Kaveri protest: ಕಾವೇರಿ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಕರ್ನಾಟದ ಬಹುತೇಕ ಭಾಗದ ಜನರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಸ್ಟಾರ್‌ ನಟರು ಸಹ ಸೋಷಿಯಲ್‌ ಮಿಡಿಯಾ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಎಲ್ಲರೂ ಬೆಂಬಲ ಸೂಚಿಸುತ್ತಿರುವ ಈ ಹೋರಾಟದ ವಿಚಾರವಾಗಿ ಯಶ್‌ ಮೌನವಾಗಿದ್ದಾರೆ.  ತಮ್ಮ ಪ್ಯಾನ್‌ ಇಂಡಿಯಾ ಸಿನಿಮಾ ತಮಿಳುನಾಡಿನಲ್ಲೂ ಪ್ರದರ್ಶನವಾಗಲಿದೆ ಎನ್ನುವ ಕಾರಣಕ್ಕೆ ಯಶ್‌ ಸುಮ್ಮನಿದ್ದಾರೆ ಎನ್ನುವ ಚರ್ಚೆಯೂ ಶುರುವಾಗಿದೆ. 


ಇದನ್ನೂ ಓದಿ-ಸೌದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿದ ಇನಾಮ್ದಾರ ಚಿತ್ರ ನಟ ರಂಜನ್ ಛತ್ರಪತಿ


ಆದರೆ ಯಶ್‌ ಟ್ವೀಟ್‌ ಮಾಡಿದ ಮಾತ್ರಕ್ಕೆ ಎಲ್ಲ ಸಮಸ್ಯೆ ಬಗೆಹರಿಯುವುದಿಲ್ಲ, ಅನ್ನೋದು ಅವರ ಅಭಿಮಾನಿಗಳ ಅಭಿಪ್ರಾಯ. ಆದಾಗ್ಯೂ ಈ ತೀವ್ರಗೊಳ್ಳುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸದೇ ಇರುವುದು ಸೂಕ್ತವಲ್ಲ, ಕೊನೆಪಕ್ಷ ಕಾವೇರಿ ವಿವಾದದ ಬಗ್ಗೆ ತಮ್ಮ ನಿಲುವು ಏನು ಎನ್ನುವುದನ್ನಾದರೂ ತಿಳಿಸಬೇಕು ಎನ್ನುವುದು ಕೆಲವರ ವಾದ. ಇದೆಲ್ಲದರ ಮದ್ಯ ಯಶ್‌ ಅವರ ಹಳೇ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದೆ. 


ಕಳೆದ 5 ವರ್ಷಗಳ ಹಿಂದೆ  ಕಾವೇರಿ ಹಂಚಿಕೆ ವಿಚಾರದಲ್ಲಿ ಇಂಥದ್ದೇ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕರ್ನಾಟಕ ಬಂದ್‌ ಮಾಡಿ ಪ್ರತಿಭಟನೆ ಮಾಡಲಾಗಿತ್ತು. ಇದಕ್ಕೆ ಕನ್ನಡ ಸಿನಿರಂಗವೂ ಬೆಂಬಲ ಸೂಚಿಸಿತ್ತು. ಆದರೆ 'ಸಂತು ಸ್ಟ್ರೇಟ್ ಫಾರ್ವರ್ಡ್' ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶದಲ್ಲಿದ್ದವರು ಮಾತ್ರ ಈ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಅದೇ ಸಂದರ್ಭದಲ್ಲಿ ವಿದೇಶದಿಂದಲೇ ಯಶ್‌ ವಿಡಿಯೋ ಮೂಲಕ ಈ ವಿಚಾರವಾಗಿ ಮಾತನಾಡಿದ್ದರು. 


ಕನ್ನಡಿಗರು ನಾವು ಶಾಂತಿ ಪ್ರಿಯರು ಹಾಗಾಗಿ ಯಾವುದೇ ಕಾನೂನನ್ನು ಕೈಗೆ ತೆಗೆದುಕೊಳ್ಳದೇ ಶಾಂತಿಯಿಂದ ಪ್ರತಿಭಟನೆ ಮುಂದುವರೆಸಿ ಎಂದು ಹೇಳಿ ಕೊನೆಗೆ "ಹೊಟ್ಟೆಗೆ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರ ವಿಚಾರದಲ್ಲಿ ಬೆಂಬಲ ನೀಡಲೇಬೇಕು" ಎಂದು ಮನಮುಟ್ಟುವಂತಹ ಮಾತನ್ನು ಹೇಳುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ಆ ಹೇಳಿಕೆ ವೈರಲ್‌ ಆಗುತ್ತದೆ. 


ಇದನ್ನೂ ಓದಿ-ಸಿನಿರಂಗಕ್ಕೆ ಮತ್ತಿಬ್ಬರು ಸ್ಟಾರ್‌ ಪುತ್ರಿಯರ ಆಗಮನ..ಯಾರವರು ಅಂತೀರಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.