Actor Darshan : ನಟಿ ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆಗೈಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌, ನಟಿ ಪವಿತ್ರ ಗೌಡ ಸೇರಿದಂತೆ 17 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.


COMMERCIAL BREAK
SCROLL TO CONTINUE READING

ಸಧ್ಯ ದರ್ಶನ್‌ ಭೇಟಿ ಮಾಡಲು ಕುಟುಂಬಸ್ಥರು ಜೈಲಿಗೆ ಬರುತ್ತಿದ್ದಾರೆ. ನಟನ ಆಪ್ತ ಸ್ನೇಹಿತರೂ ಸಹ ಪರಪ್ಪನ ಅಗ್ರಹಾರದತ್ತ ತೆರಳುತ್ತಿದ್ದಾರೆ.. ಈ ಪೈಕಿ ಇಂದು ಸ್ಯಾಂಡಲ್‌ವುಡ್‌ ನಟ ಧನ್ವೀರ್‌ ಗೌಡ ಸಹ ʼಡೇವಿಲ್‌ʼ ಭೇಟಿ ಮಾಡಿದರು. ಸುಮಾರು 20 ನಿಮಿಷಗಳ ಕಾಲ ಆಪ್ತ ಗೆಳೆಯನ ಜೊತೆ ಮಾತನಾಡಿದರು.


ಇದನ್ನೂ ಓದಿ: 25ರ ಹರೆಯದ ನಟಿಯ ಹಿಂಬದಿ ಜೇಬಿನಲ್ಲಿ ಕೈಯಿಟ್ಟ 56 ವರ್ಷದ ನಟ..! ವಿಡಿಯೋ ವೈರಲ್‌


ಈ ವೇಳೆ ದರ್ಶನ್‌ ಯಾವ ಸಿನಿಮಾ ರಿಲೀಸ್ ಆಗುತ್ತಿದೆ..? ಇಂಡಸ್ಟ್ರಿಯಲ್ಲಿ ಏನಾಗುತ್ತಿದೆ..? ಅಂತ ಕೇಳಿದ್ದಾರೆ. ಅಲ್ಲದೆ, ಜೈಲಿನಲ್ಲಿ ಊಟ ಸೇರದೆ ದಾಸ ಸಿಕ್ಕಾಪಟ್ಟೆ ಸಣ್ಣ ಆಗಿದ್ದಾರೆ. ಇನ್ನು ಧನ್ವಿರ್‌ಗೆ ಹೆಚ್ಚು ಹೆಚ್ಚು ಸಿನಿಮಾ ಮಾಡುವಂತೆ ಕರಿಯ ಹೇಳಿದ್ದಾಗಿ ಜೀ ಕನ್ನಡ ನ್ಯೂಸ್‌ಗೆ ಮಾಹಿತಿ ಸಿಕ್ಕಿದೆ.. 


ಅಲ್ಲದೆ, ಜೈಲಿನಿಂದ ಹೊರಬಂದ ಬಳಿಕ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡೋ ಚಿಂತನೆಯಲ್ಲಿ ದರ್ಶನ್‌ ಇದ್ದಾರೆ ಎನ್ನಲಾಗಿದೆ. ಹೀಗಾಯ್ತು ನೋಡಿ ಅಂತ ಘಟನೆ ಬಗ್ಗೆ ದರ್ಶನ್‌ ಸಂಕಟದಲ್ಲೇ ಮಾತನಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ನೋವಿನಲ್ಲಿಯೂ ಸಹ ಅಭಿಮಾನಿಗಳಿಗೆ ಸೈಲೆಂಟ್ ಆಗಿರುವಂತೆ ಕೆಂಚ ಕೋರಿಕೊಂಡಿದ್ದಾರೆ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.