಸ್ ಹೇಳಿದ್ದಾರೆ. ಬಳಿಕ ಗಲಾಟೆ ಮಾಡಿದ ಗುಂಪು ಕ್ಷಮೆ ಕೇಳಿದೆ.


ಇದನ್ನೂ ಓದಿ: OSCARS ರೇಸ್‌ನಲ್ಲಿ RRR : ಮತ್ತೊಂದು ಸಾಹಸಕ್ಕೆ ಕೈಹಾಕಿದ ಸ್ಟಾರ್‌ ಡೈರೆಕ್ಟರ್‌ ರಾಜಮೌಳಿ..!


ಇನ್ನು ವಾಸುಕಿ ವೈಭವ್‌ ಸ್ನೇಹಿತ ದರ್ಶನ್‌ಗೌಡ ದೂರು ನೀಡಿದ್ದಾರೆ. ದೂರಿನನ್ವಯ ಕಲಾಸಿಪಾಳ್ಯ ಪೊಲೀಸರು ಎನ್‌ಸಿಆರ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಗಲಾಟೆ ಮಾಡಿದ ಗುಂಪಿನಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡ ಪೊಲೀಸರು ಮತ್ತೆ ಇಂತಹ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಗಾಯಕ ವಾಸುಕಿ ವೈಭವ್, ನಿರ್ದೇಶಕ ಪನ್ನಾಗಭರಣ ಹಾಗೂ ಸ್ನೇಹಿತರು ಹಾಗೂ ಗಲಾಟೆ ಮಾಡಿದ ಗುಂಪಿನ ಜೊತೆ ಸಂಧಾನ ಮಾಡಿ ಪೊಲೀಸರು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.