DBoss : ರಾಜ್ಯದಲ್ಲಿ ನಟ ದರ್ಶನ ನಟನೆಯ ಕ್ರಾಂತಿ ಅಬ್ಬರ ಜೋರಾಗಿದೆ.  ಹುಬ್ಬಳ್ಳಿಯಲ್ಲಿ ನಿನ್ನೆ ಅದ್ದೂರಿಯಾಗಿ ಪುಪ್ಪಾವತಿ ಸಾಂಗ್ ರಿಲೀಸ್ ಮಾಡಲಾಗಿದೆ. ಅಲ್ಲದೆ ಗಜ ತನ್ನ ಅಭಿಯಾನಿಗಳಿಗೆ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಹಾಳ್ ಮಾಡೋಕೆ ಒಬ್ಬ ಇದ್ರೆ ಕಾಯೋಕಂತ ನಿಮ್ಮಂತ ನೂರು ಜನ ಇರ್ತಾರೆ.. ಅಷ್ಟು ಸಾಕ್ ನನಗೆ ಅಂತ ಪ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿದ್ರು.


COMMERCIAL BREAK
SCROLL TO CONTINUE READING

ಹೌದು.. ಮೊನ್ನೆ ಹೊಸಪೇಟೆಯಲ್ಲಿ ನಡೆದ ನಡೆದ ಘಟನೆ ಕುರಿತು ತಲೆಕೆಡಿಸಿಕೊಳ್ಳದ ದಾಸ ಕ್ರಾಂತಿ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಿನ್ನೆ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಕ್ರಾಂತಿ ಸಿನಿಮಾದ ಮೂರನೇ ಸಾಂಗ್ ಪುಷ್ಪಾವತಿ ಹಾಡನ್ನು ಬಿಡುಗಡೆ ಮಾಡಿದ್ರು. ದಚ್ಚುಗೆ ಹುಬ್ಬಳ್ಳಿ ಪ್ಯಾನ್ಸ್ ಹೂವಿನ ಮಳೆ ಸುರಿಯುವ ಮೂಲಕ ಗ್ರ್ಯಾಂಡ್ ವೆಲ್ ಕಮ್ ನೀಡಿದರು.


ಇದನ್ನೂ ಓದಿ : ಪ್ರಭುದೇವ ಅಭಿನಯದ "wolf" ಚಿತ್ರದ ಚಿತ್ರೀಕರಣ ಮುಕ್ತಾಯ


ಈ ವೇಳೆ ದರ್ಶನ ಮಾತನಾಡಿ, ಮೊನ್ನೆ ಒಂದು ಏಟು ಬಿತ್ತು.. ಇಂದು  ಹೂವಿನ ಮಳೆ ಸುರಿಸಿದ್ರಿ ಇಷ್ಟು ಸಾಕು ಅಲ್ವಾ.. ಉರ್ಸೊಣ  ಒಂದು ಹೆಜ್ಜೆ ಮುಂದೆ ಹೋಗಿ ಜಾಸ್ತಿ ಉರ್ಸೊಣ.. ಮೊನ್ನೆ ಆ ರೀತಿ ಮಾಡಿದವರಿಗೆ ಒಂದು ಮಾತು.. ನೀವು ಏನೇ ಮಾಡಿ ನಾವು ತೆಲೆಗೆ ಹಾಕ್ಕೂಳಲ್ಲ, ನೋವು ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ ಅಂತ ಅಂದ್ರು. ಅಲ್ಲದೆ, ನಾವ್ ಯಾವಾಗ್ಲೂ ಕಾಲರ್ ಎತ್ಕೊಂಡು ಓಡಾಡುವ. ನಾವು ಮಾಡುವ ಕೆಲಸವೇ ಅವರಿಗೆ ಉರ್ಸ್ಬೇಕು ಅಂತ ಅಭಿಮಾನಿಗಳಿಗೆ ಹೇಳಿದ್ರು.


ಈಗಾಗಲೇ ವಿ ಹರಿಕೃಷ್ಣ ನಿರ್ದೇಶನದ ಕ್ರಾಂತಿ ಸಿನಿಮಾದ 'ಧರಣಿ ಮಂಡಲ' ಹಾಡು ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿದೆ. ಈ ಹಾಡನ್ನು ಪಂಚಮ್ ಜೀವ, ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಮದ್ವೇಶ ಭಾರದ್ವಾಜ್, ವಿಹಾನ್‌, ಖುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಮತ್ತು ಪ್ರಾರ್ಥನ ಅವರು ಹಾಡಿದ್ದಾರೆ. ಎರಡನೇ ಹಾಡು 'ಬೊಂಬೆ ಬೊಂಬೆ'ಯನ್ನು ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು ಹಾಡಿದ್ದಾರೆ. ಇದೀಗ  ಕ್ರಾಂತಿ ಸಿನಿಮಾದ ಬಹುನೀರಿಕ್ಷಿತ ಸಾಂಗ್  ಪುಷ್ಪಾವತಿ  ಬಿಡುಗಡೆಯಾಗಿದೆ.


ಇದನ್ನೂ ಓದಿ : ಸಾಕ್ಷಿ ಇದ್ರೆ ಕೋಡಿ..! ಕರ್ನಾಟಕ ಬಿಟ್ಟು ಹೋಗ್ತೇನೆ.. ವಿರೋಧಿಗಳಿಗೆ ಕೆರೆಹಳ್ಳಿ ಸವಾಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.