Naseeruddin Shah On Filmfare Awards: ಚಿತ್ರರಂಗದ ಖ್ಯಾತ ನಟ ನಾಸಿರುದ್ದೀನ್ ಶಾ ಅವರು ತಮಗೆ ಸಿಕ್ಕ ಫಿಲ್ಮ್‌ಫೇರ್ ಪ್ರಶಸ್ತಿಗೆ ಸಂಬಂಧಿಸಿದಂತೆ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ, ನಟ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ತಮ್ಮ ಮನೆಯ ವಾಶ್‌ರೂಮ್‌ನ ಬಾಗಿಲಿನ ಹಿಡಿಕೆಯಾಗಿ ಬಳಸುತ್ತಿರುವುದಾಗಿ ಹೇಳಿದ್ದಾರೆ. ಇಂತಹ ಟ್ರೋಫಿಗಳಿಗೆ ತಮಗೆ ಯಾವುದೇ ಬೆಲೆ ಇಲ್ಲ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಾಸಿರುದ್ದೀನ್ ಶಾ ತಮ್ಮ ಅತ್ಯುತ್ತಮ ನಟನೆಯಿಂದ ಬಾಲಿವುಡ್‌ನಲ್ಲಿ ವಿಭಿನ್ನ ಛಾಪನ್ನು ಮೂಡಿಸಿದ್ದಾರೆ. ಅವರು ಚಿತ್ರರಂಗದ ಅತ್ಯಂತ ಮೆಚ್ಚುಗೆ ಪಡೆದ ನಟರಲ್ಲಿ ಒಬ್ಬರು. ಹಲವು ದಶಕಗಳಿಂದ ನಟನೆಯಲ್ಲಿ ಸಕ್ರೇಯರಾಗಿರುವ ನಾಸಿರುದ್ದೀನ್ ಶಾ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಪ್ರಶಸ್ತಿಗಳನ್ನು ಅವರು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ತಮ್ಮ ವಾಶ್‌ರೂಮ್‌ನ ಬಾಗಿಲಿನ ಹಿಡಿಕೆಯಾಗಿ ಬಳಸುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.


ಪಾರ್, ಸ್ಪರ್ಶ್ ಮತ್ತು ಇಕ್ಬಾಲ್ ಚಿತ್ರಗಳಲ್ಲಿ ನಾಸಿರುದ್ದೀನ್ ಶಾ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆಕ್ರೋಷ್, ಚಕ್ರ ಮತ್ತು ಮಾಸೂಮ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅವರಿಗೆ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಕೂಡ ಲಭಿಸಿವೆ. ಷಾ ತಾವು ಪ್ರಶಸ್ತಿಗಳನ್ನು ಹೇಗೆ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದರ ಕುರಿತು ಬಹಿರಂಗ ಹೇಳಿಕೆ ನೀಡಿದ್ದಾರೆ ಮತ್ತು ಅವು ಉದ್ಯಮದಲ್ಲಿ ಲಾಬಿಯ ಫಲಿತಾಂಶವೆಂದು ಭಾವಿಸುತ್ತೇನೆ ಎಂದಿದ್ದಾರೆ.


ಇದನ್ನೂ ಓದಿ-Weather Report: ಮುಂಗಾರು ಆಗಮಿಸಿದೆಯಾ ಅಥವಾ ಇನ್ನೂ ನಿರೀಕ್ಷಿಸಬೇಕಾ? ಇಲ್ಲಿದೆ ಹವಾಮಾನ ಇಲಾಖೆಯ ಭವಿಷ್ಯವಾಣಿ


ಸಂದರ್ಶನದ ವೇಳೆ ನಿಮ್ಮ ಮನೆಯಲ್ಲಿ ನೀವು ಪ್ರಶಸ್ತಿಗಳನ್ನು ಬಾಗಿಲು ಹಿಡಿಕೆಗಳಾಗಿ ಬಳಸುತ್ತೀರಾ ಎಂದು ನಟನನ್ನು ಕೇಳಲಾಗಿತ್ತು ಮತ್ತು ವದಂತಿಗಳಲ್ಲಿ ಏನಾದರೂ ಸತ್ಯಾಂಶವಿದೆಯಾ ಅಥವಾ ಇಲ್ಲವೇ ಎಂದು ಪ್ರಶ್ನಿಸಲಾಗಿತ್ತು? ಇದಕ್ಕೆ ನಗುತ್ತಾ ಉತ್ತರಿಸಿದ ನಟ "ಯಾವುದೇ ಓರ್ವ ನಟ ಒಂದು ಪಾತ್ರವನ್ನು ನಿರ್ವಹಿಸಲು ತನ್ನ ಜೀವನದಲ್ಲಿ ಕಷ್ಟಪಡುತ್ತಾನೋ ಅವನೊಬ್ಬ ಉತ್ತಮ ನಟ. ನೀವು ಅಂತಹ ಅನೇಕರಲ್ಲಿ ಒಬ್ಬ ನಟನನ್ನು ಆರಿಸಿ "ಇವನು ವರ್ಷದ ಅತ್ಯುತ್ತಮ ನಟ" ಎಂದು ಹೇಳಿದರೆ ಅದು ನ್ಯಾಯಯುತವಲ್ಲಾ ಮತ್ತು ಸರಿಯಲ್ಲ. ಆ ಪ್ರಶಸ್ತಿಗಳ ಬಗ್ಗೆ ನನಗೆ ಹೆಮ್ಮೆ ಇಲ್ಲ, ನಾನು ಕಳೆದ ಎರಡು ಪ್ರಶಸ್ತಿಗಳನ್ನು ಪಡೆಯಲು ಹೋಗಲಿಲ್ಲ, ಹೀಗಾಗಿ ನಾನು ನನ್ನ ತೋಟದ ಮನೆಯನ್ನು ನಿರ್ಮಿಸಿದಾಗ, ನಾನು ಈ ಪ್ರಶಸ್ತಿಗಳನ್ನು ಅಲ್ಲಿಯೇ ಇಡಲು ನಿರ್ಧರಿಸಿದೆ, ವಾಶ್‌ರೂಮ್‌ಗೆ ಹೋದವರಿಗೆ ಎರಡೆರಡು ಪ್ರಶಸ್ತಿಗಳು ಸಿಗುತ್ತವೆ. ಪ್ರತಿಯೊಂದೂ. ಹಿಡಿಕೆಗಳು ಫಿಲ್ಮ್‌ಫೇರ್ ಪ್ರಶಸ್ತಿಗಳಿಂದ ಮಾಡಲ್ಪಟ್ಟಿವೆ" ಎಂದಿದ್ದಾರೆ. 


ಇದನ್ನೂ ಓದಿ-Odisha Train Accident: ಬಾಲಾಸೋರ್ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ರೇಲ್ವೆ ಅಧಿಕೃತ ಹೇಳಿಕೆ ಪ್ರಕಟ


ಪ್ರಶಸ್ತಿಗಳು ಲಾಬಿಯ ಫಲಿತಾಂಶವೇ ಹೊರತು ಬೇರೇನೂ ಅಲ್ಲ ಎಂದು ನಾಸಿರುದ್ದೀನ್ ಷಾ ಹೇಳಿದ್ದಾರೆ. "ಈ ಟ್ರೋಫಿಗಳಲ್ಲಿ ನನಗೆ ಯಾವುದೇ ಮೌಲ್ಯ ಕಾಣಿಸುವುದಿಲ್ಲ, ನನಗೆ ಪ್ರಶಸ್ತಿಗಳು ಬಂದಾಗ ನಾನು ಸಂತೋಷಪಟ್ಟೆ. ಆದರೆ ನಂತರ, ನನ್ನ ಸುತ್ತಲೂ ಟ್ರೋಫಿಗಳು ರಾಶಿಯಾಗಲು ಪ್ರಾರಂಭಿಸಿದವು, ಶೀಘ್ರದಲ್ಲೇ ಅಥವಾ ನಂತರ ನಾನು ಈ ಪ್ರಶಸ್ತಿಗಳು ಲಾಬಿಯ ಫಲಿತಾಂಶವಾಗಿದೆ ಎಂಬುದನ್ನೂ ಅರ್ಥಮಾಡಿಕೊಂಡಿದ್ದೇನೆ. ನನ್ನ ಅರ್ಹತೆಯ ಕಾರಣದಿಂದ ಈ ಪ್ರಶಸ್ತಿಗಳು ಸಿಗುತ್ತಿಲ್ಲ ಎಂಬುದು ನನಗೆ ಮಾನವರಿಕೆಯಾಯಿತು. ಹೀಗಾಗಿ ನಾನು ಈ ಪ್ರಶಸ್ತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ನಂತರ ನನಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಬಂದಾಗ, ನನ್ನ ನೌಕರಿಯ ಬಗ್ಗೆ ಯಾವಾಗಲೂ ಚಿಂತಿಸುತ್ತಿದ್ದ ನನ್ನ ದಿವಂಗತ ತಂದೆ ನೆನಪಿಗೆ ಬಂದರು. ಅವರು ಯಾವಾಗಲೂ ನೀನು ಈ ನಿಷ್ಪ್ರಯೋಜಕ ಕೆಲಸ ಮಾಡಿದರೆ ಮೂರ್ಖನಾಗುವೆ’ ಎನ್ನುತ್ತಿದ್ದರು. ಹೀಗಾಗಿ ಪ್ರಶಸ್ತಿ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ಹೋದಾಗ ತಲೆ ಮೇಲಕ್ಕೆತ್ತಿ ನೀವು ಇದನ್ನೆಲ್ಲಾ ನೋಡುತ್ತಿರುವಿರಾ ಎಂದು ಪ್ರಶ್ನಿಸಿದೆ ಮತ್ತು ನನಗೆ ನಂಬಿಕೆ ಇದೆ ಅವರು ಎಲ್ಲೆ ಇದ್ದರೂ, ಈ ಪ್ರಶಸ್ತಿಗಳನ್ನು ಪಡೆದು ನಾನು ಖುಷಿಯಾಗಿದ್ದೇನೆ  ಎಂಬುದನ್ನೂ ನೋಡಿ ಅವರು  ಸಂತೋಷಪಡುತ್ತಾರೆ. ಆ ಪ್ರಶಸ್ತಿಗಳನ್ನು ಸ್ವೀಕರಿಸಲು ನನಗೆ ಅತೀವ ಸಂತೋಷವಾಗಿತ್ತು" ಎಂದಿದ್ದಾರೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.