ನಿವೇದಿತಾ ಜೈನ್..‌ ಈ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರು ಹೇಳೋದು ಒಂದೇ "ಛೇ ಆಕೆ ಸಾಯಬಾರದಿತ್ತು".. ಆಕೆಗೆ ಏನಾಗಿತ್ತು..? ಇದು ಆತ್ಮಹತ್ಯೆಯೋ ಅಥವಾ ಇನ್ನೇನೋ..? ಇವತ್ತಿಗೂ ಇದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಹಾಗಾದ್ರೆ ಈಕೆಯ ಸಾವಿನ ಸುತ್ತ ಹುಟ್ಟಿಕೊಂಡಿರೋ ಒಂದಷ್ಟು ವಿಚಾರದ ಇನಸೈಡ್‌ ಸ್ಟೋರಿ (Inside Story) ಇಲ್ಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Women's day special: ಬಾಲಿವುಡ್ ತಾರೆಯಾಗಲು ಬಂದವಳು ಮಾಫಿಯಾ ಕ್ವೀನ್ ಆದ ನೈಜ ಕಹಾನಿ


ಸೂತ್ರಧಾರ, ಪ್ರೇಮ ರಾಗ ಹಾಡು ಗೆಳತಿ, ಬಾಳಿನ ದಾರಿ, ಬಾಳಿದ ಮನೆ, ಅಮೃತವರ್ಷಿಣಿ, ನೀ ಮುಡಿದಾ ಮಲ್ಲಿಗೆ.. ಈ ಸಿನಿಮಾಗಳನ್ನ ಯಾರು ನೋಡಿಲ್ಲ ಹೇಳಿ. ಪ್ರತಿಯೊಬ್ಬ ಸಿನಿ ಪ್ರೇಮಿ ಇದನ್ನ ನೋಡಿಯೇ ಇರ್ತಾನೆ. ಸಿನಿಮಾದಲ್ಲಿರೋ ಮುದ್ದಾದ ನಟಿ ನಿವೇದಿತಾ ಜೈನ್ ನ (Nivedita Jain) ಮರೆಯೋದಕ್ಕೆ ಹೇಗೆ ಸಾಧ್ಯ ಹೇಳಿ.


17 ಮೇ 1979ರಂದು ಜನಿಸಿದ ನಿವೇದಿತಾ ಜೈನ್ ಮಾಡೆಲಿಂಗ್‍ನಿಂದ (Modeling) ಚಿತ್ರರಂಗಕ್ಕೆ ಪ್ರವೇಶ ಪಡೆದ ಬೆಂಗಳೂರಿನ ಹುಡುಗಿ. 1996 ರಲ್ಲಿ ಶಿವಮಣಿ ನಿರ್ದೇಶನದ, ಶಿವರಾಜ್‍ಕುಮಾರ್ (Shivarajkumar) ನಾಯಕತ್ವದ "ಶಿವಸೈನ್ಯ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಿವೇದಿತಾ ಅಂದಿನ ಪಡ್ಡೆ ಹೈಕಳ ನಿದ್ದೆ ಕದ್ದಾಕೆ. ಅಷ್ಟೇ ಅಲ್ಲ ಆ ಕಾಲದಲ್ಲೇ ಮಿಸ್ ಬೆಂಗಳೂರು ಪಟ್ಟ ಪಡೆದ ಅದ್ಭುತ ನಟಿ . ಶಿವಸೈನ್ಯ ನಂತರ ಬಣ್ಣದ ಜಗತ್ತಿನಲ್ಲಿ ಸಾಕಷ್ಟು ಅವಕಾಶಗಳು ಹುಡುಕಿ ಬಂದವು. ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾ ಕನ್ನಡವಷ್ಟೇ ಅಲ್ಲದೇ ಪರಭಾಷೆಯಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದರು .


ನಟಿ ನಿವೇದಿತಾ ಜೈನ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಹಾಗೂ ದೊಡ್ಡ ಮಟ್ಟದ ಭರವಸೆ ಮೂಡಿಸಿದ್ದ ನಟಿ. ಕೇವಲ 17 ವರ್ಷಕ್ಕೆ ನಟನಾ ವೃತ್ತಿಗೆ ಬಂದ ನಿವೇದಿತ ಸಿನಿಮಾ ರಂಗದಲ್ಲಿ ಇದ್ದಿದ್ದು ಎರಡೇ ವರ್ಷವಾದರು ನೆನಪುಳಿವ ಸಿನಿಮಾಗಳಲ್ಲಿ ನಟಿಸಿದರು.


  ಪವರ್‌ ಸ್ಟಾರ್‌ ಪುನೀತ್‌ ಅಭಿನಯದ ಕೊನೆಯ ಸಿನಿಮಾಗೆ ಕೋಟಿ ಕೋಟಿ ಆಫರ್..!‌


ನಿವೇದಿತಾ ಸಾಯುವ ಮುನ್ನ  ದಿನವೂ  ಅವರು ಗುಣಮುಖರಾಗುತ್ತಾರೆ ಅಂತನೇ ಕುಟುಂಬದವರು ಹೇಳಿದ್ದರು. ಆದರೆ ಅದಾದ ಮಾರನೇ ದಿನವೇ ನಿವೇದಿತ ಮೃತರಾದರು ಅನ್ನೋ ಸುದ್ದಿ ಅನುಮಾನಕ್ಕೆ ಕಾರಣ ಮಾಡಿಕೊಟ್ಟಿದೆ. ಆದರೆ ಅವರ ಸಾವಿನ ಸುತ್ತ ಎದ್ದಿದ್ದ ಅನುಮಾನಗಳ ಹುತ್ತ ಇಂದಿಗೂ ಕರಗಿಲ್ಲ. ಈಗಲೂ ಕನ್ನಡದ ನಟಿಯರ ಅಕಾಲಿಕ ಸಾವಿನ ವಿಷಯಗಳು ಚರ್ಚೆಗೆ ಬಂದಾಗ ನಿವೇದಿತಾ ಸಾವು ಚರ್ಚೆ ಆಗದೇ ಇರುವುದಿಲ್ಲ. 


ನಿವೇದಿತಾ ಆತ್ಮಹತ್ಯೆ ಮಾಡಿಕೊಂಡರು ಎಂದೇ ಇಂದಿಗೂ ಹಲವಾರು ಮಂದಿ ನಂಬಿದ್ದಾರೆ. ಧಾರವಾಹಿಯ ನಿರಮಾಪಕರೊಬ್ಬರು ಈ ಘಟನೆಯಾಗೋ ಒಂದಷ್ಟು ದಿನಗಳ ಹಿಂದೆ ನಿವೇದಿತಾರನ್ನ ಅವರ ಮನೆಯಲ್ಲಿ ಮೀಟ್‌ ಮಾಡಲು ಹೋದಾಗಲೂ ಅವರ ಮುಖದಲ್ಲಿ ಸಂತಸ ಇರದೆ ಇದ್ದದ್ದನ್ನ ಗಮನಿಸಿದ್ದರಂತೆ. ಇಷ್ಟೆಲ್ಲಾ ಐಶಾರಾಮಿ ಜೀವನ ಸಾಗಿಸುತ್ತಿದ್ದ ನಟಿ ನಿವೇದಿತಾ ಜೈನ್‌ಗೆ ಹಾಗಾದ್ರೆ ಏನಾಗಿತ್ತು.? ಆಕೆಗೆ ಯಾರಾದ್ರೂ ಮಾನಸಿಕವಾಗಿ ಕಿರುಕುಳ ನೀಡಿದ್ದರೇ..? ಅಥವಾ ಪ್ರೀತಿಪ್ರೇಮ ಅಂತ ಮೋಸ ಹೋಗಿದ್ದರೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು ಹೇಗೆ ಅನ್ನೋದೆ ಯಕ್ಷ ಪ್ರಶ್ನೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.