ಬೆಂಗಳೂರು : ಕನ್ನಡ ಚಿತ್ರರಂಗದ ಸಿನಿಮಾಗಳೆಲ್ಲವೂ ಈಗ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. ಮೊದಲು ಕೆಜಿಎಫ್ ಸೂಪರ್ ಹಿಟ್‌ ಆಗಿ ಹೊರ ರಾಜ್ಯಗಳಲ್ಲೂ ಕನ್ನಡ ಬಾವುಟ ಹಾರಿಸಿತ್ತು. 777 ಚಾರ್ಲಿ ಸಿನಿಮಾ ಕೂಡ ಹಿಟ್ ಆಗಿತ್ತು. ಇನ್ನು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಪ್ರಶಂಸೆಗೆ ಪಾತ್ರವಾಗಿದೆ. ಸದ್ಯ ರಿಷಬ್‌ ಶೆಟ್ಟಿ ಸಂದರ್ಶನ ಒಂದರಲ್ಲಿ ತಮಗು ಹಾಗೂ ನಟ ಜ್ಯೂ. ಎನ್‌ಟಿಆರ್‌ಗೂ ಇರುವ ಸಂಬಂಧದ ಕುರಿತು ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ತೆಲುಗು ರಾಜ್ಯಗಳಲ್ಲಿ ಇಂದು ಬಿಡುಗಡೆಯಾದ ಕಾಂತಾರ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇತ್ತೀಚೆಗೆ ಸಿನಿಮಾ ಪ್ರಮೋಷನ್‌ನಲ್ಲಿ ಪಾಲ್ಗೊಂಡಿದ್ದ ರಿಷಬ್‌ ತಮಗೂ ಹಾಗೂ ಎನ್‌ಟಿಆರ್ ನಡುವಿನ ಸಂಬಂಧದ ಕುರಿತು ಹೇಳಿದ ಮಾತು ಇಬ್ಬರೂ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಅಲ್ಲದೆ, ರಿಷಬ್ ಮತ್ತು ಎನ್.ಟಿ.ಆರ್.ಗೆ ಎಲ್ಲಿಂದ ಸಂಬಂಧ ಎಂದು ಯೋಚಿಸುವಂತೆ ಮಾಡಿದೆ. 


ಇದನ್ನೂ ಓದಿ: ʼತಿರುಪತಿ ಬೆಟ್ಟದಲ್ಲಿ ಕ್ರಷ್‌ ಆಗಿತ್ತು, ಅವನು ನಂಗೆ ಲಡ್ಡು ಕೊಟ್ಟಿದ್ದʼ


ಆದ್ರೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಎನ್.ಟಿ.ಆರ್ ತಾಯಿ ಶಾಲಿನಿ ಕರ್ನಾಟಕಕ್ಕೆ ಸೇರಿದವರು. ಅವರು ಕುಂದಾಪುರದವರು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ರಿಷಬ್ ಶೆಟ್ಟಿ ಕೂಡ ಅದೇ ಊರಿನವರು. ಪಿಂಕ್‌ವಿಲ್ಲಾ ಇಂಟರ್‌ವ್ಯೂವ್‌ನಲ್ಲಿ ತೆಲುಗು ಸಿನಿಮಾ ಇಂಡ್ರಸ್ಟ್ರಿಯಲ್ಲಿ ನಿಮಗೆ ಯಾವ ಹೀರೋ ಇಷ್ಟ ಎಂದು ಕೇಳಿದ ಪ್ರಶ್ನೆಗೆ ರಿಷಬ್ ಮಾತನಾಡುತ್ತಾ ಮಹೇಶ್ ಬಾಬು, ಪ್ರಭಾಸ್, ಅಲ್ಲು ಅರ್ಜುನ್ ಹೀಗೆ ಮುಂತಾದ ಸೂಪರ್ ಸ್ಟಾರ್‌ಗಳ ಹೆಸರು ಹೇಳಿದ್ದಾರೆ.


ಆದರೆ ನನಗೆ ಜೂನಿಯರ್ ಎನ್‌ಟಿಆರ್ ಎಂದರೆ ತುಂಬಾ ಇಷ್ಟ. ಎನ್‌ಟಿಆರ್‌ ತಾಯಿ ನಮ್ಮಗೆ ಊರಿನವರು, ಎನ್‌ಟಿಆರ್‌ ಕೂಡ ನಮ್ಮಕಡೆಯವರು ಎಂದು ಹೇಳಿದರು. ಅಲ್ಲದೆ, ಎನ್‌ಟಿಆರ್‌ ಸಿನಿಮಾಗೆ ಡೈರಕ್ಟ್ ಮಾಡ್ತೀರಾ ಎಂಬ ಪ್ರಶ್ನೆಗೆ, ಅದರ ಬಗ್ಗೆ ಯಾವತ್ತೂ ಯೋಚಿಸಲಿಲ್ಲ, ಅಂತಹ ಕಥೆ, ಕಾನ್ಸೆಪ್ಟ್ ಬಂದಾಗಲೇ ಅದು ಡಿಸೈಡ್ ಆಗುತ್ತೆ ಎಂದು ಉತ್ತರಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.