ಬೆಂಗಳೂರು: ನಟ ಯುವ ರಾಜ್‌ಕುಮಾರ್ ಕೆಲದಿನಗಳ ಹಿಂದೆ ತಮ್ಮ ಪತ್ನಿ ಶ್ರೀದೇವಿ ಅವರಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪತ್ನಿ ಶ್ರೀದೇವಿ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ್ದರು. ಶ್ರೀದೇವಿ ಬೇರೆಯ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ತಮಗೆ ಶ್ರೀದೇವಿಯಿಂದ ಮಾನಸಿಕ ಹಿಂಸೆ ಆಗುತ್ತಿದೆ ಎಂದು ಸಹ ಆರೋಪಿಸಿ ಡಿವೋರ್ಸ್‌ ಕೇಳಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದರ್ಶನ್‌ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್‌ ನೇಮ್‌ ಏನು ಗೊತ್ತಾ? 


ಇದಕ್ಕೆ ಪ್ರತಿಯಾಗಿ ಶ್ರೀದೇವಿ ಬೈರಪ್ಪ ತಮ್ಮ ವಕೀಲರಿಂದ ನೋಟಿಸ್‌ ಮೂಲಕ ಉತ್ತರ ನೀಡಿದ್ದರು. ಇದರಲ್ಲಿ ಕಾಂತಾರ ಸಿನಿಮಾ ಮೂಲಕ ಹಿಟ್‌ ಪಡೆದ ನಟಿ ಸಪ್ತಮಿ ಗೌಡ ಹೆಸರು ಸಹ ಉಲ್ಲೇಖವಾಗಿತ್ತು. ನಟ ಯುವ ರಾಜ್‌ಕುಮಾರ್‌ ಅವರಿಗೆ ನಟಿ ಸಪ್ತಮಿ ಗೌಡ ಜೊತೆ ಸಂಬಂಧವಿದೆ ಎಂಬರ್ಥದಲ್ಲಿ ಆರೋಪಿಸಲಾಗಿತ್ತು. ಇದಾದ ಬಳಿಕ ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ವಿಚ್ಛೇದನದ ವಿಚಾರದ ಮಧ್ಯೆ ನಟಿ ಸಪ್ತಮಿ ಗೌಡ ಹೆಸರು ತಳಕು ಹಾಖಿಕೊಂಡಿತು. 


ಈ ಸಂಬಂಧ ನಟಿ ಸಪ್ತಮಿ ಗೌಡ ಕೋರ್ಟ್‌ ಮೆಟ್ಟಿಲೇರಿದ್ದರು. ನಟ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದರು. ವಕೀಲ ಶಂಕರಪ್ಪ ಅವರ ಮೂಲಕ ಶ್ರೀದೇವಿ ವಿರುದ್ಧ ನಟಿ ಸಪ್ತಮಿ ಗೌಡ ಕೇಸ್ ದಾಖಲಿಸಿದ್ದಾರೆ. ಡಿವೋರ್ಸ್ ವಿಚಾರದಲ್ಲಿ ಶ್ರೀದೇವಿ ಬೈರಪ್ಪ ಅವರಿ ಸಪ್ತಮಿ ಗೌಡ ಹೆಸರು ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ನಟಿ ಸಪ್ತಮಿ ಗೌಡ ಬಗ್ಗೆ ಎಲ್ಲಿಯೂ ಮಾತನಾಡದಂತೆ ಹಾಗೂ ಮಾನಹಾನಿಯಾದ ಕಾರಣ 10 ಕೋಟಿ ಪರಿಹಾರ ನೀಡುವಂತೆ ಲೀಗಲ್ ನೋಟಿಸ್ ನೀಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಲಯ ನಟಿ ಸಪ್ತಮಿ ಗೌಡ ಹೆಸರು ಎಲ್ಲಿಯೂ ಬಳಸದಂತೆ ಸೂಚಿಸಿ ಆದೇಶ ನೀಡಿದೆ. 


ಇದನ್ನೂ ಓದಿ: ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.