ಬೆಂಗಳೂರು : ನಗುಮೊಗದ ದೊರೆಯ ಕೊನೆಯ ಸಿನಿಮಾ ಗಂಧದಗುಡಿಯ ʼಪುನೀತ್‌ ಪರ್ವʼ ಪ್ರೀ ರಿಲೀಸ್ ಇವೆಂಟ್ ಒಂದು ಹಬ್ಬದ ರೀತಿಯಲ್ಲಿ ಅದ್ಭುತವಾಗಿ ಜರುಗಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ನಟರು ಅಪ್ಪು ಅವರನ್ನು ಕೊಂಡಾಡಿದರು. ಪುನೀತ್‌ ಅವರ ಸ್ನೇಹಿತ ಖ್ಯಾತ ನಟ ರಾಣ ದಗ್ಗುಬಾಟಿ ಹಾಗೂ ಅಖಿಲ್‌ ಅಕ್ಕಿನೇನಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ನೆನಪುಗಳನ್ನು ಸ್ಮರಿಸಿದರು.


COMMERCIAL BREAK
SCROLL TO CONTINUE READING

ಹಲವು ವರ್ಷಗಳಿಂದ ಅಪ್ಪು ಜೊತೆ ಒಡನಾಟ ಹೊಂದಿರುವ ಬಾಹುಬಲಿ ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಪುನೀತ್‌ ಪರ್ವ ಕಾರ್ಯಕ್ರಮದಲ್ಲಿ ನೆಚ್ಚಿನ ಸ್ನೇಹಿತನ ಕುರಿತು ಮಾತನಾಡಿದರು. ಗಂಧದ ಗುಡಿ ಬಗ್ಗೆ ಅಪ್ಪು ಹೇಳಿದ್ದರು, ನಾನು ಇಷ್ಟೊಂದು ರಿಸ್ಕ್‌ ಯಾಕೆ ಅಂದ್ರ, ಅದಕ್ಕೆ ಅವರು, ಮುಂದಿನ ಯುವ ಜನಾಂಗಕ್ಕೆ ಇದೇಲ್ಲ ತಿಳಿಬೇಕು ಅಂದ್ರೆ ಬದಲಾವಣೆ ನಮ್ಮಿಂದ ಪ್ರಾರಂಭವಾಗಬೇಕು. ಅದಕ್ಕೆ ನಾವು ಮೊದಲು ರಿಸ್ಕ್‌ ತೆಗೆದುಕೊಳ್ಳಬೇಕು ಅಂತ ಹೇಳಿದ್ರು. ಗಂಧದಗುಡಿ ಸಿನಿಮಾ ಅವರ ಫೇವರಿಟ್‌, ಅವರು ಅದರಲ್ಲಿ ಜೀವಿಸಿದ್ದಾರೆ ಎಂದು ರಾಣಾ ಹೇಳಿದರು.


ಇದನ್ನೂ ಓದಿ: ತಾಯಿಗರ್ಭದಲ್ಲಿದ್ದಾಗಲೇ ಅಪ್ಪು-ನಾನು ಭೇಟಿಯಾಗಿದ್ದೇವು : ಯುವರತ್ನನನ್ನು ಸ್ಮರಿಸಿದ ನಟ ಸೂರ್ಯ..!


ಇನ್ನು ಖ್ಯಾತ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಮಗ ನಿಖಿಲ್‌ ಅಕ್ಕಿನೇನಿ ಮಾತನಾಡಿ, ಶಿವಣ್ಣ... ಅಪ್ಪು ಅವರನ್ನು ನಿಮ್ಮಲ್ಲಿ ಕಾಣುತ್ತಿದ್ದೇವೆ. ಅವರ ಚಿಂತನೆಗಳು ನಿಮ್ಮ ಕೆಲಸದ ಮೂಲಕ ನಡೆಯುತ್ತಿರಲಿ. ಅಪ್ಪು ಅವರು ನಮಗೆ ಮಾರ್ಗದರ್ಶಕರಾಗಿದ್ದಾರೆ. ಅವರು ನಮ್ಮ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ. ತೆಲುಗು ಚಿತ್ರರಂಗದ ಪರವಾಗಿ ಒಂದು ಮಾತು ಹೇಳೋಕೆ ಇಷ್ಟ ಪಡ್ತೀನಿ, ನಾವೇಲ್ಲ ಒಂದೇ, ಅಪ್ಪು ನಮ್ಮ ನೆನಪಿನಲ್ಲಿ ಸದಾ ನೆಲೆಸಿರುತ್ತಾರೆ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ