ನವದೆಹಲಿ:ಆಂಧ್ರಪ್ರದೇಶದಲ್ಲಿ ವೈಜಾಗ್ ವಿಷಾನಿಲ ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.ಈ ದುರದೃಷ್ಟಕರ ಘಟನೆಯ ಬಗ್ಗೆ ಅನೇಕ ಸೆಲೆಬ್ರಿಟಿಗಳು ಕಳವಳ ವ್ಯಕ್ತಪಡಿಸಿ, ಸಂತ್ರಸ್ತರಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಏತನ್ಮಧ್ಯೆ, ಗಾಯಕಿ ಕನಿಕಾ ಕಪೂರ್ ಕೂಡ ಘಟನೆಯ ಕುರಿತು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಆದರೆ ಅವಳ ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಟ್ರೊಲ್ ಮಾಡಲು ಆರಂಭಿಸಿದ್ದಾರೆ.



COMMERCIAL BREAK
SCROLL TO CONTINUE READING

ಘಟನೆಯ ಕುರಿತು ಟ್ವೀಟ್ ಮಾಡಿರುವ ಕನಿಕಾ, 'ವಿಶಾಖಪಟ್ಟಣಂ ಮತ್ತು ವೈಜಾಗ್ ಅನಿಲ ಸೋರಿಕೆಯ ಸಂತ್ರಸ್ತರಿಗೆ ಪ್ರಾರ್ಥನೆಗಳು ...' ಎಂದು ಬರೆದುಕೊಂಡಿದ್ದಾರೆ. ಕನಿಕಾ ಅವರ ಈ ಟ್ವೀಟ್‌ನಲ್ಲಿ ಅಭಿಮಾನಿಯೊಬ್ಬರು, 'ಓ ಅಕ್ಕಾ ಸದ್ಯ ನೀವು ಮನೆಯಲ್ಲಿಯೇ ಕ್ವಾರಂಟಿನ್ ನಲ್ಲಿ ಇರಿ. ಹುಟ್ಟುಹಬ್ಬದ ಸಂತೋಷಕೂಟ ಮತ್ತು ಫ್ಯಾಮಿಲಿ ಪಾರ್ಟಿ ಆಚರಿಸಲು ಹೊರಗೆ ಹೋಗಬೇಡಿ ... ಅಕ್ಕ ತಮಾಷೆ ಮಾಡುತ್ತಿರುವೆ..ನಿಮ್ಮನ್ನು ಮತ್ತೆ ನೋಡಿ ತುಂಬಾ ಖುಷಿಯಾಗುತ್ತಿದೆ. ಮನೆಯಲ್ಲೇ ಸುರಕ್ಷಿತವಾಗಿರಿ... ದೇವರು ನಿಮಗೆ ಒಳ್ಳೆಯದನ್ನು ಮಾಡಲಿ' ಎಂದು ಪ್ರತಿಕ್ರಿಯಿಸಿದ್ದಾನೆ'.



ಆಂಧ್ರಪ್ರದೇಶದ ವೈಜಾಗ್ ನಲ್ಲಿರುವ ರಾಸಾಯನಿಕ ಸ್ಥಾವರದಲ್ಲಿನ ವಿಷಾನಿಲ ಸೋರಿಕೆ ದುರಂತದಲ್ಲಿ 10 ಜನರು ಮೃತಪಟ್ಟಿದ್ದಾರೆ ಹಾಗೂ ಒಂದು ಸಾವಿರ ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಘಟನೆಯಲ್ಲಿ ವಿಷಾನಿಲದ ಪ್ರಭಾವಕ್ಕೆ ಒಳಗಾದ ಸುಮಾರು 200 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.