'ವಿಕ್ರಾಂತ್‌ ರೋಣ'.. ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಮ್ಮೆ ಮಿಂಚಿನ ಸಂಚಲನ ಸೃಷ್ಟಿಸಲು ಸಜ್ಜಾಗುತ್ತಿರುವ ಸಿನಿಮಾ.ಜಗತ್ತಿನಾದ್ಯಂತ ಸದ್ಯ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ನಟ ಕಿಚ್ಚ ಸುದೀಪ್‌ ಅವರು 'ವಿಕ್ರಾಂತ್‌ ರೋಣ'ನ ವೇಷದಲ್ಲಿ ಸಂಚಲನ ಸೃಷ್ಟಿಸಲು ಬರ್ತಿದ್ದಾರೆ.ಮೇ 16ರ ಸಂಜೆ 5 ಗಂಟೆ 5 ಸಿಮಿಷಕ್ಕೆ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್‌ ಸಿಗಲಿದೆಯಂತೆ.


COMMERCIAL BREAK
SCROLL TO CONTINUE READING

ನಟ ಕಿಚ್ಚ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' ಜಗತ್ತಿನಾದ್ಯಂತ ಹೈಪ್‌ ಕ್ರಿಯೇಟ್‌ ಮಾಡಿದ್ದು, ಇದೀಗ ಕನ್ನಡ ಸಿನಿಮಾ ಹಾಲಿವುಡ್‌ ಅಂಗಳದಲ್ಲೂ ಸಂಚಲನ ಸೃಷ್ಟಿಸುತ್ತಿದೆ. ಈ ಹೊತ್ತಲ್ಲೇ ಸುದೀಪ್‌ ಸಿನಿಮಾ ಟೀಸರ್ ನೋಡಿ ಫ್ಯಾನ್ಸ್ ಫುಲ್‌ ಖುಷ್‌ ಆಗಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಬಾಲಿವುಡ್‌ ನಟರು ಕೂಡ 'ವಿಕ್ರಾಂತ್‌ ರೋಣ' ಟೀಸರ್‌ ನೋಡಿ ಫುಲ್‌ ಖುಷ್‌ ಆಗಿದ್ದಾರೆ. ಹೀಗೆ ಟೀಸರ್‌ ಬಳಿಕ ಟ್ರೈಲರ್‌ ರಿಲೀಸ್‌ ಆಗಬಹುದಾ ಅನ್ನೋ ಕುತೂಹಲ ಕಿಚ್ಚ ಸುದೀಪ್ ಅಭಿಮಾನಿಗಳನ್ನ ಕಾಡುತ್ತಿದೆ.


ಹೊಸ ಮನ್ವಂತರ
ಕನ್ನಡ ಸಿನಿಮಾ ರಂಗದಲ್ಲಿ 'ಕೊರೊನಾ' ಗ್ರಹಣ ತೊಲಗಿ, ಹೊಸ ಮನ್ವಂತರ ಆರಂಭವಾಗಿದೆ. ಹೀಗಾಗಿ ಬಹುನಿರೀಕ್ಷಿತ ಸಾಲು ಸಾಲು ಕನ್ನಡ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಜುಲೈ 28ಕ್ಕೆ 'ವಿಕ್ರಾಂತ್‌ ರೋಣ' ಜಗತ್ತಿನಾದ್ಯಂತ ಭಾರಿ ದೊಡ್ಡ ಮಟ್ಟದಲ್ಲಿ ರಿಲೀಸ್‌ ಆಗಲಿದ್ದು, ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಹೊಸ ಘೋಷಣೆಯೊಂದನ್ನ ಮಾಡಿರುವ ನಟ ಕಿಚ್ಚ ಸುದೀಪ್‌, ಅಭಿಮಾನಿಗಳ ಕಾತರವನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ.


ಒಟ್ಟಾರೆ ನಟ ಕಿಚ್ಚ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸೋದು ಗ್ಯಾರಂಟಿ. ಇದು ಬಾಲಿವುಡ್‌ ದೊರೆಗಳ ಎದೆಯಲ್ಲಿ ನಡುಕ ತರಿಸಿದ್ದು, ಸಾಲು ಸಾಲಾಗಿ ಸೌತ್‌ ಸಿನಿಮಾಗಳು ಹಿಟ್ ಆಗುತ್ತಿರುವುದು ಸಹಜವಾಗಿಯೇ ಬಾಲಿವುಡ್‌ ಸ್ಟಾರ್‌ಗಳ ನಿದ್ದೆ ಹಾರಿ ಹೋಗುವಂತೆ ಮಾಡಿದೆ. 'ವಿಕ್ರಾಂತ್‌ ರೋಣ' ಟೀಸರ್‌ ನೋಡಿದ್ದ ಫ್ಯಾನ್ಸ್‌ಗೆ ಯಾವ ಸರ್ಪ್ರೈಸ್‌ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.