Kangana Ranaut on Rahul Gandhi : ತಮ್ಮ ನೇರ ದಿಟ್ಟ ಮಾತುಗಳಿಂದ ಬಾಲಿವುಡ್ ನಟಿ ಕಂಗನಾ ರನೌತ್ ಸದಾ ಸುದ್ದಿಯಲ್ಲಿರುತ್ತಾರೆ. ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬಿಟೌನ್‌ ಬೆಡಗಿಯ ಹೇಳಿಕೆಗಳಿಂದಾಗಿ ವಿವಾದಗಳು ಕೂಡ ಕೇಳಿಬರುತ್ತಿದ್ದವು. ಇದರಿಂದ ಆಕೆಯ ಟ್ವಿಟ್ಟರ್ ಖಾತೆಯನ್ನೂ ಬ್ಯಾನ್ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಕಂಗನಾ ಟ್ವಿಟರ್‌ಗೆ ಮರಳಿದ್ದರು.


COMMERCIAL BREAK
SCROLL TO CONTINUE READING

ಕಂಗನಾ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗಾಗಿ ಟ್ವಿಟರ್‌ನಲ್ಲಿ #AskKangana ಸೆಷನ್ ಅನ್ನು ನಡೆಸಿದರು. ಈ ಸೆಷನ್‌ನಲ್ಲಿ ಅವರ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು. ಟ್ವಿಟರ್ ಖಾತೆಯಲ್ಲಿ ಕಂಗನಾಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ʼಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಬಗ್ಗೆ ಯಾರಾದರೂ ಮಾತನಾಡುವುದನ್ನು ನೀವು ಕೇಳಿದಾಗ, ಅದರ ಬಗ್ಗೆ ನಿಮಗೆ ಏನನಿಸುತ್ತದೆ?ʼ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಅಭಿಮಾನಿಯೊಬ್ಬರ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂಗನಾ, ರಾಹುಲ್ ಗಾಂಧಿಯನ್ನು ಚಿಕ್ಕ ಮಗುವಿಗೆ ಹೋಲಿಸಿದ್ದಾರೆ. ಓಲೆ ಓಲೆ... ಸಿಹಿ ತೋರಿಸು ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ. ಸದ್ಯ ಕಂಗನಾ ಟ್ವೀಟ್ ವೈರಲ್‌ ಆಗುತ್ತಿದೆ.


ʼಸತ್ಯ ಸಿಂಹ ಇದ್ದ ಹಾಗೆ, ಅದನ್ನು ಯಾರೂ ರಕ್ಷಿಸಬೇಕಾಗಿಲ್ಲʼ : ವಿಜಯಲಕ್ಷ್ಮಿ ದರ್ಶನ್‌ ಪೋಸ್ಟ್‌ ವೈರಲ್‌


ಕಂಗನಾ ಸದಾ ರಾಜಕೀಯ ಮತ್ತು ಸಿನಿಮಾ ವಿಚಾರದಲ್ಲಿ ತೀವ್ರವಾಗಿ ಮಾತನಾಡುತ್ತಾರೆ. ಇದರಿಂದ ವಿರೋಧ ಮತ್ತು ಪರ ಪ್ರತಿಕ್ರಿಯೆಗಳನ್ನು ಅವರು ಎದುರಿಸಿದ್ದಾರೆ. ಅಭಿಮಾನಿಯೊಬ್ಬರು ಕಂಗನಾ ಅವರ ರಾಜಕೀಯ ಪ್ರವೇಶದ ಬಗ್ಗೆ ಕೇಳಿದರು. ʼನೀವು ಯಾವಾಗ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತೀರಿ?ʼ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಕಂಗನಾ ʼನಾನು ಕಲಾವಿದೆಯಾಗಿ ಹೆಚ್ಚು ಕೆಲಸ ಮಾಡಲು ಬಯಸುತ್ತೇನೆ" ಎಂದು ಟ್ವೀಟ್ ಮೂಲಕ ಉತ್ತರ ನೀಡಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.