ಇಂದು ದೇಶಾದ್ಯಂತ ತೆರೆಕಂಡಿರುವ ಬಹು ವಿವಾದಿತ 'ಪದ್ಮಾವತ್' ಚಿತ್ರಕ್ಕೆ ರಾಜ್ಯ ಬಂದ್ ಬಿಸಿ ತಟ್ಟಿದೆ. ಮಹಾದಾಯಿ ನೀರಿಗಾಗಿ ಇಂದು ಕರೆ ನೀಡಿರುವ ಕರ್ನಾಟಕ ಬಂದ್'ಗೆ ಚಿತ್ರೋದ್ಯಮವೂ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದ್ದು, ಚಿತ್ರ ಮಂದಿರಗಳು ಬಂದ್ ಆಗಿವೆ.


COMMERCIAL BREAK
SCROLL TO CONTINUE READING

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಇಂದು ರಿಲೀಸ್ ಆಗಬೇಕಿದ್ದ 'ಪದ್ಮಾವತ್' ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾಗಿಲ್ಲ. ಬೆಂಗಳೂರಿನ ಅವೆನ್ಯು ರಸ್ತೆಯ ಅಭಿನಯ್ ಚಿತ್ರಮಂದಿರ ಸಂಪೂರ್ಣ  ಬಂದ್ ಆಗಿದ್ದು, ಅಭಿಮಾನ್ ಚಿತ್ರಮಂದಿರದಲ್ಲಿ ಇಂದು 'ಪದ್ಮಾವತ್' ಚಿತ್ರದ 5 ಶೋ ನಡೆಯಬೇಕಿತ್ತು.
ಥೀಯೆಟರ್ ಬಂದ್ ಆಗಿರೋ ಕಾರಣ ಜನರು ಕೂಡ ಚಿತ್ರ ಮಂದಿರಗಳ ಬಳಿ ಸುಳಿದಿಲ್ಲ.