ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅದ್ಧೂರಿತನ, ಶ್ರೀಮಂತಿಕೆ, ಹಾಗೂ ವೈಭವನ್ನು ತಂದುಕೊಟ್ಟವರರಲ್ಲಿ ನಮ್ಮ ಕ್ರೇಜಿಸ್ಟಾರ್ ಅವರದ್ದು ಅಗ್ರಪಾಲು, ಹೌದು, ಚಂದನವನದ ಬೆಳ್ಳಿತೆರೆಯನ್ನು ರಂಗುರಂಗಾಗಿಸುವ ಮೂಲಕ ಕನ್ನಡ ಸಿನಿಮಾಗಳಿಗೆ ಹೊಸ ಆಯಾಮವನ್ನು ನೀಡಿದ ಕೀರ್ತಿ ಕನ್ನಡದ ಶೋಮ್ಯಾನ್ ರವಿಚಂದ್ರನ್ ಅವರಿಗೆ ಸಲ್ಲುತ್ತದೆ.ಸಿನಿಮಾವನ್ನೇ ಉಸಿರಾಗಿ ಬದುಕುತ್ತಿರುವ ವ್ಯಕ್ತಿ ಕನ್ನಡದಲ್ಲಿ ಯಾರಾದರೂ ಇದ್ದರೆ ಅದು ನಮ್ಮೆಲ್ಲರ ನೆಚ್ಚಿನ ಕನಸುಗಾರ ಎಂದು ನಿಶ್ಚಿತವಾಗಿ ಹೇಳಬಹುದು.


COMMERCIAL BREAK
SCROLL TO CONTINUE READING

ಹೌದು, ಈಗ ರವಿ ಬೋಪಣ್ಣ ಚಿತ್ರದ ಬಿಡುಗಡೆಗೂ ಮುನ್ನ ಜೀ ಕನ್ನಡ ನ್ಯೂಸ್ ಗೆ ನೀಡಿದ Exclusive ಸಂದರ್ಶನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಚಿತ್ರಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.


ಇದೇ ವೇಳೆ ಸಾಮಾನ್ಯವಾಗಿ ಚಿತ್ರದ ಬಿಡುಗಡೆಗೂ ಮುನ್ನ ಅದಕ್ಕಾಗಿ ಭರ್ಜರಿ ಪ್ರೊಮೋಷನ್ ಮಾಡುವುದು ಈಗಿನ ಟ್ರೆಂಡ್ ಆಗಿದೆ.ಈ ವಿಚಾರವಾಗಿ ಕೇಳಿದಾಗ ಇದಕ್ಕೆ  ಭಿನ್ನವೆನ್ನುವಂತೆ ಉತ್ತರಿಸಿದ ರವಿಚಂದ್ರನ್ ಅವರು ಸಿನಿಮಾವನ್ನು ಮಾಡಿರೋದೇ ಅಭಿಮಾನಿಗಳಿಗಾಗಿ ಹಾಗಾಗಿ ಅವರಾಗಿಯೇ ಬಂದು ಸಿನಿಮಾವನ್ನು ನೋಡಿ ಮೆಚ್ಚಿಕೊಂಡರೆ ಅದೇ ನಂಗೆ ಖುಷಿ ಎಂದು ಹೇಳುತ್ತಾರೆ.ಆ ಮೂಲಕ ಅಭಿಮಾನಿಗಳೇ ಸಿನಿಮಾಗೆ ಶ್ರೀರಕ್ಷೆಯಾಗಬೇಕು ಎಂದು ಹೇಳುತ್ತಾರೆ.


ಇದನ್ನೂ ಓದಿ: Jaggesh On Ravichandran: ಕಷ್ಟದ ಕಾಲದಲ್ಲಿ ನೆರಳಾಗಿ ನಿಂತವರು ಕ್ರೇಜಿ ಸ್ಟಾರ್: ಜಗ್ಗೇಶ್


ಕಿಚ್ಚ ಸುದೀಪ್ 'ವಿಕ್ರಾಂತ್‌ ರೋಣ' ₹200 ಕೋಟಿ ಕ್ಲಬ್‌ ಸೇರೋದು ಪಕ್ಕಾ..?


ಊಟಕ್ಕಾಗಿ ಅಭಿಮಾನಿಗಳ ಬಳಿ ಹೋದ್ರೆ ನಂಗೆ ಖಂಡಿತ ಅನ್ನ ಕೊಡುತ್ತಾರೆ.ಜನ ಪ್ರೀತಿ ಕೊಡುತ್ತಾರೆ ಅಷ್ಟೇ ಸಾಕು ನನಗೆ. ನಾನು ನಿದ್ದೆ ಮಾಡಲ್ಲ ಯಾಕಂದ್ರೆ ನನಗೆ ದಣಿವು ಅನ್ನೋದು ಇಲ್ಲವೇ ಇಲ್ಲ. ದಣಿವು ಆದ್ರೆ ಅಲ್ವೇ ರೆಸ್ಟ್ ಬೇಕು ಅನಿಸೋದು ಎಂದು ಅವರು ತಮ್ಮ ಸುದೀರ್ಘ ಜೀವನದ ಅನುಭವ, ಕಷ್ಟ ಸುಖಗಳನ್ನು ಜೀ ಕನ್ನಡ ನ್ಯೂಸ್ ನ ಸಂದರ್ಶನದಲ್ಲಿ ಹಂಚಿಕೊಂಡರು.


ಇದೆ ವೇಳೆ ಮುಂದುವರೆದು ಮಾತನಾಡಿದ ಅವರು 'ದರ್ಶನ್ ಒಂದು ಕರೆ ಮಾಡಿ ಹೇಗಿದ್ದೀರಿ ಅಂತ ಕೇಳಿದ್ರೆ ಸಾಕು ಎಲ್ಲಾ ಸಿಕ್ಕಂತೆ ಆಗುತ್ತೆ.ಸುದೀಪ್ ನನ್ನ ಸಿನಿಮಾದ 4 ಶೋ ಗಳನ್ನ ನನ್ನ ಅಭಿಮಾನಿಗಳಿಗೆ ತೋರಿಸುತ್ತೀನಿ ಅಂತಾರೆ.ಗೆಳೆಯ ಸಜ್ಜನ್ ಒಂದು ಶೋ ಕಂಪ್ಲೀಟ್ ನಂಗೆ ಬೇಕು ಅಂತಾರೆ ಈ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೀನಿ' ಎಂದು ಹೇಳಿದರು.


ಇನ್ನು ರವಿ ಬೋಪಣ್ಣ ಚಿತ್ರದ ವಿಷಯಕ್ಕೆ ಬರುವುದಾದರೆ ನಮ್ಮೊಳಗಿರೋ ಮತ್ತೊಂದು ವ್ಯಕ್ತಿಯ ಬಗ್ಗೆ ಸೃಷ್ಟಿಯಾದ ಅದ್ಬುತ ಕಥೆಯೇ "ರವಿ ಬೋಪಣ್ಣ"ಈ ಸಿನಿಮಾದಲ್ಲಿ ಸಾಕಷ್ಟು ತಿರುವುಗಳು, ಭಾವನೆಗಳು, ಪ್ರಣಯ,ಪ್ರೀತಿ, ಗ್ಲಾಮರ್ ಹಾಗೂ ಅದ್ಬುತವಾದ 8 ಹಾಡುಗಳು ಇವೆ.ಆ ಮೂಲಕ ಬಹಳ ದಿನಗಳ ನಂತರ ನಮ್ಮ ಪ್ರೀತಿಯ ಕನಸುಗಾರ ಈಗ ರವಿ ಬೋಪಣ್ಣನ ಪಾತ್ರದ ಮೂಲಕ ಅಭಿಮಾನಿಗಳಿಗೆ ಚಿತ್ರದ ರಸದೌತಣವನ್ನು ಬಡಿಸಲಿದ್ದಾರೆ. ಹಾಗಿದ್ದಲ್ಲಿ ಮತ್ಯಾಕೆ ತಡ ಬೆಳ್ಳಿಪರದೆ ಮೇಲೆ ರವಿ ಬೋಪಣ್ಣನ ಅವತಾರವನ್ನು ನೋಡಲು ನೀವೆಲ್ಲರೂ ಸಿದ್ದರಾಗಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.