ಮಂಡ್ಯ: ರೆಬೆಲ್‌ ಸ್ಟಾರ್‌, ಮಂಡ್ಯದ ಗಂಡು ಅಂಬರೀಶ್ ಅವರಿಲ್ಲದ ಮೊದಲ ಹುಟ್ಟುಹಬ್ಬ ಇಂದು. 'ಅಂಬಿ' ಹುಟ್ಟುಹಬ್ಬದಂದು ಅವರ ಮನೆ ಮುಂದೆ ಜಮಾಯಿಸಿ ರಾತ್ರಿಯಿಂದಲೇ ಸಂಭ್ರಮದಿಂದ ಆಚರಿಸುತ್ತಿದ್ದ ಅಭಿಮಾನಿಗಳು ಇಂದು ಅವರಿಲ್ಲದೆ ನೋವಿನಲ್ಲಿ ಅಂಬಿ ಸಮಾಧಿ ಬಳಿ ತೆರಳಿ ನೆಚ್ಚಿನ ನಟನ ಜನ್ಮದಿನ ಆಚರಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಯತ್ತ ಆಗಮಿಸುತ್ತಿರುವ ಅಭಿಮಾನಿಗಳು ಅಂಬಿ ಸಮಾಧಿಗೆ ನಮಿಸುತ್ತಿದ್ದಾರೆ. ಇನ್ನೊಂದೆಡೆ ಸಮಾಧಿಯತ್ತ ಬರುತ್ತಿರುವ ಅಭಿಮಾನಿಗಳಿಗೆ ಊಟ ಹಾಗೂ ಸಿಹಿ ಹಂಚಲಾಗುತ್ತಿದೆ. 


ಮಂಡ್ಯದಲ್ಲಿಂದು ಸ್ವಾಭಿಮಾನಿ ವಿಜಯೋತ್ಸವ:
ಲೋಕಸಭಾ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರ ಎಂದೇ ಪರಿಗಣಿಸಲಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್, ಈ ಬಾರಿ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಸ್ವಾಭಿಮಾನಿ ವಿಜಯೋತ್ಸವದ ದಿನವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿಂದು ಸ್ವಾಭಿಮಾನಿ ವಿಜಯೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ.


ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತ:
ಪ್ರತಿ ವರ್ಷ ಅಂಬಿ ಹುಟ್ಟುಹಬ್ಬಕ್ಕೆ ಮೊದಲ ಗಿಫ್ಟ್ ನೀಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ಅಪ್ಪಾಜಿ ಹುಟ್ಟುಹಬ್ಬದಂದು ಟ್ವಿಟ್ಟರ್ ನಲ್ಲಿ, ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬ. ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿರುತ್ತದೆ ಎಂದು ಬರೆದುಕೊಂಡಿದ್ದಾರೆ.



ಮೇ 29 ಯಾವಾಗಲೂ ಮೊದಲಿನಂತೆ ಇರಲ್ಲ:
ನಿಮ್ಮ ಅನುಪಸ್ಥಿತಿ ತುಂಬಾ ಕಾಡುತ್ತಿದೆ ಮಾಮ... ಲವ್ ಯು ಆಲ್ವೇಸ್. ಮೇ 29 ಯಾವಾಗಲೂ ಮೊದಲಿನಂತೆ ಇರಲ್ಲ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.



ಜೀ ವಾಹಿನಿಯ ಪರವಾಗಿ ಸದಾ ಹಸನ್ಮುಖಿ,ಸ್ನೇಹಜೀವಿ, ಒರಟು ನುಡಿಯ ಮೃದುಹೃದಯದ ಸ್ವಭಾವಜೀವಿ,ಜಲೀಲ, ಕಲಿಯುಗದ ಕರ್ಣ,  ಅಂಬಿ ನಿಂಗ್ ವಯಸ್ಸುಆಯಿತು ಅಂತ ಹೇಳಿದವರಿಗೆ ಸೆಡ್ಡು ಹೊಡೆದ  ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು