Bhagavanth Kesari: ಸ್ಯಾಂಡಲ್‌ವುಡ್‌ ನಟಿ ಶ್ರೀಲೀಲಾ ಕಿಸ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಂತರ ಭರಾಟೆ, ಬೈಟು ಲವ್‌, ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಅಷ್ಟೇ, ಈ ನಟಿಗೆ ಸಾಲು ಸಾಲು ಟಾಲಿವುಡ್‌ ಚಿತ್ರಗಳಲ್ಲಿ ನಟಿಸುವಲ್ಲಿ ಬಿಸಿಯಾಗಿದ್ದಾರೆ. ಸದ್ಯ ಶ್ರೀಲೀಲಾ ನಟ ಬಾಲಕೃಷ್ಟನ ಅವರ ಜೊತೆ ʼಭಗವಂತ್‌ ಕೇಸರಿʼ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಇತ್ತೀಚೆಗೆ ಈ ಚಿತ್ರ ಡ್ರೇಲರ್‌ ರಿಲೀಸ್‌ ಆಗಿದೆ. 


COMMERCIAL BREAK
SCROLL TO CONTINUE READING

ಭಗವಂತ್‌ ಕೇಸರಿ ಸಿನಿಮಾ ಇದೇ ಅಕ್ಟೋಬರ್‌ 19ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲು ಚಿತ್ರತಂಡ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆ ಚಿತ್ರದ ಟ್ರೇಲರ್‌ ಲಾಂಚ್‌ ಇವೆಂಟ್‌ನಲ್ಲಿ ನಟಿ ಶ್ರೀಲೀಲಾ ಭಾವುಕರಾಗಿ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಶ್ರೀಲೀಲಾ  ಬಾಲಯ್ಯ ಸೋದರನ ಮಗಳು ವಿಜಯಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದಾರೆ. ತಂದೆ ಮಗಳ ಭಾಂಧವ್ಯ, ಹಾಗೆ ಕಮರ್ಷಿಯಲ್‌ ಎಲಿಮೆಂಟ್‌  ಎಲ್ಲಾ ಸೇರಿ ಒಂದೊಳ್ಳೆ ಫ್ಯಾಮಿಲಿ ಎಂಟ್ರಟೇನರ್‌ ಕಥೆಯ ಸಿನಿಮಾವಾಗಿದೆ ಎಂದು ತಿಳಿದಿದೆ.


ಇದನ್ನೂ ಓದಿ-ಬಿಗ್‌ ಬಾಸ್‌ ಮನೆಯಿಂದ ಅನಾರೋಗ್ಯದ ಕಾರಣ ಹೊರ ನಡೆದ ಸ್ಪರ್ಧಿ.!!


ನಟಿ ಶ್ರೀಲೀಲಾ ಟ್ರೇಲರ್‌ ಲಾಂಚ್‌ ಇವೆಂಟ್‌ನ ವೇದಿಕೆಯ ಮೇಲೆ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಡೆದ ಅನುಭವಗಳನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ಮಾತನಾಡಿದ್ದಾರೆ. ವೇದಿಕೆ ಮೇಲೆ ಮಾತನಾಡುವಾಗ ಈ ಚಿತ್ರದಲ್ಲಿ ನಾನು ವರಂಗಲ್ ಹುಡುಗಿಯಾಗಿ ನಟಿಸಿದ್ದೇನೆ. ನಾನೂ ಅದೇ ರೀತಿ ಇಲ್ಲಿಗೆ ಬಂದೆ. ನಿರ್ದೇಶಕ ಅನಿಲ್ ರಾವಿಪುಡಿ ನನಗೆ ಅಂತಹ ಸೋಲ್ ಕನೆಕ್ಟ್ ಪಾತ್ರ ಕೊಟ್ಟಿರುವುದಕ್ಕೆ ತುಂಬ ಧನ್ಯವಾದಗಳು. ನಾನು ಅನೇಕ ಸಿನಿಮಾ ಕಥೆಗಳಲ್ಲಿ ನಟಿಸುತ್ತಿದ್ದೇನೆ. ಆದರೆ ಈ ಪಾತ್ರ ನನಗೆ ಹೆಚ್ಚು ಕನೆಕ್ಟ್ ಆಗಿತ್ತು. ದಿನಗಳು ಕಳೆದಂತೆ ನಾನು ಆ ಪಾತ್ರವಾಗಿ ಬದಲಾದೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ." ಎಂದು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ-Bigg Boss 10: ಬಿಗ್‌ ಬಾಸ್‌ನಲ್ಲಿ ಈ ಬಾರಿ ಜೈಲಿನಷ್ಟೇ ಶಿಕ್ಷೆ ಕೂಡ ಸ್ಪೆಷಲ್‌ ಆಗಿರಲಿದೆ..!


ಇನ್ನು ಸಿನಿಮಾದಲ್ಲಿ ಬಾಲಕೃಷ್ಣ ಜೊತೆ ಅಭಿನಿಯಿಸಿದ ಅನುಭವವನ್ನು ಹಂಚಿಕೊಳ್ಳುತ್ತಾ "ಬಾಲಕೃಷ್ಣ ಅವರೊಟ್ಟಿಗೆ ನನಗೆ ಭಾವನಾತ್ಮಕ ಸನ್ನಿವೇಶಗಳಿವೆ. ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಈ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ನಟಿಸುವಾಗ ಕಟ್ ಹೇಳಿದರೂ ಅದೇ ಮೂಡ್‌ನಲ್ ಇರುತ್ತಿದ್ದೆ. ತಕ್ಷಣ ಹೊರಗೆ ಬರಲು ಆಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಅವರು ನನ್ನನ್ನು ನಗುವಂತೆ ಮಾಡಿ ನನ್ನನ್ನು ಸಹಜ ಸ್ಥಿತಿಗೆ ತರುತ್ತಿದ್ದರು. ಬಾಲಕೃಷ್ಣ ಅವರ ಬೆಂಬಲ ಮರೆಯುವುದಿಲ್ಲ. ಈ ಚಿತ್ರದಲ್ಲಿ ಸಾಕಷ್ಟು ಒಳ್ಳೆ ದೃಶ್ಯಗಳಿವೆ. ನನ್ನ ನಿಜ ಜೀವನದಲ್ಲಿ ಅನುಭವಿಸದ ಅನುಭವಗಳನ್ನು ಬಾಲಕೃಷ್ಣ ಅವರು ಈ ಚಿತ್ರದಲ್ಲಿ ಒದಗಿಸಿದ್ದರು" ಎಂದು ಹೇಳಿದ್ದಾರೆ.


ನಟಿ ಶ್ರೀಲೀಲಾ ಅವರ ಜೀವನದಲ್ಲಿ ತಂದೆಯ ಅನುಪಸ್ಥಿತಿಯನ್ನು ನೆನಪಿಸಿಕೊಂಡು  ಭಗವಂತ್ ಕೇಸರಿ ಚಿತ್ರದಲ್ಲಿ  ವಿಜಯಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವುದನ್ನು ಪ್ರಸ್ತಾಪಿಸಿದ್ದಾರೆ ಎನ್ನುವ ಚರ್ಚೆ ಸದ್ಯ  ಟಾಲಿವುಡ್‌ ಅಂಗಳದಲ್ಲಿ ನಡೆಯುತ್ತಾಯಿದೆ. ಬಾಲಕೃಷ್ಣ ಜಬರ್ದಸ್ತ್ ಆಕ್ಷನ್ ಹಾಗೂ ಡೈಲಾಗ್ಸ್ ಮಿಕ್ಸ್ ಮಾಡಿ 'ಭಗವಂತ್ ಕೇಸರಿ' ಟ್ರೈಲರ್ ಕಟ್ ಮಾಡಲಾಗಿದೆ. ಇಂಡಿಯನ್ ಆರ್ಮಿಯಲ್ಲಿ ವಿಜಯಲಕ್ಷ್ಮಿಯನ್ನು ಸೇರಿಸಬೇಕು, ಅದಕ್ಕೆ ಆಕೆಗೆ ತರಬೇತಿ ನೀಡಬೇಕು ಎಂದು ಶ್ರಮಿಸುವ ನೇಲಕೊಂಡ ಭಗವಂತ್ ಕೇಸರಿ ಕಥೆ ಚಿತ್ರದಲ್ಲಿದೆ.


ಈ ಚಿತ್ರ ಕೆಲವು ದಿನಗಳಲ್ಲಿ ರಿಲೀಸ್‌ ಆಗಲಿದ್ದು, ಸಿನಿಮಾ ಸೂಪರ್‌ ಹಿಟ್‌ ಆಗಲಿ ಎಂದು ಆಶಿಸೋಣ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.