Lidkar Bag in Karnataka Budget 2024: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಜೆಟ್  ಮಂಡಣೆ ಆರಂಭಿಸುವ ಮೊದಲು  ಕನ್ನಡ ಸಿನಿಮಾದ ಹಾಡಿನ ಸಾಲುಗಳನ್ನು ಹಾಗೂ ಸಂಭಾಷನೆಯನ್ನು ಬಳಸಿಕೊಂಡಿದ್ದಾರೆ. ಈ ಬಾರಿಯ ಬಜೆಟ್‌ ಭಾಷಣದಲ್ಲಿ ಮತ್ತೊಂದು ವಿಶೇಷವೇನೆಂದರೆ, ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಣೆಗಾಗಿ ಹಿಡಿದು ತಂದಿದ್ದ ಬ್ಯಾಗ್‌ ಯಾವುದೆಂದರೇ ಅದು ಡಾಲಿ ಧನಂಜಯ್‌ ಅಂಬಾಸಿಡರ್‌ ಆಗಿರುವ ಲಿಡ್ಕರ್ ಬ್ರಾಂಡ್‌.


COMMERCIAL BREAK
SCROLL TO CONTINUE READING

ಚಂದನವನದ ನಟರಾಕ್ಷಸ ಡಾಲಿ ಧನಂಜಯ್‌ ಲಿಡ್ಕರ್ ಸಂಸ್ಥೆಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದರು. ಸಿಎಂ ಸಿದ್ದರಾಮಯ್ಯ ಈ ಬಾರಿ ಲಿಡ್ಕರ್‌ ಲೆದರ್‌ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ತೆಗೆದುಕೊಂಡು ವಿಧಾನಸೌಧಗೆ ಬಂದಿದ್ದನ್ನು ಕಂಡು ನಟ ಡಾಲಿ ಧನಂಜಯ್‌ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೇ ಪರೋಕ್ಷವಾಗಿ ನಟ ಧನಂಜಯ್ ಹಾಗೂ ತಂಡ ಭಾಗಿಯಾದರು. ಕಾಂಗೆಸ್‌ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಲೀಡ್ಕರ್‌ ಸಂಸ್ಥೆಗೆ ಹೆಚ್ಚನ ಆಧ್ಯತೆ ನೀಡಲಾಗಿತ್ತು. 


ಇದನ್ನೂ ಓದಿ: Karnataka Budget 2024: ಬಜೆಟ್‌ ಮಂಡಣೆಯಲ್ಲಿ ಕನ್ನಡ ಸಿನಿಮಾಗಳನ್ನು ಉಲ್ಲೇಖಿಸಿದ ಸಿಎಂ!


ಇಷ್ಟೇ ಅಲ್ಲದೇ ಕಳೆದ ವರ್ಷ ಡಾಲಿ ಧನಂಜಯ್‌ ನಿರ್ಮಾಣ ಸಂಸ್ಥೆಯಿಂದ ಕಳೆದ ವರ್ಷ ತೆರೆಕಂಡ ಡೇರ್ ಡೆವಿಲ್ ಮುಸ್ತಫಾ ಸಿನಿಮಾ ‘ಒಂದು ತೋಟದಲ್ಲಿ ನೂರು ಹೂವು ಅರಳಲಿ ಎಲ್ಲಾ ಕೂಡಿ ಆಡುವಂತ ಗಾಳಿ ಬೀಸಲಿ’ ಸಂಭಾಷಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ಅನುದಾನ ನೀಡುವುದರ ಬಗ್ಗೆ ಮಂಡಿಸುವಾಗ ಹೇಳಿದ್ದರು. ಇದರ ಮತ್ತೊಂದು ವಿಶೇಷವೇನೆಂದರೆ ಈ ಸಾಲುಗಳನ್ನು ಕೂಡ ಖುದ್ದು ನಟ ಧನಂಜಯ ಬರೆದಿದ್ದಾರೆ.


ಈ ಬಾರಿಯ ಬಜೆಟ್‌ ಮಂಡಣೆ ಮಾಡುವ ಆರಂಭದಲ್ಲಿಯೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ. ರಾಜ್‌ಕುಮಾರ್‌ ಅಭಿನಯದ ಸೂಪರ್‌ ಹಿಟ್‌ ಸಿನಿಮಾ ಬಂಗಾರದ ಮನುಷ್ಯ ಚಿತ್ರದ ʻಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..ʼ ಹಾಡಿನ ಸಾಲನ್ನು ಹೇಳುವುದರ ಮೂಲಕ ಶುರುಮಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.