ತೆಲಂಗಾಣ: ಟಾಲಿವುಡ್ ಮೆಗಾಸ್ಟಾರ್​ ಚಿರಂಜೀವಿ ಮತ್ತು ಕಿಚ್ಚ ಸುದೀಪ್​ ಅಭಿನಯದ ಸೈರಾ ಚಿತ್ರದ ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ. 


COMMERCIAL BREAK
SCROLL TO CONTINUE READING

ತೆಲಂಗಾಣದ ಸಿರಿಲಿಂಗಂಪಲ್ಲಿ ಎಂಬಲ್ಲಿ ರಂಗಸ್ಥಲಂ ಚಿತ್ರಕ್ಕೆ ಹಾಕಿದ್ದ ಬೃಹತ್ ಸೆಟ್ ನಲ್ಲಿಯೇ ಸೈರಾ ನರಸಿಂಹರೆಡ್ಡಿ ಚಲನಚಿತ್ರದ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ, ಸೆಟ್ ಹಾಕಿ ಚಿತ್ರೀಕರಣ ನಡೆಸಲು ಆ ಸ್ಥಳಕ್ಕೆ ಅನುಮತಿ ಪಡೆಯದಿರುವ ಕಾರಣದಿಂದ ಆದಾಯ ಅಧಿಕಾರಿಗಳು ಶೂಟಿಂಗ್ ಸೆಟ್ ಅನ್ನು ಧ್ವಂಸಗೊಳಿಸಿದ್ದಾರೆ. 


ಸೈರಾದಲ್ಲಿ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೊತೆ ಕಿಚ್ಚ ಸುದೀಪ್!


ಈ ಹಿಂದೆ ಆ ಸ್ಥಳವನ್ನು ರಂಗಸ್ಥಲಂ ಚಿತ್ರದ ಚಿತ್ರೀಕರಣಕ್ಕಾಗಿ ಲೀಸ್ ಗೆ ಪಡೆಯಲಾಗಿತ್ತು. ಆದರೆ ಆ ಲೀಸ್ ಅವಧಿ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಅದೇ ಭೂಮಿಯಲ್ಲಿ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಆರಂಭಿಸಲಾಗಿತ್ತು. ಆದರೆ ಅದು ಸರ್ಕಾರದ ಭೂಮಿ ಆಗಿರುವುದರಿಂದ ಸೈರಾ ಚಿತ್ರದ ಚಿತ್ರೀಕರಣಕ್ಕೂ ಪ್ರತ್ಯೇಕ ಅನುಮತಿ ಪಡೆಯದೆ ಚಿತ್ರೀಕರಣ ನಡೆಸುತ್ತಿದ್ದರಿಂದ ಅಲ್ಲಿದ್ದ ರಂಗಸ್ಥಲಂ ಚಿತ್ರದ ಸೆಟ್​ ನೆಲಸಮ ಮಾಡಿರುವ ಆದಾಯ ತೆರಿಗೆ ಇಲಾಖೆ, ಸರ್ಕಾರದ ಕೆಲವು ಆದೇಶಗಳನ್ನೊಳಗೊಂಡ ಬೋರ್ಡ್​ ಹಾಕಲಾಗಿದೆ. 


ಬೆಳ್ಳಿ ತೆರೆಯ ಮೇಲೆ ಮ್ಯಾಜಿಕ್ ಮಾಡಲಿದೆ ಮೆಗಾಸ್ಟಾರ್- ಕಿಚ್ಚ ಜೋಡಿ


ಸುರೇಂದರ್ ರೆಡ್ಡಿ ನಿರ್ದೇಶಿಸುತ್ತಿರುವ 'ಸೈರಾ ನರಸಿಂಹರೆಡ್ಡಿ' ಚಿತ್ರದಲ್ಲಿ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟರಾದ ಜಗಪತಿ ಬಾಬು, ಸೇತುಪತಿ ಸೇರಿದಂತೆ ಸಾಕಷ್ಟು ಕಲಾವಿದರು ತಾರಾಗಣದಲ್ಲಿದ್ದಾರೆ.