Prakash raj on PM Modi : ಕಳೆದ 10 ವರ್ಷಗಳಿಂದ ನಾನು ಪ್ರಧಾನಿ ಮೋದಿಯನ್ನು ವಿರೋಧಿಸುತ್ತಿದ್ದೇನೆ. ಅವರನ್ನು ರಾಜ ಎಂದು ಕರೆಯಲಾಗುವುದಿಲ್ಲ, ಈಗ ಅವರು ದೇವಮಾನವರಾಗಿದ್ದಾರೆ. ಇವರಿಂದ ದೇಶಕ್ಕೆ ಏನಾದರೂ ತೊಂದರೆಯಾದರೆ ನೀವು ಮನುಷ್ಯರೇ..? ಎಂದು ಪ್ರಶ್ನಿಸುವಂತಿಲ್ಲ.. ದೇವರು ಪರೀಕ್ಷೆ ಮಾಡುತ್ತಿದ್ದಾನೆ ಅಂತ ಅಂದುಕೊಳ್ಳಬೇಕು ಎಂದು ನಟ, ರಾಜಕಾರಣಿ ಪ್ರಕಾಶ್‌ ರಾಜ್‌ ವ್ಯಂಗ್ಯವಾಡಿದರು.


COMMERCIAL BREAK
SCROLL TO CONTINUE READING

ಲಿಬರೇಶನ್ ಟೈಗರ್ಸ್ ಪಾರ್ಟಿ ವತಿಯಿಂದ ಪ್ರತಿ ವರ್ಷ ವಿಶಿಕಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ನಡೆಯಿತು. ಪ್ರಕಾಶ್ ರಾಜ್‌ ಅವರಿಗೆ ಸಂಸದ ತೊಳ್ ತಿರುಮಾವಳವನ್ ಅಂಬೇಡ್ಕರ್ ಸುದರ್ ಪ್ರಶಸ್ತಿ ಪ್ರದಾನ ಮಾಡಿದರು. ವಿಶಿಕಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಲಿಬರೇಶನ್ ಟೈಗರ್ಸ್ ಪಾರ್ಟಿಯಿಂದ ಪ್ರತಿ ವರ್ಷ ನಡೆಸಲಾಗುತ್ತಿದೆ. ಸಮಾಜ, ರಾಜಕೀಯ, ಸಂಸ್ಕೃತಿ, ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.


ಇದನ್ನೂ ಓದಿ: ಡ್ರೈವರ್ ಮಾತು ಕೇಳಿ 100 ಕೋಟಿ ರೂ. ಬೆಲೆ ಬಾಳುವ ಆಸ್ತಿ ಕಳೆದುಕೊಂಡ ಸ್ಟಾರ್‌ ನಟ..! 


ಇನ್ನು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜ್‌, ರಾಜಕೀಯ ಕುರಿತು ಏಕೆ ಮಾತನಾಡುತ್ತಾರೆ ಎಂಬುವುದಾಗಿ ವಿವರಿಸಿದರು. 'ದೇಹಕ್ಕೆ ಗಾಯವಾದರೆ ನಾವು ಸುಮ್ಮನಿದ್ದರೂ ನೋವು ಮಾಯವಾಗುತ್ತದೆ. ಆದರೆ ಸಮಾಜ ಅಥವಾ ದೇಶಕ್ಕೆ ನೋವಾದರೆ, ಅದರ ಬಗ್ಗೆ ನಾವು ಮಾತನಾಡದಿದ್ದರೆ ಗಾಯ ಹೆಚ್ಚಾಗುತ್ತದೆ. ನಾನೊಬ್ಬ ಕಲಾವಿದ ಇಂದು ನಾನು ಈ ವೇದಿಕೆಯಲ್ಲಿ ನಿಲ್ಲಲು ಜನರ ಪ್ರೀತಿ ಮತ್ತು ವಿಶ್ವಾಸವೇ ಕಾರಣ ಎಂದರು. 


ಅಲ್ಲದೆ, ಕಲಾವಿದ ಹೇಡಿಯಾದರೆ ಸಮಾಜ ಹೇಡಿಯಾಗುತ್ತದೆ. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಈ ತಿಳುವಳಿಕೆ ನನ್ನ ಪ್ರತಿಭೆಯಿಂದ ಬಂದದ್ದಲ್ಲ. ಅದು ಅಂಬೇಡ್ಕರ್, ಗಾಂಧಿ, ಕಾರ್ಲ್ ಮಾರ್ಕ್ಸ್ ಮುಂತಾದವರನ್ನು ಹಿಂಬಾಲಿಸಿದ್ದಕ್ಕೆ ಬಂದದ್ದು. ನಾನು ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿಯನ್ನು ವಿರೋಧಿಸುತ್ತಿದ್ದೇನೆ. ಅವರನ್ನು ರಾಜ ಎಂದು ಕರೆಯಲಾಗುವುದಿಲ್ಲ, ಏಕೆಂದರೆ ಈಗ ಅವರು ದೇವಮಾನವರಾಗಿದ್ದಾರೆ. ಇವರಿಂದ ದೇಶಕ್ಕೆ ಏನಾದರೂ ತೊಂದರೆಯಾದರೆ ನೀವು ಮನುಷ್ಯರೇ..! ಅಂತ ಅವರನ್ನು ಕೇಳುವಂತಿಲ್ಲ.. ಬದಲಾಗಿ ದೇವರು ನಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ ಅಂತ ಹೇಳಬೇಕು ಎಂದು ರಾಜ್‌ ಪಿಎಂ ಮೋದಿ ವಿರುದ್ಧ ಗುಡುಗಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.