ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಕಮ್‍ಬ್ಯಾಕ್ ಮಾಡಲು ಸರ್ಕಸ್ ಮಾಡ್ತಿದ್ದಾರೆ. ‘ದೃಶ್ಯ-2’ ಸಿನಿಮಾಗೆ ದೊಡ್ಡ ಗೆಲುವು ಸಿಗಲಿಲ್ಲ. ಅದರೆ ಈಗ ಗೆದ್ದೇ ಗೆಲ್ಲಬೇಕೆಂಬ ಹಠದೊಂದಿಗೆ ‘ಹಠವಾದಿ’ ಕ್ರೇಜಿಸ್ಟಾರ್  ಈಗ ‘ರವಿ ಬೋಪಣ್ಣ’ನ ಅವತಾರದಲ್ಲಿ ಬೆಳ್ಳಿತೆರೆಗೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ.  .


COMMERCIAL BREAK
SCROLL TO CONTINUE READING

ಕ್ರೇಜಿಸ್ಟಾರ್ ರವಿಚಂದ್ರನ್ ಮನೆ-ಮನ ಎರಡರಲ್ಲೂ ಸಿನಿಮಾವನ್ನೇ ಅರಾಧಿಸುವ ಕನಸುಗಾರ. ವಯಸ್ಸು 60 ದಾಟಿದರೂ ನವ ಯುವಕರಂತೆ ಸಿನಿಮಾ ಕನಸು ಕಾಣುವ ರವಿಚಂದ್ರನ್, ಪ್ರತಿ ಸಿನಿಮಾದಲ್ಲೂ ಹೊಸ ಹೊಸ ಅಲೋಚನೆಯೊಂದಿಗೆ ಬರಲು ಟ್ರೈ ಮಾಡುತ್ತಿದ್ದಾರೆ. 2022ರ ಹೊಸ ವರ್ಷದ ಆರಂಭದಲ್ಲೇ ರವಿಮಾಮ ‘ರಾಜೇಂದ್ರ ಪೊನ್ನಪ್ಪ’ನ ಅವತಾರದಲ್ಲಿ 2ನೇ ದೃಶ್ಯದ ಎಂಟ್ರಿ ಕೊಟ್ಟಿದ್ದರು. ‌ಈಗ ಈ ‘ಏಕಾಂಗಿ’ ರವಿ ಬೋಪಣ್ಣನಾಗಿ ಬೆಳ್ಳಿತೆರೆ ಬೆಳಗಲು ಸಜ್ಜಾ ಗಿದ್ದಾರೆ‌.


ಇದನ್ನೂ ಓದಿ: ಕುಡಿದ ಅಮಲಿನಲ್ಲಿ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಗಲಾಟೆ, ದೂರು ದಾಖಲು


ಇದೇ ತಿಂಗಳ 12ಕ್ಕೆ ‘ರವಿ ಬೋಪಣ್ಣ’ ಅದ್ದೂರಿಯಾಗಿ ರಾಜ್ಯದಾದ್ಯಂತ ರಿಲೀಸ್ ಅಗಲಿದ್ದು, ಚಿತ್ರತಂಡ ಸದ್ದಿಲ್ಲದೆ ಪ್ರಚಾರದಲ್ಲಿ ಬ್ಯುಸಿಯಾಗಿದೆ. ರವಿಚಂದ್ರನ್ ಮಗನ ಮದುವೆ ತಯಾರಿಯಲ್ಲಿ ಬ್ಯುಸಿ ಇದ್ದರೂ ಗ್ಯಾಪ್‍ನಲ್ಲಿ ಬೋಪಣ್ಣನನ್ನು ಕರುನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ‘ರವಿ ಬೋಪಣ್ಣ’ ಚಿತ್ರದ ಕಲರ್‍ಫುಲ್ ಹಾಡಿನ ತುಣುಕನ್ನು ಬಿಟ್ಟು ಅಭಿಮಾನಗಳ ಕಾತರ ಹೆಚ್ಚಿಸಿದ್ದಾರೆ. ಅಲ್ಲದೆ ಬೋಪಣ್ಣನ ಹಾಡನ್ನು ವೀಕ್ಷಿಸಿದ ಸಿನಿಪ್ರಿಯರು ‘ಮಲ್ಲ’ ಚಿತ್ರದ ಹಾಡುಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ ಆ ಹಾಡು ಕೂಡ ‘ಮಲ್ಲ’ ಚಿತ್ರವನ್ನು ನೆನಪಿಸಿದ್ದು, ರವಿ ಬೋಪಣ್ಣ ಚಿತ್ರದಲ್ಲೂ ಕ್ರೇಜಿ ಸ್ಟಾರ್ ಕಮಾಲ್ ಮಾಡ್ತಾರೆ ಅನ್ನೋ ಲೆಕ್ಕಚಾರ ಶುರುವಾಗಿದೆ.


ಇನ್ನು ‘ರವಿ ಬೋಪಣ್ಣ’ ಚಿತ್ರ ಅಭಿಮಾನಿಗಳ ಅಂಗಳ ಸೇರಲು ಕೇವಲ 4 ದಿನಗಳು ಬಾಕಿಯಿದೆ. ಕಲರ್‍ಫುಲ್ ಆಗಿ ಜಿಟಿ ಮಾಲ್‍ನಲ್ಲಿ ನಡೆದ ‘ರವಿ ಬೋಪಣ್ಣ’ ಸಿನಿಮಾದ ಕಾರ್ಯಕ್ರಮವನ್ನು ಕ್ರೇಜಿಸ್ಟಾರ್ ಪುತ್ರರು ಮುಂದೆ ನಿಂತು ನಡೆಸಿಕೊಟ್ಟರು, ಈ ಇವೆಂಟ್‍ನಲ್ಲಿ ಕಿಚ್ಚ ಸುದೀಪ್, ಡಾಲಿ ಧನಂಜಯ್,  ನವರಸ ನಾಯಕ ಜಗ್ಗೇಶ್, ಸ್ಯಾಂಡಲ್‍ವುಡ್ ಅಧ್ಯಕ್ಷ ಶರಣ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.


ಇದನ್ನೂ ಓದಿ: Taapsee Pannu: ತನ್ನ ಚಿತ್ರವನ್ನೇ ಬಹಿಷ್ಕರಿಸಲು ನೆಟ್ಟಿಗರಿಗೆ ಕರೆ ನೀಡಿದ ತಾಪ್ಸಿ ಪನ್ನು , ಕಾರಣ ಇಲ್ಲಿದೆ


ಕಾರ್ಯಕ್ರಮದ ವೇದಿಕೆಯಲ್ಲಿ ತಂದೆ ವೀರಸ್ವಾಮಿ ಅವರನ್ನು ನೆನೆದ ರವಿಚಂದ್ರನ್, ಈಶ್ವರಿ ಸಂಸ್ಥೆಯ ಹಾದಿಯನ್ನು ಮೆಲುಕು ಹಾಕಿದರು. ಅಲ್ಲದೆ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಸ್ನೇಹಿತರಿಗೂ ಧನ್ಯವಾದ ಹೇಳಿದ ಅವರು, ಕಿಚ್ಚನ ಪಾತ್ರ ಹಾಗೂ ಅ ಪಾತ್ರಕ್ಕೆ ಕಿಚ್ಚನನ್ನು ಆಯ್ಕೆ ಮಾಡಿದ್ದರ ಸೀಕ್ರೆಟ್ ರಿವೀಲ್ ಮಾಡಿದರು. ಇದೇ ತಿಂಗಳ 12ರಂದು ಬಿಡುಗಡೆಯಾಗಲಿರುವ ‘ರವಿ ಬೋಪಣ್ಣ’ ಚಿತ್ರವನ್ನು ನೋಡುವಂತೆ ಅಭಿಮಾನಿ ದೇವರಲ್ಲಿ ಮನವಿ ಮಾಡಿದರು.


ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಮತ್ತು ಜಗ್ಗೇಶ್, ರವಿಚಂದ್ರನ್ ಅವರ ಸಿನಿ ಜರ್ನಿಯ ಹಾದಿಯಲ್ಲಿನ ಕಷ್ಟ-ಸುಖದ ದಿನಗಳನ್ನು ನೆನೆಸಿಕೊಂಡರು. ಅಲ್ಲದೆ ಡಾಲಿ ಧನಂಜಯ್ ಈ ಕಾರ್ಯಕ್ರಮಕ್ಕೆ ಬಂದ ಕಾರಣ ಹಾಗೂ ‘ಹೆಡ್ ಬುಷ್’ ಚಿತ್ರದಲ್ಲಿ ರವಿಚಂದ್ರನ್ ಪಾತ್ರ ಹಾಗೂ ಸಂಭಾವನೆ ಬಗ್ಗೆಯೂ ತಿಳಿಸಿದರು. ಒಟ್ಟಾರೆ ‘ರವಿ ಬೋಪಣ್ಣ’ ಚಿತ್ರದ ರಿಲೀಸ್ ಇವೆಂಟ್‍ಗೆ ಸ್ಯಾಂಡಲ್‍ವುಡ್ ತಾರೆಯರ ದಂಡೇ ಆಗಮಿಸಿ ಕನಸುಗಾರನ ಹೊಸ ಕನಸಿಗೆ ಶುಭ ಹಾರೈಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.