ಇಡೀ ಜಗತ್ತು ಕರುನಾಡಿನ ಕಡೆ ಮುಖ ಮಾಡಿದೆ. ಕನ್ನಡ ಸಿನಿಮಾ ಒಂದು ಹೇಗಿದೆ ಅನ್ನೋ ಮಟ್ಟಿಗೆ ಹೈಪ್‌ ಕ್ರಿಯೇಟ್‌ ಆಗಿದೆ. ಇದಕ್ಕೆಲ್ಲಾ ಕಾರಣ ಬೇರೆ ಏನೂ ಅಲ್ಲ, 'ಕೆಜಿಎಫ್‌' ಚಾಪ್ಟರ್‌ 2. ಹೌದು, 'ಕೆಜಿಎಫ್‌-2' ರಿಲೀಸ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಜಗತ್ತಿನಾದ್ಯಂತ ಶುಭಾಶಯಗಳ ಮಹಾಪೂರ ಸಾಗರದಂತೆ ಹರಿದು ಬರುತ್ತಿದೆ. ಈ ಹೊತ್ತಲ್ಲೇ 'ದೊಡ್ಮನೆ'ಯಿಂದ ನಟ ಯಶ್‌, ಡೈರೆಕ್ಟರ್ ಪ್ರಶಾಂತ್‌ ನೀಲ್‌ ಹಾಗೂ‌ ನಿರ್ಮಾಪಕರಾದ ವಿಜಯ್‌ ಕಿರಂಗದೂರ್‌ ಅವರಿಗೆ ಶುಭಾಶಯ ಹರಿದು ಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: #BeastDisaster: ಬೀಸ್ಟ್ ಸಿನಿಮಾ ನೋಡಿ ಡಿಸಾಸ್ಟರ್ ಎಂದ ಫ್ಯಾನ್ಸ್!


ವರನಟ ಡಾ.ರಾಜ್‌ಕುಮಾರ್‌ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ಅವರು 'ಕೆಜಿಎಫ್‌-2' ತಂಡಕ್ಕೆ ಶುಭ ಹಾರೈಸಿದ್ದಾರೆ. ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತು ಶುಭಾಶಯ ಕೋರಿರುವ ನಟ ರಾಘಣ್ಣ, 'ಕೆ.ಜಿ.ಎಫ್-2 ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಮೊದಲು ಒಬ್ಬ ಕನ್ನಡಿಗನಾಗಿ ಹರಸುವುದು ನನ್ನ ಜವಾಬ್ದಾರಿ ಹಾಗೂ ಅಪ್ಪು ಅಣ್ಣನಾಗಿ ಶುಭ ಕೋರುವುದು ನನ್ನ ಕರ್ತವ್ಯ.' ಎಂದು ವಿಶ್‌ ಮಾಡಿದ್ದಾರೆ.


'ಕೆಜಿಎಫ್‌-2' ತಂಡಕ್ಕೆ ಒಳ್ಳೆಯದಾಗಲಿ ಎಂದು ಮನಸ್ಸು ತುಂಬಿ ಹಾರೈಸಿದ್ದಾರೆ.


ಇದನ್ನೂ ಓದಿ: ಅಪ್ಪಿ ತಪ್ಪಿಯೂ ನೀವು ಕೆಜಿಎಫ್ 2 ಚಿತ್ರ ನೋಡುವಾಗ ಹೀಗೆ ಮಾಡದಿರಿ !


ಅಲ್ಲದೆ 'ಕೆಜಿಎಫ್‌-2 ದೊಡ್ಡ ಸಕ್ಸಸ್‌ ಕಾಣಬೇಕು, ನಿಮ್ಮನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಜಗತ್ತಿನಾದ್ಯಂತ ಕನ್ನಡದ ಕಂಪು ಪಸರಿಸಿ' ಎಂದು ನಟ ರಾಘಣ್ಣ ಯಶ್‌, ಪ್ರಶಾಂತ್‌ ನೀಲ್‌ ಹಾಗೂ ವಿಜಯ್‌ ಕಿರಂಗದೂರ್‌ ಅವರಿಗೆ ಶುಭಾಶಯ ಕೋರಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.