ಬೆಂಗಳೂರು: ಕಿಚ್ಚ ಸುದೀಪ್‌ ವಿರುದ್ಧ ಅಡ್ವಾನ್ಸ್‌ ಪಡೆದು ಕೈ ಗೆ ಸಿಕ್ತಿಲ್ಲ ಎಂದು ಆರೋಪಿಸಿದ್ದ ನಿರ್ಮಾಪಕ ಕುಮಾರ್‌ ಈಗ ಧರಣಿ ನಡೆಸಿದ್ದಾರೆ. ತಮಗಾದ ಅನ್ಯಾಯಕ್ಕೆ ನ್ಯಾಯ ಬೇಕು ಎಂದು ಫಿಲ್ಮ್‌ ಚೇಂಬರ್‌ ಎದುರು ಕುಮಾರ್‌ ಧರಣಿ ಕುಳಿತಿದ್ದಾರೆ. ಸುದೀಪ್‌ ತಮ್ಮ ಮೇಲೆ ಮಾಡಿದ ಆರೋಪಗಳ ವಿರುದ್ಧ ಕೋರ್ಟ್‌ ಮೆಟ್ಟಿಲು ಹತ್ತಿದ ಬೆನ್ನಲ್ಲೇ ಕುಮಾರ್‌ ಪ್ರೊಟೆಸ್ಟ್‌ ಆರಂಭಿಸಿದ್ದಾರೆ. 


COMMERCIAL BREAK
SCROLL TO CONTINUE READING

"ನನಗೆ ಆಗಿರುವ ಸಮಸ್ಯೆ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತು. ಆ ಸಮಸ್ಯೆಯನ್ನ ವಾಣಿಜ್ಯ ಮಂಡಳಿ ಮುಖಾಂತರವೇ ಬಗೆ ಹರಿಸಿಕೊಳ್ಳಬೇಕು, ಇದು ಚಿತ್ರರಂಗದ ಮನೆ ಇದ್ದ ಹಾಗೆ ಅಂತ ನಾವು ಮನವಿ ಕೊಟ್ಟಿದ್ದೀವಿ. ಅದಕ್ಕೆ ಸರಿಯಾದ ರೀತಿಯ ಸಹಾಯ ಆಗ್ತಿಲ್ಲ. ಅದಕ್ಕೆ ಇವತ್ತಿನಿಂದ ಧರಣಿ ಕೂರಬೇಕು ಅಂತ ನಿರ್ಧರಿಸಿದ್ದೇನೆ. ನನಗೆ ಆಗಿರುವಂಥದ್ದು ಮುಂದೆ ಯಾವ ನಿರ್ಮಾಪಕನಿಗೂ ಆಗಬಾರದು. ಅದಕ್ಕೆ ಇಂದಿನಿಂದ ನಾನು ಧರಣಿ ಕೂರುತ್ತಿದ್ದೇನೆ" ಎಂದು ನಿರ್ಮಾಪಕ ಎಂ.ಎನ್‌.ಕುಮಾರ್‌ ಹೇಳಿದ್ದಾರೆ. 


ಇದನ್ನೂ ಓದಿ: Sudeep: ಸುದೀಪ್ ಮೇಲಿನ ಆರೋಪಗಳ ಹಿಂದೆ ಸೂರಪ್ಪ ಬಾಬು ಕೈವಾಡ?  


"ನಾನು ಸುದೀಪ್‌ ಅವರ ಬಗ್ಗೆ ಎಲ್ಲೂ, ಯಾವತ್ತೂ, ಯಾವುದೇ ಕೆಟ್ಟ ಮಾತು ಆಡಿಲ್ಲ. ನನಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಅನ್ನೋದನ್ನ ಮಾತ್ರ ಹೇಳಿದ್ದೇನೆ. ಬೇರೆ ರೀತಿ ಹೋದಾಗ ನಿರ್ಮಾಪಕರಿಗೆ, ಅವರಿಗೆ ಸಂಬಂಧಪಟ್ಟವರಿಗೆ ಸಾಕಷ್ಟು ಸಮಸ್ಯೆ ಆಗುತ್ತೆ. ವಾಣಿಜ್ಯ ಮಂಡಳಿಯಲ್ಲೇ ಏನು ಸಮಸ್ಯೆ ಇದೆ ಅದನ್ನ ಬಗೆ ಹರಿಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶ. ನಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಮುಂದುವರಿಸುತ್ತೇನೆ" ಎಂದು ನಿರ್ಮಾಪಕ ಕುಮಾರ್‌ ಹೇಳಿದ್ದಾರೆ. 


ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಮ್. ಎನ್. ಕುಮಾರ್ ಜಟಾಪಟಿ ಪ್ರತಿಭಟನೆಯ ಹಂತಕ್ಕೆ ಬಂದು ನಿಂತಿದೆ. ಸುದೀಪ್ 21ನೇ ಎಸಿಎಮ್‌ಎಮ್ ಕೋರ್ಟ್‌ಗೆ ಹಾಜರಾಗಿ, ಎಮ್.ಎನ್.ಕುಮಾರ್ ವಿರುದ್ಧ ಕ್ರಿಮಿನಲ್ ಡಿಫಮೇಷನ್ ಕೇಸ್ ಹೂಡಿದ ಬೆನ್ನಲ್ಲೇ ವಿಚಾರ ಗಂಭೀರ ಸ್ವರೂಪ ಪಡೆಯುತ್ತಿದೆ.  


ಇದನ್ನೂ ಓದಿ: ನಟ ಸುದೀಪ್‌ ಕೋರ್ಟ್‌ ಮೆಟ್ಟಿಲೇರುತ್ತಿದ್ದಂತೆ ವರಸೆ ಬದಲಿಸಿದ ನಿರ್ಮಾಪಕರು!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.