ಧ್ರುವ ಸರ್ಜಾ.. ಸಖತ್ ಟ್ಯಾಲೆಂಟ್ ಹೊಂದಿರೋ ನಾಯಕ ನಟ. ನಟನೆ,ಡ್ಯಾನ್ಸ್,ಡೈಲಾಗ್ ಇವೆಲ್ಲವೂ ದೊಡ್ಡ ಆಸ್ತಿ ಅನ್ನೋ ಹಾಗೇ ಧ್ರುವಗೆ ಸಿಕ್ಕಿದೆ. ಅದ್ದೂರಿ ಸಿನಿಮಾದ ನಟನೆಗೆ ಎಲ್ಲಾರು ಫಿದಾ ಆಗಿಬಿಟ್ಟಿದ್ದರು.ಅದಾದ ಬಳಿಕ ಧ್ರುವ ಸರ್ಜಾಗೆ ಅದೃಷ್ಟದ  ಬಾಗಿಲು ತೆರೆಯಿತು. ನೋಡಿ ಮಾಡಿ ಸ್ಟೋರಿ ಆಯ್ಕೆ ಮಾಡ್ಕೊಂಡು ಸಿನಿಮಾಗಳನ್ನ ಮಾಡೋ ನಟ ಅಂದ್ರೆ ಅದು ಧ್ರುವ ಸರ್ಜಾ. ಇದೀಗ ಧ್ರುವ ಮಾರ್ಟಿನ್ ಸಿನಿಮಾದ ಚಿತ್ರೀಕರಣ ಮುಗಿಸಿ ಕೇಡಿ ಸಿನಿಮಾದಳ್ಳಿ ಬ್ಯುಸಿ ಆಗಿದ್ದಾರೆ.ಇತ್ತೀಚಿಗೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡೋ ವೇಳೆ ಮಗಳು ಹೇಗಿದ್ದಾಳೆ ಸರ್ ಅನ್ನೋ ಪ್ರಶ್ನೆ ಸೇಮ್ ಟು ಸೇಮ್ ನನ್ನ ಮೂಗು ಮಗಳಿಗೆ ಬಂದಿದೆ ಅಂತ ತುಂಬಾ ಫನ್ ಆಗಿ ವಿಚಾರ ಹಂಚಿಕೊಂಡರು.


COMMERCIAL BREAK
SCROLL TO CONTINUE READING

ಸಿನಿಮಾಗಳಲ್ಲಿ ಬ್ಯುಸಿ ಆಗಿರೋ ಕಾರಣ ಹೆಚ್ಚಾಗಿ ಮಗಳೊಂದಿಗೆ ಟೈಮ್ ಸ್ಪೆಂಡ್ ಮಾಡಲು ಆಗುತ್ತಿಲ್ಲ ಅನ್ನೋದನ್ನ ಕೂಡ ಶೇರ್ ಮಾಡ್ಕೊಂಡ್ರು. ನಿಮಗೆಲ್ಲ ಗೊತ್ತಿರೋ ಹಾಗೇ ಕೇಡಿ ಸಿನಿಮಾಗಾಗಿ ಭರ್ಜರಿಯಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಧ್ರುವ ಸರ್ಜಾ. ಅದಕ್ಕಾಗೇ 17ಕೆಜಿ ದೇಹದ ತೂಕ ಇಳಿಸಿಕೊಂಡಿದ್ದಾರೆ.ಚಿಕ್ಕಪ್ಪ ಅರ್ಜುನ್ ಸರ್ಜಾ ಸಲಹೆಯಂತೆ ನಟನೆ ತರಬೇತಿ ಪಡೆದ ಧ್ರುವ, ನಿರ್ದೇಶಕ  A.P ಅರ್ಜುನ್ ಅವರ 'ಅದ್ಧೂರಿ' ಚಿತ್ರಕ್ಕಾಗಿ ನಡೆಸಿದ ಆಡಿಷನ್ ನಲ್ಲಿ ಆಯ್ಕೆಯಾದರು. 2012 ರಲ್ಲಿ ತೆರೆಕಂಡ 'ಅದ್ಧೂರಿ' ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು.


ಇದನ್ನೂ ಓದಿ-ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಅವರ 'ಮಾರ್ಟಿನ್'


ನಂತರ 2013 ರಲ್ಲಿ ಬಿಡುಗಡೆಗೊಂಡ 'ಬಹುದ್ಧೂರ್' ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡರು. 2017ರಲ್ಲಿ  ತೆರೆಗೆ ಬಂದ 'ಭರ್ಜರಿ' ಚಿತ್ರ ಕೂಡ ಶತದಿನ ಪೂರೈಸಿತು. ಧ್ರುವ ಸರ್ಜಾ ನಟಿಸಿದ ಮೊದಲ ಮೂರು ಚಿತ್ರಗಳು ಮೆಗಾಹಿಟ್ ಆಗಿವೆ.
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಇವರ ಹಿರಿಯ ಸಹೋದರ. ಹಾಗೂ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇವರ ಚಿಕ್ಕಪ್ಪ.


ಇದನ್ನೂ ಓದಿ-ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ನಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.