ಬೆಂಗಳೂರು: ನಮ್ಮ ಮಂಡ್ಯದ ಹುಡುಗ ನೀನಾಸಂ ಸತೀಶ್ ಈಗಾಗಲೇ ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಸಾಕಷ್ಟು ಹೆಸರು ಮಾಡಿದವರು. ಈಗಾಗಲೇ ಅವರ ಅಭಿನಯದ 'ಅಯೋಗ್ಯ' ಸಿನಿಮಾ ಶತದಿನ ಪೂರೈಸಿದ ಬೆನ್ನಲ್ಲೇ ಹೊಸ ಚಿತ್ರವನ್ನು ನಿರ್ದೇಶಿಸಲು ಸತೀಶ್ ಮುಂದಾಗಿದ್ದಾರೆ. 


COMMERCIAL BREAK
SCROLL TO CONTINUE READING

ಲುಸಿಯಾ ಚಿತ್ರದ ಮೂಲಕ ನಾಯಕ ನಟನಾಗಿ ಅಭಿನಯಿಸಿದ ನೀನಾಸಂ ಸತೀಶ ಅವರು, 'ರಾಕೆಟ್' ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಪಕರೂ ಆಗಿದ್ದರು. ಇದೀಗ ನಿರ್ದೇಶನ ಕ್ಷೇತ್ರಕ್ಕೂ ಮುಂದಡಿಯಿಡಲು ಸತೀಶ್ ಸಜ್ಜಾಗಿದ್ದು, ಈ ಚಿತ್ರದ ಕಥೆಯನ್ನೂ ತಾವೇ ಬರೆದಿದ್ದಾರೆ ಎನ್ನಲಾಗಿದೆ. 


ಹೊಸವರ್ಷಕ್ಕೆ ತಮ್ಮ ನಿರ್ದೇಶನದ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಬೇಕು ಎಂದುಕೊಂಡಿರುವ ಸತೀಶ್, ಬಹಳ ದಿನಗಳಿಂದ ತಮ್ಮನ್ನು ಕಾಡುತ್ತಿದ್ದ ಕಥೆಯನ್ನು ಸಿನಿಮಾ ಮಾಡಬೇಕು ಅಂದುಕೊಂಡಿದ್ದಾರೆ. ಅಲ್ಲದೆ, ಆ ಚಿತ್ರವನ್ನು ತಾವೇ ನಿರ್ದೇಶಿಸಲು ಮುಂದಾಗಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು ಮಲಯಾಳಂ ಭಾಷೆಗಳಲ್ಲೂ ಚಿತ್ರ ತಯಾರಿಸಲು ಆಲೋಚಿಸಿದ್ದಾರೆ. 


ಮಾರ್ಚ್ ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಕಥೆ, ಚಿತ್ರಕಥೆ, ನಿರ್ಮಾಣದೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ನೀನಾಸಂ ಸತೀಶ್ ಅವರೇ ಹೊರಲಿದ್ದಾರೆ. ಏನೇ ಆಗಲಿ, ಸತೀಶ್ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ನಾವೆಲ್ಲಾ ಆಲ್ ದ ಬೆಸ್ಟ್ ಹೇಳೋಣ...