Pavithra Gowda : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟಿ ಪವಿತ್ರಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರನ್ನು ಬಿಟ್ಟರೇ ಅವರಿಗೆ ಇದೀಗ ಯಾರೂ ಬೆಂಬಲ ನೀಡುತ್ತಿಲ್ಲ ಎಂಬ ಮಾತು ಹೇಳಿ ಬರುತ್ತಿದೆ.. ಈ ಸಂಶಯ ಹುಟ್ಟಿಕೊಳ್ಳಲು ಕಾರಣವಾಗಿದ್ದು ಪವಿತ್ರ ಸ್ನೇಹಿತೆ ಸಮತಾ ಪೋಸ್ಟ್‌...


COMMERCIAL BREAK
SCROLL TO CONTINUE READING

ಹೌದು... ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುವರ ಹತ್ಯೆ ನಡೆದಿದೆ.. ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌ ಮತ್ತು ಪವಿತ್ರಗೌಡ ಸೇರಿದಂತೆ ಒಟ್ಟು 17 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.


ಇದನ್ನೂ ಓದಿ:ʼಎಸಿಪಿ ಚಂದನ್‌ʼ ಹುಲಿ ಅಲ್ಲ ʼಸೆಕ್ಯೂರಿಟಿʼ..! ಅಧಿಕಾರಿಯನ್ನೇ ಟ್ರೋಲ್‌ ಮಾಡಿದ ದರ್ಶನ್‌ ಫ್ಯಾನ್ಸ್‌


ವಿಜಯಲಕ್ಷ್ಮಿ ದರ್ಶನ್‌ ಹೇಗಾದರೂ ಮಾಡಿ ತಮ್ಮ ಪತಿಯನ್ನು ಜೈಲಿನಿಂದ ಹೊರತರಲು ಶತಪ್ರಯತ್ನ ನಡೆಸುತ್ತಿದ್ದಾರೆ.. ಅಲ್ಲದೆ, ಇತ್ತೀಚಿಗೆ ಗಂಡನ ಒಳಿತಿಗಾಗಿ ದೇವರ ಮೊರೆ ಕೂಡ ಹೋಗಿದ್ದರು.. ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.


ಆದರೆ ಪವಿತ್ರಗೌಡ ಅವರನ್ನು ಕುಟುಂಬಸ್ಥರ ಮತ್ತು ಸ್ನೇಹಿತರನ್ನು ಬಿಟ್ಟರೆ ನೋಡಲು ಯಾರೂ ಬರುತ್ತಿಲ್ಲ.. ಸಿನಿರಂಗದ ಸಹೋದ್ಯೋಗಿಗಳಂತೂ ಪತ್ತೆ ಇಲ್ಲ. ಇದೀಗ ಪವಿತ್ರ ಸ್ನೇಹಿತೆ ಸಮತಾ ಪೋಸ್ಟ್‌ ಒಂದು ಸಖತ್‌ ವೈರಲ್‌ ಆಗುತ್ತಿದ್ದರು.. ನಟಿ ಒಂಟಿಯಾದ್ರಾ ಎನ್ನುವ ಸಂದೇಹ ಮೂಡಿಸುತ್ತಿದೆ..


ಇದನ್ನೂ ಓದಿ:ಪುಷ್ಪ 2 ರಿಲೀಸ್ ತಡವಾಗಲು ಇದೇ ಅಸಲಿ ಕಾರಣ.. ರಹಸ್ಯ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ!


ʼನಗುವಾಗ ಜೊತೆಗಿದ್ದು ನೊಂದಾಗ ಕಾಣೆಯಾಗುವುದಲ್ಲ ಬಿದ್ದಾಗ ಹಿಡಿದೆತ್ತಿ ತಪ್ಪುಗಳ ತಿದ್ದುವ ನಿಸ್ವಾರ್ಥ ಭಾವವೇ ಸ್ನೇಹʼ ಅಂತ ಸಮತಾ ಪೋಸ್ಟ್ ಹಾಕಿದ್ದಾರೆ.. ಇದನ್ನ ನೋಡಿದ್ರೆ ದರ್ಶನ್‌ ಆಪ್ತರು ಪವಿತ್ರಗೌಡ ಕೈ ಬಿಟ್ರಾ ಎನ್ನುವ ಅನುಮಾನ ಮೂಡುತ್ತಿದೆ.. ಎನೇ ಬರಲಿ ಎನೇ ಆಗಲಿ ಸ್ನೇಹಿತೆಯ ಪರ ನಿಲ್ತಿನಿ ಅಂತ ಸಮತಾ ಹೇಳಿದ್ರಾ ಎನ್ನುವ ಹಲವಾರು ಅಂಶಗಳನ್ನು ಹುಟ್ಟುಹಾಕುತ್ತಿದೆ ಈ ಪೋಸ್ಟ್‌.. ಕಳೆದ ಕೆಲವು ದಿನಗಳ ಹಿಂದೆ ಪವಿತ್ರಾ ತಂಗಿ ಅಂತ ಹೇಳಿಕೊಂಡು ಸಮತಾ ಜೈಲಿನಲ್ಲಿರುವ ದರ್ಶನ್ ಭೇಟಿ ಮಾಡಿದ್ದರು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.