ದರ್ಶನ್ ಬಿಡುಗಡೆಗಾಗಿ ಈ ದೇವಿಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ ! ನಟನಿಗೆ ಪ್ರಸಾದ ನೀಡಲು ಜೈಲಿಗೆ ಬಂದಿರುವ ಮಡದಿ
ಪತಿಯ ಬಿಡುಗಡೆಗಾಗಿ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿರುವ ವಿಜಯಲಕ್ಷ್ಮೀ ಇದೀಗ ದೇವರ ಮೊರೆ ಹೋಗಿದ್ದಾರೆ.
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ತಿಂಗಳು ಕಳೆದಿವೆ.ಪೊಲೀಸರು ಪ್ರಕರಣದಲ್ಲಿ ಸಾಕ್ಷಿಗಳ ಹೇಳಿಕೆ ಪಡೆಯುತ್ತಲೇ ಇದ್ದಾರೆ.ಈ ಹಿನ್ನೆಲೆಯಲ್ಲಿ ದರ್ಶನ್ ಗೆ ಜಾಮೀನು ಕೂಡಾ ಸಿಗುತ್ತಿಲ್ಲ. ಜಾಮೀನು ಸಿಗುವುದು ಕಷ್ಟ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ.
ದರ್ಶನ್ ಪರಪ್ಪನ ಅಗ್ರಹಾರ ಸೇರಿದಾಗಿನಿಂದ ಅವರ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ತನ್ನ ಪತಿಯನ್ನು ಜೈಲಿನಿಂದ ಹೊಇರ ತರುವುದು ಹೇಗೆ ಎನ್ನುವುದರ ಬಗ್ಗೆಯೇ ಯೋಚಿಸುತ್ತಿರುವ ವಿಜಯಲಕ್ಷ್ಮೀ ಈ ನಿಟ್ಟಿನಲ್ಲಿ ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.ಆದರೂ ಯಾವುದೇ ರೀತಿಯ ಪ್ರಯೋಜ ಆಗುತ್ತಿಲ್ಲ.
ಇದೀಗ ವಿಜಯಲಕ್ಷ್ಮಿ ತನ್ನ ಪತಿ ದರ್ಶನ್ ಆದಷ್ಟು ಶೀಘ್ರ ಬಿಡುಗಡೆಯಾಗಲಿ ಎಂದು ದೇವರ ಮೊರೆ ಹೋಗಿದ್ದಾರೆ. ಈ ನಿಮಿತ್ತ ಕಳೆದ ವಾರ ದರ್ಶನ್ ಫ್ಯಾಮಿಲಿ ಟೆಂಪಲ್ ರನ್ ಕೂಡಾ ನಡೆಸಿತ್ತು. ಆ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ದರ್ಶನ್ ಪತ್ನಿ ವಿಶೇಷ ಪೂಜೆ ಸಲ್ಲಿಸಿದ್ದರು. ಎದುರಾಗಿರುವ ಸಂಕಷ್ಟ ದೂರವಾಗಿ ದರ್ಶನ್ ಜೈಲಿನಿಂದ ಬೇಗ ಬಿಡುಗಡೆಗೊಳ್ಳಲಿ ಎಂದು ಪೂಜೆ ಸಲ್ಲಿಸಿದ್ದರು.ಪತಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ನವ ಚಂಡಿ ಹೋಮ ನೆರವೇರಿಸಿದ್ದರು.
ಇದೀಗ ದೇವರ ಪ್ರಸಾದ ತೆಗೆದುಕೊಂಡು ವಿಜಯಲಕ್ಷ್ಮೀ ಮೈದುನ ದಿನಕರ್ ತೂಗುದೀಪ ಜೊತೆಗೆ ಜೈಲಿಗೆ ಬಂದಿದ್ದಾರೆ. ದರ್ಶನ್ ಗೆ ದೇವರ ಪ್ರಸಾದ ನೀಡಿ ಧೈರ್ಯ ಹೇಳಿಲಿದ್ದಾರೆ.
ಇದನ್ನೂ ಓದಿ : ಬಲು ವಿಭಿನ್ನವಾಗಿದೆ ತರುಣ್ - ಸೋನಾಲ್ ವೆಡ್ಡಿಂಗ್ ಕಾರ್ಡ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ನವಚಂಡಿ ಹೋಮ ಮಾಡಿಸಿದರೆ ಮನಸ್ಸಿನ ಇಚ್ಛೆ ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೆ, ನಮ್ಮ ಬಾಳಿನಲ್ಲಿ ಬಂದಿರುವ ಕಂಟಕವನ್ನು ಮೂಕಾಂಬಿಕೆ ದೂರ ಸರಿಸುತ್ತಾಳೆ ಎನ್ನುವ ನಂಬಿಕೆಯೂ ಇದೆ. ಇದೇ ನಂಬಿಕೆಯ ಆಧಾರದ ಮೇಲೆ ಇದೀಗ ವಿಜಯಲಕ್ಷ್ಮೀ ತಾಯಿಯ ಮುಂದೆ ತಮ್ಮ ಕಷ್ಟ ಪರಿಹರಿಸುವಂತೆ ಬೇಡಿಕೊಂಡಿದ್ದಾರೆ ಎನ್ನಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.