'ರಾಕಿಭಾಯ್‌' ಹೊಸ ಸಾಮ್ರಾಜ್ಯಕ್ಕೆ ಎಂಟ್ರಿ ಕೊಡಲು ಕೌಂಟ್‌ಡೌನ್‌ ಶುರು ಆಗಿದ್ದು, ಇನ್ನೇನು ಕೆಲವೇ ಹೊತ್ತಲ್ಲಿ ಜಗತ್ತಿನಾದ್ಯಂತ ‌ಕನ್ನಡ ಸಿನಿಮಾ 'ಕೆಜಿಎಫ್‌' ಚಾಪ್ಟರ್‌ 2 ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಎಲ್ಲರ ಬಾಯಲ್ಲೂ ಕನ್ನಡ ಸಿನಿಮಾ ಪ್ರತಿಧ್ವನಿಸುತ್ತಿದೆ. ಆದರೆ ಈ ಹೊತ್ತಲ್ಲೇ ಪೈರಸಿ ಭೂತ ಕೂಡ ಕನ್ನಡ ಸಿನಿಮಾಗೆ ಕಾಡುತ್ತಿದ್ದು, ಈ ಬಾರಿ ಪೈರಸಿ ವಿರುದ್ಧ ಸಮರ ಸಾರಲು 'ಕೆಜಿಎಫ್‌' ನಿರ್ದೇಶಕ ಪ್ರಶಾಂತ್‌ ನೀಲ್ ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತು ಅಭಿಮಾನಿಗಳಲ್ಲಿ ಮನವಿ ಮಾಡಿರುವ 'ಕೆಜಿಎಫ್‌' ನಿರ್ದೇಶಕ ಪ್ರಶಾಂತ್‌ ನೀಲ್, 'ಪೈರಸಿ ವಿರುದ್ಧದ ಹೋರಾಟ ನಿಮ್ಮಿಂದ ಪ್ರಾರಂಭವಾಗುತ್ತದೆ! ದಯವಿಟ್ಟು ವೀಡಿಯೊ & ಫೋಟೋ ತೆಗೆದುಕೊಳ್ಳಬೇಡಿ ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಬೇಡಿ!' ಎಂದಿದ್ದಾರೆ.


ಪ್ರಶಾಂತ್‌ ನೀಲ್ ಕೊಟ್ಟಿದ್ದಾರೆ.


ಕನ್ನಡ ಸಿನಿಮಾಗಳಿಗೆ ಪೈರಸಿ ಭೂತ ಎಂಬುದೇ ದೊಡ್ಡ ತೊಡಕಾಗಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಕರ್ನಾಟಕ ರತ್ನ, ಕನ್ನಡಿಗರ ಪಾಲಿನ ಪ್ರೀತಿಯ 'ಅಪ್ಪು' ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯ ಸಿನಿಮಾ 'ಜೇಮ್ಸ್'‌ ಚಿತ್ರಕ್ಕೂ ಇದೇ ರೀತಿ ಪೈರಸಿ ಕಾಟ ಕೊಟ್ಟಿತ್ತು. ಅಭಿಮಾನಿಗಳು ಕೂಡ ಪೈರಸಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸದ್ಯ 'ಕೆಜಿಎಫ್‌-2' ನಿರ್ದೇಶಕರು ಕೂಡ ಅಭಿಮಾನಿಗಳಿಗೆ ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಮನವಿ ಮಾಡುವ ಮೂಲಕ, ಪೈರಸಿ ವಿರುದ್ಧ ಸಮರ ಸಾರಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.