ಬೆಂಗಳೂರು: ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿರುವ ದರ್ಶನ್‌ ಕುರಿತು ಒಂದಷ್ಟು ಸಂಗತಿಗಳು ಹರಿದಾಡುತ್ತಿವೆ. ಜೈಲು ಸೇರಿದ ಬಳಿಕ ಪವಿತ್ರಾ ಗೌಡ ಮೇಲೆ ದರ್ಶನ್‌ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮತ್ತೆ ಆಕೆಯ ಸಹವಾಸಕ್ಕೆ ಹೋಗಲ್ಲ ಎಂಬ ಮತುಗಳನ್ನು ಹೇಳಿದ್ದಾರಂತೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಜೈಲಿನಲ್ಲಿರುವ ದರ್ಶನ್‌ಗೆ ಪವಿತ್ರಾ ಸ್ನೇಹ ಮಾಡಿದ್ದೆ ತಪ್ಪು ಎಂದೆನಿಸಿದೆ ಅಂತೆ. ಆಕೆಯಿಂದಲೇ ತಾನು ಸೇರಿದೆ ಎಂಬ ಭಾವನೆ ಕಾಡ್ತಿದೆಯಂತೆ. ಇದರಿಂದ ಬೇಸರಗೊಂಡ ದರ್ಶನ್‌ ಜೈಲಿನಿಂದ ಹೊರ ಬಂದ ನಂತರ ಪವಿತ್ರಾಳ ಜೊತೆ ಮತ್ತೆ ಸೇರಲ್ಲ ಎಂದಿದ್ದಾರಂತೆ. 


ಇದನ್ನೂ ಓದಿ: 800 ಕೋಟಿ ಆಸ್ತಿಯ ಒಡತಿಯಾದ ಈ ನಟಿಗೆ ಇರೋದು ಒಬ್ಬಳೆ ಮಗಳು.. ವಿಚ್ಛೇದನ ವಿಚಾರಕ್ಕೆ ಸುದ್ದಿಯಲ್ಲಿರುವ ಈ ಚೆಲುವೆ ಯಾರು ಗೊತ್ತಾ? 


ನಟ ದರ್ಶನ್​​ ಅವರನ್ನು ಪವಿತ್ರಾಗೌಡ ಆತ್ಮೀಯ ಸ್ನೇಹಿತೆ ಸಮತಾ ಭೇಟಿ ಮಾಡಿದ್ದರು. ಅತ್ತ ಮಹಿಳಾ ಜೈಲಿನಲ್ಲಿರುವ ಪವಿತ್ರಾಗೆ ಇತ್ತ ಇರುವ ದರ್ಶನ್‌ ಬಗ್ಗೆಯೇ ಚಿಂತೆಯಂತೆ. ದರ್ಶನ್‌ ತನ್ನ ಮೇಲೆ ಬೇಸರಗೊಂಡಿದ್ದಾರಾ ಎಂಬ ಭಯವಂತೆ. ಇದೇ ಅಳಲನ್ನು ಪವಿತ್ರಾ ತನ್ನ ಗೆಳತಿ ಸಮತಾ ಬಳಿ ಹೇಳಿಕೊಂಡಿದ್ದಾರೆ.  ಹೀಗಾಗಿ ಸಮತಾ ದರ್ಶನ್‌ ಭೇಟಿ ಮಾಡಿ ಮಾಹಿತಿ ನೀಡುವುದಾಗಿ ಹೇಳಿದ್ದಾರಂತೆ ಎಂದು ಹೇಳಲಾಗಿದೆ. 


ಪವಿತ್ರಾ ಗೌಡ ಗೆಳತಿ ಸಮತಾ, ದರ್ಶನ್ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಸಮತಾ ಹತ್ತಿರ ದರ್ಶನ್‌ ಬೇಸರ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಪವಿತ್ರಾನಿಂದಲೇ ನಾನು ಜೈಲು ಸೇರಬೇಕಾಯಿತು ಎಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವಳನ್ನು ಇನ್ನೂ ಭೇಟಿಯಾಗಲ್ಲ, ಆಕೆಯ ಸಹವಾಸವೇ ಸಾಕು ಎಂದು ದರ್ಶನ್‌ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ: ಪವಿತ್ರಾಗೌಡ ನಟ ದರ್ಶನ್ 2ನೇ ಪತ್ನಿಯಲ್ಲ: ಪೊಲೀಸ್​​ ಕಮಿಷನರ್​ಗೆ ವಿಜಯಲಕ್ಷ್ಮೀ ಪತ್ರ! 


ದರ್ಶನ್‌ಆಡಿದ ಎಲ್ಲ ಮಾತುಗಳನ್ನು ಸಮತಾ ಬಂದು ಪವಿತ್ರಾ ಬಳಿ ಹೇಳಿದ್ದಾರಂತೆ. ಈ ಕಾರಣದಿಂದ ಪವಿತ್ರಾ ಗೌಡಗೆ ಟೆನ್ಷನ್‌ ಕಾಡ್ತಿದೆಯಂತೆ ಎಂದು ಹೇಳಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.