Drone Pratap on Vinay Gowda: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಇಂದು 10ನೇ ವಾರದ ಪಂಚಾಯ್ತಿಯನ್ನು ಮುಗಿಸಿದೆ. ಆದರೆ ಮೊದಲ ದಿನದ ಪಂಚಾಯ್ತಿ ಅಂದರೆ ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್’ನಲ್ಲಿ ಕಿಚ್ಚ ಸುದೀಪ್ ಮುಂದೆಯೇ “ನನಗೆ ಬಿಗ್ ಬಾಸ್ ಮನೆಯಿಂದ ಓಡಿ ಹೋಗೋಣ ಅನಿಸ್ತು” ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ… ಕ್ರೀಡಾಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಇವರೇ!


ಅಷ್ಟಕ್ಕೂ ಡ್ರೋನ್ ಪ್ರತಾಪ್ ಹೀಗಂದಿದ್ದೇಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಕಾರಣ ವಿನಯ್ ಕೊಟ್ಟ ಕಾಟ. ಮನೆಯಲ್ಲಿ ರಾಗಿ ಮುದ್ದೆ ಮಾಡಿದರೆಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು ವಿನಯ್. ಈ ಸಂದರ್ಭದಲ್ಲಿ ಪ್ರತಾಪ್ ಸಾಕಷ್ಟು ನೋವನ್ನು ಅನುಭವಿಸಿದ್ದು, ಕ್ಯಾಮರಾ ಮುಂದೆ ಬಂದು ನನಗೆ ಶಿಕ್ಷೆ ಕೊಡಿ, ಮನೆಗೆ ದಯವಿಟ್ಟು ಗ್ಯಾಸ್ ಸಪ್ಲೈ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.


ಇದನ್ನೂ ಓದಿ: 31,608 ಎಸೆತದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೆ 500 ವಿಕೆಟ್ ಕಿತ್ತ ಬೌಲರ್


ಈ ವಿಚಾರವನ್ನು ವೀಕೆಂಡ್ ಎಪಿಸೋಡ್’ನಲ್ಲಿ ಕಿಚ್ಚ ಎತ್ತಿದ್ದಾರೆ. “ವಿನಯ್ ಅಷ್ಟೊಂದೆಲ್ಲಾ ಕಾಟ ಕೊಡಬೇಕಾದ್ರೆ ನಿಮ್ಮ ಮನಸ್ಸಲ್ಲಿ ಏನ್ ಯೋಚನೆ ಹೋಗ್ತಿತ್ತು. ನಿಜ ಹೇಳಿ” ಎಂದು ತಮಾಷೆಯಾಗಿ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್, “ನಿಜ ಹೇಳಬೇಕೆಂದ್ರೆ ನನಗೆ ಬಿಗ್ ಬಾಸ್ ಮನೆಯಿಂದಲೇ ಓಡಿ ಹೋಗೋಣ ಅಂತ ಅನಿಸಿಬಿಡ್ತು” ಎಂದಿದ್ದಾರೆ. ಇದನ್ನು ಕೇಳಿ ಇಡೀ ಮನೆಯ ಸದಸ್ಯರು ಜೋರಾಗಿ ನಕ್ಕಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ