ಕಳೆದ ವರ್ಷ ಈ ಹೊತ್ತಿಗೆ ಸ್ಯಾಂಡಲ್ ವುಡ್ ನಲ್ಲಿ ಮೋಡಕವಿದ ವಾತಾವರಣ ಸೃಷ್ಟಿಯಾಗಿತ್ತು. ಖ್ಯಾತ ಖಳನಟರಾಗಿ ರೂಪುಗೊಂಡಿದ್ದ ಎರಡು ಅದ್ಭುತ ನಟರನ್ನು ಕನ್ನಡ ಚಿತ್ರರಂಗ ಕಳೆದುಕೊಂಡ ದುರಂತ ದಿನ ಅಂದು. ಆ ದುರಂತ ನಡೆದು ಇಂದಿಗೆ ಒಂದು ವರ್ಷಗಳು ಕಳೆದಿವೆ.


COMMERCIAL BREAK
SCROLL TO CONTINUE READING

ನವೆಂಬರ್ 7, 2016ರಂದು ಬಹು ನಿರೀಕ್ಷಿತ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಯಾರೂ ಊಹಿಸದಂತಹ ದುರಂತವೊಂದು ಸಂಭವಿಸಿತ್ತು. ಖ್ಯಾತ ನಟರಾದ ಉದಯ್ ಮತ್ತು ಅನಿಲ್ ಇಬ್ಬರು ದುರಂತ ಸಾವಿಗೀಡಾದರು. ಈ ಘಟನೆಯ ನಂತರ ಸ್ಯಾಂಡಲ್ ವುಡ್ ನಲ್ಲಿ ಬಹಳ ದಿನಗಳ ಕಾಲ ಈ ದುರಂತ ಬಹಳ ತಳಮಳವನ್ನು ಸೃಷ್ಟಿಸಿತ್ತು.


ಇಂದಿಗೆ ಅವರಿಬ್ಬರು ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದಿದೆ. ಇವರಿಬ್ಬರ ಅಭಿಮಾನಿಗಳು ಹಾಗೂ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ನೇತೃತ್ವದಲ್ಲಿ ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಬೆಂಗಳೂರಿನ ಕದಿರೇನಹಳ್ಳಿ ಬಳಿ ಹಮ್ಮಿಕೊಂಡಿದ್ದಾರೆ.


ಈ ಕಾರ್ಯಕ್ರಮದಲ್ಲಿ ಅನಿಲ್ ಹಾಗೂ ಉದಯ್ ಕುಟುಂಬದವರೂ ಸಹ ಭಾಗಿಯಾಗಲಿದ್ದಾರೆ.