ನವದೆಹಲಿ: ಸದಾ ತಮ್ಮ ನೇರ ನುಡಿಗಳಿಗೆ ಹೆಸರಾಗಿರುವ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ದಕ್ಷಿಣ ಭಾರತದ ತಾರೆಯರಾದ ಸಮಂತಾ ಅಕ್ಕಿನೇನಿ ಹಾಗೂ ನಾಗಚೈತನ್ಯ ಡೈವೋರ್ಸ್ ನೀಡಿರುವ ಬೆನ್ನಲ್ಲೇ ತಮ್ಮದೇ ಸ್ಟೈಲ್ ನಲ್ಲಿ ಟ್ವೀಟ್ ಮಾಡಿರುವ ಅವರು ಸಂಭ್ರಮಿಸಬೇಕಾಗಿರುವುದು ಮದುವೆಗಳನ್ನಲ್ಲ, ವಿಚ್ಚೇದನಗಳನ್ನು ಎಂದು ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅವರು ಇನ್ನೂ ಮುಂದುವರೆದು ಮದುವೆಗಳು ಸಾವಿದ್ದಂತೆ ಆದರೆ ವಿಚ್ಚೇದನ ಒಂದು ರೀತಿ ಪುನರ್ಜನ್ಮ ಇದ್ದಂತೆ ಎಂದು ಅವರು ಹೇಳಿದ್ದಾರೆ. ಸಮಂತಾ ಅಕ್ಕಿನೇನಿ (Samantha Akkineni) ಮತ್ತು ನಾಗ ಚೈತನ್ಯ ಪರಸ್ಪರ ಒಪ್ಪಿಗೆ ಮೇರೆಗೆ ತಮ್ಮ ವಿಚ್ಚೇದನವನ್ನು ಅಧಿಕೃತವಾಗಿ ಧೃಡಪಡಿಸಿಕೊಂಡ ಬೆನ್ನಲ್ಲೇ ಈಗ ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಬಂದಿದೆ.


ನಾಲ್ಕು ವರ್ಷಗಳ ದಾಂಪತ್ಯದ ನಂತರ ಬೇರೆಯಾದ ನಾಗಚೈತನ್ಯ-ಸಮಂತಾ ಜೋಡಿ

ಈ ಉಭಯ ಜೋಡಿ ವಿಚ್ಚೇದನದ ವದಂತಿಯು ಪ್ರಮುಖವಾಗಿ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಕಿನೇನಿ ಉಪನಾಮವನ್ನು ಕೈಬಿಟ್ಟ ನಂತರ ವ್ಯಾಪಕವಾಗಿ ಹರಡಿತ್ತು.ಸಮಂತಾ ಮತ್ತು ಚೈತನ್ಯ 2010 ರಲ್ಲಿ ಗೌತಮ್ ಮೆನನ್ ಅವರ ಯೆ ಮಾಯಾ ಚೆಸೇವೆಯ ಸೆಟ್ನಲ್ಲಿ ಭೇಟಿಯಾದರು ಮತ್ತು ಸ್ವಲ್ಪ ಕಾಲ ಅವರು ಡೇಟಿಂಗ್ ಮಾಡಿದರು. ದಂಪತಿಗಳು ಅಕ್ಟೋಬರ್ 6, 2017 ರಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮತ್ತು ನಂತರ ಕ್ರಿಶ್ಚಿಯನ್ ವಿವಾಹ ಕ್ರಮವಾಗಿ ಅಕ್ಟೋಬರ್ 7, 2017 ರಂದು ನಡೆಯಿತು.


ಸಮಂತಾ ಮನೋಜ್ ಬಾಜಪೇಯಿ ಅಭಿನಯದ 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2' ಚಿತ್ರದ ಮೂಲಕ ಈಗ ಬಾಲಿವುಡ್ ನಲ್ಲಿಯೂ ಸದ್ದು ಮಾಡುತ್ತಿದ್ದಾರೆ.ಇನ್ನೊಂದೆಡೆಗೆ ನಾಗ ಚೈತ್ಯನ್ಯ ಇತ್ತೀಚಿಗೆ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸಿದ್ದರು.


ಇದನ್ನೂ ಓದಿ : Amazon ನಲ್ಲಿ ಆಫರ್ ಗಳ ಸುರಿಮಳೆ, ಸ್ಯಾಮ್ ಸಂಗ್ ನ ಈ ಫೋನ್ ಮೇಲೆ ಸಿಗಲಿದೆ 30 ಸಾವಿರಕ್ಕಿಂತ ಅಧಿಕ ರಿಯಾಯಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.