ಬೆಂಗಳೂರು: ದುನಿಯಾ ವಿಜಯ್ ನನ್ನ ಸರ್ವಸ್ವ, ಅವರನ್ನು ಬಿಟ್ಟು ನಾನು ಖಂಡಿತಾ ಇರಲು ಸಾಧ್ಯ ಇಲ್ಲ ಎಂದು ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ನಟ ದುನಿಯಾ ವಿಜಯ್ ಗೆ ಜಾಮೀನು ಮಂಜೂರು ಮಾಡುತ್ತಿದ್ದಂತೆ ಸಂತಗೊಂಡಿರುವ ವಿಜಯ್ ಎರಡನೇ ಪತ್ನಿ ಕೀರ್ತಿ, ನನಗೆ ಗಂಡನೇ ಸರ್ವಸ್ವ. ನಮ್ಮ ಸಂಬಂಧದ ಬಗ್ಗೆ ಯಾರು ಏನೇ ಮಾತನಾಡಿದರೂ ಸಮಸ್ಯೆಯಿಲ್ಲ. ಯಾಕಂದ್ರೆ ಮಾತನಾಡುವ ಜನ ಬಂದು ನಮ್ಮ ಸಂಸಾರ ನೋಡಲ್ಲ. ಅಷ್ಟಕ್ಕೂ ವಿಜಯ್ ಅವರು, ಮೊದಲ ಪತ್ನಿ ನಾಗರತ್ನ ಅವರಿಂದ ಯಾಕೆ ದೂರವಾದರು ಎಂಬುದು ಗೊತ್ತಿಲ್ಲ. ಆದರೆ ವಿಜಯ್ ಜೈಲಿನಿಂದ ಹೊರ ಬಂದಿದ್ದು ಬಹಳ ಸಂತೋಷ ತಂದಿದೆ, ನನ್ನ ಪ್ರಾರ್ಥನೆಗೆ ದೇವರು ಫಲ ನೀಡಿದ್ದಾನೆ ಎಂದು ಹೇಳಿದರು. 


ಶನಿವಾರ (ಸೆ.23) ತಡರಾತ್ರಿ ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಾರುತಿಗೌಡನ ಜತೆ ಜಗಳ ನಡೆಸಿದ್ದ ವಿಜಿ, ಸಹಚರರ ಸೇರಿ ತಮ್ಮ ರೇಂಜ್​ ರೋವರ್ ಕಾರಿನಲ್ಲಿ ಅಪಹರಿಸಿ, ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಬಿಜಿ ಮತ್ತು ಸಹಚರರನ್ನು ಬಂಧಿಸಿದ್ದರು.